ಹಿಲಿಯಾಣ ಗರೋಡಿ ನೇಮೋತ್ಸವ ಸಂಪನ್ನ

nema

ಗೋಳಿಯಂಗಡಿ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿ 12ನೇ ವರ್ಷದ ನೇಮೋತ್ಸವ, ಶಿವರಾಯನ ಕೋಲ, ಗೆಂಡಸೇವೆ ಇತ್ತೀಚೆಗೆ ಸಂಪನ್ನಗೊಂಡಿತು.

blank

ನೇಮೋತ್ಸವ ಪ್ರಯುಕ್ತ ಅಗಲು ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಹಿಲಿಯಾಣ ಎಜಿನಮನೆ ಕವಿತಾ ಉಮೇಶ್ ಶೆಟ್ಟಿ ಅವರಿಂದ ಅನ್ನಸಂತರ್ಪಣೆ ಸೇವೆ, ಸಂಜೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ ಹಿಲಿಯಾಣ ಗರೋಡಿಮನೆ ಕುಸುಮ ರಾಮ ಪೂಜಾರಿ ಕೆದೂರು, ಪ್ರೇಮಾ ಪ್ರಭಾಕರ ಪೂಜಾರಿ ಬೆಳಗಾಂ, ಯಶೋದಾ ಶಂಕರ ಪೂಜಾರಿ ಸಾಗರ ಅವರಿಂದ ಮಹಾ ಅನ್ನಸಂತರ್ಪಣೆ ಸೇವೆ, ಶಿವರಾಯನ ಕೋಲಸೇವೆ, ದರ್ಶನ, ಶಿವರಾಯನ ಗೆಂಡಸೇವೆ, ಪರಿವಾರ ದೈವಗಳ ಕೋಲ, ಗುರುವಾರ ನಾಲ್ಕು ಗ್ರಾಮದವರಿಂದ ಮಹಾಮಾರಿ ಸೇವೆ ನಡೆಯಿತು.

ಗರೋಡಿ ಗೌರವಾಧ್ಯಕ್ಷ ಹಳ್ಳಿ ವೆಂಕಟೇಶ್ ಭಟ್, ಎಚ್.ತಾರಾನಾಥ ಶೆಟ್ಟಿ ಹಿಲಿಯಾಣ, ಅಧ್ಯಕ್ಷ ವೈ ಕರುಣಾಕರ ಶೆಟ್ಟಿ ಯರುಕೋಣೆ, ಕಾರ್ಯದರ್ಶಿ ಸಂತೋಷ ಶೆಟ್ಟಿ ಹಿಲಿಯಾಣ, ಗರೋಡಿ ಅರ್ಚಕ ಶೀನ ಪೂಜಾರಿ, ಕರುಣಾಕರ ಪೂಜಾರಿ ಮತ್ತು ವೃಂದದವರು, ಕೆರ್ಜಾಡಿ ಗರೋಡಿ ಅರ್ಚಕ ದಯಾನಂದ ಪೂಜಾರಿ, ನೇಮೋತ್ಸವದ ಪ್ರಮುಖ ಸೇವಾದಾರರು, ಭಕ್ತರು ಪಾಲ್ಗೊಂಡಿದ್ದರು.

ಸಂಸ್ಥೆಯಿಂದ ರಂಗಭೂಮಿಗೆ ಅಪಾರ ಕೊಡುಗೆ

ಸಂಪರ್ಕ ರಸ್ತೆ ಹೊಂಡಮಯ

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank