ನನ್ನ ಚಿತ್ರದಲ್ಲಿ ಬೇಕಾದರೆ ಇತನಿಗೆ ನಟಿಸಲು ಅವಕಾಶ ಕೊಡುವೆ; ಕರಣ್​ ಜೋಹರ್​ ಕಾಲೆಳೆದ ಕಂಗನಾ ರಣಾವತ್ | Kangana Ranaut

blank

ಮುಂಬೈ: ನಟಿ ಕಮ್​ ರಾಜಕಾರಣಿ ಕಂಗನಾ ರಣಾವತ್, ಸಿನಿಮಾ ವಿಚಾರಗಳಿಗೆ ಅಥವಾ ರಾಜಕೀಯ ಹೇಳಿಕೆಗಳ ಮೂಲಕ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಅಂತದ್ದೆ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

blank

ಹೌದು, ಇದೀಗ ಬಾಲಿವುಡ್​ ನಿರ್ಮಾಪಕ ಕಮ್​ ನಿರೂಪಕ ಕರಣ್​ ಜೋಹರ್ ಅವರ ಕಾಲೆಳೆಯುವ ಮೂಲಕ ಬಿ-ಟೌನ್​ನಲ್ಲಿ ಹಾಟ್​ ಟಾಪಿಕ್​ ಆಗಿದ್ದಾರೆ. ಇತ್ತೀಚಿಗೆ ನಡೆಸಿದ ಮೂಸಿಕಲ್​ ರಿಯಾಲಿಟಿ ಶೋನ ಇಂಡಿಯನ್​ ಐಡಲ್​ 15ರ ಕಾರ್ಯಕ್ರಮದಲ್ಲಿ ಕಂಗನಾ ಭಾಗವಹಿಸಿದ್ದರು.

ಇದನ್ನೂ ಓದಿ: ಉಜಿರೆ ಫ್ರೆಂಡ್ಸ್, ಎಸ್‌ಡಿಎಂ ತಂಡ ಪ್ರಥಮ : ವಿದ್ವತ್ ಟ್ರೋಫಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಈ ಕಾರ್ಯಕ್ರಮದ ಬಳಿಕ ಸಂದರ್ಶನದಲ್ಲಿ ಧರ್ಮ ಪ್ರೋಡಕ್ಷನ್​ಲ್ಲಿ ಕೆಲಸ ಮಾಡಲು ಇಷ್ಟ ಇದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ರಣಾವತ್​, ‘’ ನಾನು ಈ ರೀತಿ ಹೇಳುತ್ತಿದ್ದೇನೆಂದು ಕ್ಷಮಿಸಿ. ಕರಣ್​ ಜೋಹರ್​ ಬೇಕಾದರೆ ನನ್ನ ಚಿತ್ರದಲ್ಲಿ ನಟಿಸಲಿ, ಅವರಿಗೆ ಒಳ್ಳೆಯ ಪಾತ್ರ ನೀಡುವೆ. ಅದು ತುಂಬಾ ಒಳ್ಳೆಯ ಚಲನಚಿತ್ರವಾಗಿಲಿದೆ’’ ಎಂದು ನಿರ್ಮಾಪಕ ಕರಣ್​ ಜೋಹರ್​ ಕಾಲೆಳೆದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಕೆಲ ವೈಯಕ್ತಿಕ ಕಾರಣಗಳಿಂದ ನಟಿ ಕಂಗನಾ ಮತ್ತು ಕರಣ್​ ಜೋಹರ್​ಗೆ ಹೊಂದಣಿಕೆ ಇಲ್ಲ.ಈ ಹಿಂದೆ ಕೆಲ ವಿಚಾರಗಳಿಗೆ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುತ್ತಲೇ ಬಂದಿದ್ದಾರೆ. ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿನ ಕೆಲ ವಿಷಯಗಳನ್ನಿಟ್ಟುಕೊಂಡು ಕರಣ್​ನನ್ನು ಕಂಗನಾ, ‘’ಸ್ವಜನಪಕ್ಷಪಾತಿ’’ ಎಂದು ಕುಟಿಕಿದ್ದರು.

ಇದನ್ನೂ ಓದಿ: ರಶ್ಮಿಕಾರಿಂದ ‘ಸಿಕಂದರ್​’ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡ; ಕಾರಣ ಹೀಗಿದೆ.. | Rashmika Mandanna

blank

ಕಂಗನಾ ತನ್ನ ಮುಂಬರುವ ಚಲನಚಿತ್ರ ಎಮರ್ಜೆನ್ಸಿ (Emergency) ಸಿನಿಮಾ ಪ್ರಚಾರಕ್ಕಾಗಿ ಇಂಡಿಯನ್ ಐಡಲ್‌ನಲ್ಲಿದ್ದರು, ಚಿತ್ರದಲ್ಲಿ ಅವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ 17ರಂದು ಚಿತ್ರ ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್​)

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣ: ವರದಿ | Airport

 

 

 

Share This Article

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…