ಸುಳ್ಯ: ಆಲೆಟ್ಟಿ ಗ್ರಾಮದ ಕೂರ್ನಡ್ಕದಲ್ಲಿ ಒಬ್ಬಂಟಿ ಮಹಿಳೆ ತೇಜಕುಮಾರಿ ತನ್ನ ಸಾಕು ನಾಯಿಯೊಂದಿಗೆ ವಾಸವಾಗಿರುವ ಕುರಿತು 8 ತಿಂಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ಬಿತ್ತರಗೊಂಡ ವರದಿಗೆ ಫಲಶ್ರುತಿಯಾಗಿ ಬಡ ಮಹಿಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆ ನಿರ್ಮಿಸಲಾಗಿದ್ದು ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.

1.46 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಾತ್ಸಲ್ಯ ಎಂಬ ಹೆಸರಿನ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ವಯರಿಂಗ್, ವಿದ್ಯುತ್ ಸಂಪರ್ಕ, ಅನ್ನಪೂರ್ಣ ಇಲೆಕ್ಟಿಕಲ್ಸ್ ಮಾಲೀಕ ಮಧುಕಿರಣ್ ಕಲ್ಪಿಸಿಕೊಟ್ಟಿದ್ದಾರೆ. ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಅರ್ಚಕ ವೆಂಕಟ್ರಾಜ್ ಭಟ್ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ್ಡಡ್ಕ ಒಕ್ಕೂಟ ಅಧ್ಯಕ್ಷೆ ವಿಮಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್ ದೀಪ ಪ್ರಜ್ವಲಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎನ್.ಎ.ರಾಮಚಂದ್ರ, ಜನಜಾಗೃತಿ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರ್, ಸುಳ್ಯ ವಲಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ಬೂಡು ರಾಧಾಕೃಷ್ಣ ರೈ, ಯೋಜನಾಧಿಕಾರಿ ಮಾಧವ ಗೌಡ, ಪದ್ಮನಾಭ ಜೈನ್,ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರ ಅಧ್ಯಕ್ಷ ದಿನೇಶ್ ಬಡ್ಡಡ್ಕ, ಅನ್ನಪೂರ್ಣ ಇಲೆಕ್ಟ್ರಿಕಲ್ಸ್ ಮಾಲೀಕ ಮಧುಕಿರಣ್ ಸುಳ್ಯ, ಅಮರ ಕ್ರೀಡಾ ಕಲಾ ಸಂಘ ಗೌರವಾಧ್ಯಕ್ಷ ದೇವಿಪ್ರಸಾದ್, ಬಡ್ಡಡ್ಕ ವಲಯಾಧ್ಯಕ್ಷ ಮನೋಹರ, ಶೀಲಾವತಿ ಕಲ್ಲಪಳ್ಳಿ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಸೇವಾ ಪ್ರತಿನಿಧಿ ಶಕುಂತಲಾ ವರದಿ ವಾಚಿಸಿದರು. ಜಯಪ್ರಕಾಶ್ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳ ಕ್ಷೇತ್ರದಿಂದ 1.15 ಲಕ್ಷ ರೂ. ಧನಸಹಾಯ
ಮನೆ ನಿರ್ಮಾಣಕ್ಕೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ 1.15 ಲಕ್ಷ ರೂ. ನೀಡಲಾಗಿದ್ದು, ಹೆಚ್ಚುವರಿ ವೆಚ್ಚವನ್ನು ಸ್ಥಳೀಯ ಸಂಘ ಸದಸ್ಯರು ಭರಿಸಿ ಮನೆ ನಿರ್ಮಿಸಲಾಗಿದೆ. ಅಡುಗೆ ಪಾತ್ರೆ ಇನ್ನಿತರ ಸಾಮಗ್ರಿ ಕಲ್ಲಪಳ್ಳಿ ಯೋಜನೆ ಒಕ್ಕೂಟ ಸದಸ್ಯರು ಒದಗಿಸಿದ್ದಾರೆ. ಆಹಾರ ಪದಾರ್ಥ, ಬಟ್ಟೆಯನ್ನು ಪುತ್ತೂರು ದೀಪಾಶ್ರೀ ಪುನಶ್ವೇತನ ಕೇಂದ್ರ ವತಿಯಿಂದ ಕೊಡುಗೆಯಾಗಿ ನೀಡಿದ್ದಾರೆ.
ಹಂಚಿ ತಿಂದಾಗ ಆನಂದ ಅನಿರ್ವಚನೀಯ : ಭಸ್ಮಾಜೆ ಸುಬ್ರಹ್ಮಣ್ಯ ಭಟ್ ಬಣ್ಣನೆ