ಗಂಡ&ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ

Sul_Murder

ವಿಜಯವಾಣಿ ಸುದ್ದಿಜಾಲ ಸುಳ್ಯ
ತಾಲೂಕಿನ ನೆಲ್ಲೂರು&ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪತಿ, ಪತ್ನಿ ಹಾಗೂ ಪುತ್ರನ ನಡುವೆ ಕಲಹ ಏರ್ಪಟ್ಟು ಕೋಪದಲ್ಲಿ ಪತಿ, ಪತ್ನಿಯನ್ನು ಗುಂಡಿಟ್ಟು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡ ಟನೆ ಶುಕ್ರವಾರ ರಾತ್ರಿ ನಡೆದಿದೆ.

ವಿನೋದಾ (43) ಗುಂಡೇಟಿಗೆ ಬಲಿಯಾಗಿದ್ದು, ಪತಿ ರಾಮಚಂದ್ರ ಗೌಡ (52) ಆತ್ಮಹತೆ ಮಾಡಿಕೊಂಡವರು.

ಪತಿ, ಪತ್ನಿಯರ ನಡುವೆ ಆಗಾಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿದ್ದು ಪತಿ ರಾಮಚಂದ್ರ ಪತ್ನಿಯನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿಯೂ ಗಲಾಟೆ ನಡೆದಿತ್ತು. ಈ ವೇಳೆ ದಂಪತಿಯ ಮೂರು ಮಕ್ಕಳಲ್ಲಿ ಓರ್ವ ಪುತ್ರ ಪ್ರಶಾಂತನೂ ಮನೆಯಲ್ಲಿದ್ದು ತಂದೆ ಗಲಾಟೆ ಮಾಡುತ್ತಿದ್ದಾಗ ಪ್ರಶ್ನಿಸಿದ. ಈ ವೇಳೆ ಕುಪಿತನಾದ ತಂದೆ ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲೆಂದು ಪರವಾನಗಿ ಪಡೆದಿದ್ದ ಕೋವಿ ತೆಗೆದು ಮಗನಿಗೆ ಗುಂಡು ಹಾರಿಸುವುದಾಗಿ ಬೆದರಿಸಿದ. ಇದನ್ನು ನೋಡಿದ ಪತ್ನಿ ಮಗನ ರಕ್ಷಣೆಗಾಗಿ ಧಾವಿಸಿದರು. ಈ ವೇಳೆ ಪತಿಯ ಕೋವಿಯಿಂದ ಸಿಡಿದ ಗುಂಡು ಪತ್ನಿಯ ಎದೆಗೆ ತಾಗಿತು. ಆಕೆ ಸ್ಥಳದಲ್ಲೇ ಅಸು ನೀಗಿದರು. ಬಳಿಕ ಭೀತಿಗೊಂಡ ಪತಿ ರಾಮಚಂದ್ರ, ರಬ್ಬರ್​ ಶೀಟ್​ ಮಾಡಲೆಂದು ತಂದಿರಿಸಿದ ಆ್ಯಸಿಡ್​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಟನಾ ಸ್ಥಳಕ್ಕೆ ಐಜಿಪಿ ಅಮಿತ್​ ಸಿಂಗ್​ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಟನೆಯ ಮಾಹಿತಿ ಕಲೆ ಹಾಕಿದರು.

ಮೂರು ದಿನಗಳ ಹಿಂದಷ್ಟೇ ನಾಡಕೋವಿಗೆ ಮುಕ್ತಿ

ಕೆಲ ತಿಂಗಳ ಹಿಂದೆ ಪತಿ&ಪತ್ನಿ ನಡುವೆ ಈ ರೀತಿ ಕಲಹ ಏರ್ಪಟ್ಟಿತ್ತು. ಆ ವೇಳೆ ಪತಿ ರಾಮಚಂದ್ರ, ಪತ್ನಿ ವಿನೋದಾ ಹಾಗೂ ಮಕ್ಕಳಿಗೆ ಕೋವಿ ತೋರಿಸಿ, ಅವರನ್ನು ಅಟ್ಟಾಡಿಸಿ ಬೆದರಿಸಿದ್ದ. ಈ ಟನೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಕೋವಿಯನ್ನು ಮೂರು ತಿಂಗಳ ಅವಧಿಗೆ ಮುಟ್ಟುಗೋಲು ಹಾಕಲಾಗಿತ್ತು. ಮೂರು ದಿನಗಳ ಹಿಂದಷ್ಟೇ ಮುಟ್ಟುಗೋಲು ಹಾಕಿದ್ದ ಕೋವಿಯನ್ನು ಪತ್ನಿಯ ಅನುಮತಿ ಮೇರೆಗೆ ಬಿಡಿಸಿಕೊಂಡು ಮನೆಯಲ್ಲಿ ಇರಿಸಲಾಗಿತ್ತು. ಆದರೆ ಮತ್ತೆ ಪತಿ&ಪತ್ನಿಯರ ನಡುವೆ ಕಲಹ ಏರ್ಪಟ್ಟು ಇದೀಗ ಬ್ಬರ ಸಾವಿನಲ್ಲಿ ಅಂತ್ಯ ಕಂಡಿತು.

ತೋಟಕ್ಕೆ ಉರುಳಿದ ಕಾರು: ದಂಪತಿ ಪ್ರಾಣಾಪಾಯದಿಂದ ಪಾರು

ನಿಷೇಧಿತ ಪ್ಲಾಸ್ಟಿಕ್​ ಬಳಸಿದವರಿಗೆ ದಂಡ

 

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…