ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ

blank

ಕಾಸರಗೋಡು: ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳ ಇಲಾಖೆ ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಆಯೋಜಿಸಿತ್ತು.

ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ ಜಿಲ್ಲಾಮಟ್ಟದ ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್.ಬಿಂದು ಅಧ್ಯಕ್ಷತೆ ವಹಿಸಿದ್ದರು. ಕೌನ್ಸಿಲರ್ ವಂದನಾ ಬಾಲರಾಜ್, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸಹಾಯಕ, ರಿಜಿಸ್ಟ್ರಾರ್ ಎಂ.ಜಯಪ್ರಕಾಶ್, ಜಿಲ್ಲಾ ಗ್ರಾಹಕ ಸಮಿತಿ ಸದಸ್ಯ ಚಂದ್ರನ್ ಅರಂಗಡಿ ಮತ್ತಿತರರು ಮಾತನಾಡಿದರು.

ಗ್ರಾಹಕರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾದ ಸುಸ್ಥಿರ ಜೀವನ ಶೈಲಿಗೆ ಸರಿಯಾದ ಪರಿವರ್ತನೆ ಎಂಬ ವಿಷಯದ ಕುರಿತು ವಕೀಲ ರಮಾದೇವಿ ವಿಷಯ ಮಂಡಿಸಿದರು. ತಾಲೂಕು ಸರಬರಾಜು ಅಧಿಕಾರಿ ಜಿ.ಮಾಧವನ್ ಪೋತ್ತಿ ಸ್ವಾಗತಿಸಿದರು. ತಾಲೂಕು ಸರಬರಾಜು ಅಧಿಕಾರಿ ರಾಜೇಶ್ ಮಕ್ಕನಾಯ್ ವಂದಿಸಿದರು.

ಎಲ್.ಪಿ., ಯು.ಪಿ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಾಹಕರ ಹಕ್ಕುಗಳಿಗೆ ಸಂಬಂಧಿಸಿದ ಪೋಸ್ಟರ್ ಬರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಯುಪಿ ವಿಭಾಗದಲ್ಲಿ ಪ್ರಥಮ ಸಾರಂಗಿ ಸರಸ್ವತಿ(ಎಸಿ ಕೆಎನ್‌ಎಸ್ ಜಿಯುಪಿಎಸ್ ಮೇಲಂಕೋಟ್), ದ್ವಿತೀಯ ದೇವ ಸೂರ್ಯ ಎ.ವಿ.(ಮೇಲಂಕೋಟ್ ಶಾಲೆ), ಎಲ್‌ಪಿ ವಿಭಾಗದಲ್ಲಿ ಪ್ರಥಮ ಸ್ಥಾನ ದೇವಯಾನಿ ಪಿ.(ಯು.ಬಿ.ಎಂ.ಸಿ. ಶಾಲೆ, ಹೊಸದುರ್ಗ), ಎರಡನೇ ಸ್ಥಾನ ವೈದೇವ್ ಚಂದ್ರನ್(ಯು.ಬಿ.ಎಂ.ಸಿ. ಶಾಲೆ) ಪಡೆದರು.

ಮಾರ್ಚ್ 21ರಿಂದ ಎಸ್ಸೆಸೆಲ್ಸಿ ಪರೀಕ್ಷೆ-ಶಿಕ್ಷಣ ಇಲಾಖೆ ಸಜ್ಜು – ದಕ್ಷಿಣ ಕನ್ನಡ 92 ಕೇಂದ್ರಗಳು, 29,753 ಅಭ್ಯರ್ಥಿಗಳು

ನೆಲ್ಯಾಡಿಗೆ ಆಗಮಿಸಿದ ನಂದಿ ರಥಯಾತ್ರೆ

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…