More

    ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು?; ಇಲ್ಲಿದೆ ಶ್ವಾನಭವಿಷ್ಯ!

    ಮಂಡ್ಯ: ಗಿಳಿ ಶಕುನ ಹೇಳಿದಂತೆ ಇಲ್ಲಿ ಶ್ವಾನ ಭವಿಷ್ಯ ನುಡಿದಿದೆ. ಅರ್ಥಾತ್, ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ನಾಯಿಯೊಂದು ಸೂಚ್ಯವಾಗಿ ಹೇಳಿದೆ. ಮಂಡ್ಯ ಜಿಲ್ಲೆಯ ಅಶೋಕನಗರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ಶ್ರೀಕಾಲಭೈರವನ ಭಕ್ತರಾಗಿರುವ ಗೋಪಿ ಎಂಬುವರು ಸಾಕಿರುವ ಶ್ವಾನ ಈ ಭವಿಷ್ಯವನ್ನು ತಿಳಿಸಿದೆ. ಬಸವರಾಜ ಬೊಮ್ಮಾಯಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಪೈಕಿ ಯಾರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಈ ಶ್ವಾನದ ಬಳಿ ಕೇಳಲಾಗಿತ್ತು.

    ಇದನ್ನೂ ಓದಿ: ಒಬ್ಬ 14 ಫ್ಲ್ಯಾಟ್​ಗಳ ಒಡೆಯ, ಇನ್ನೊಬ್ಬ 15 ಸೈಟ್​ಗಳ ಮಾಲೀಕ: ಇಲ್ಲಿದೆ ಭ್ರಷ್ಟರ ಆಸ್ತಿ ವಿವರ!

    ಮನೆಯ ದೇವರ ಕೋಣೆಯಲ್ಲಿ ಈ ಮೂವರೂ ಸಿಎಂ ಆಕಾಂಕ್ಷಿಗಳ ಫೋಟೋ ಇಟ್ಟು, ನಂತರ ಭೈರವ ಹೆಸರಿನ ಈ ಶ್ವಾನಕ್ಕೆ ಪೂಜೆ ಮಾಡಿದ ಕುಟುಂಬಸ್ಥರು, ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದರು. ತಿರುಗಿಸಿ ಇಟ್ಟಿದ್ದ ಈ ಮೂವರ ಫೋಟೋಗಳ ಪೈಕಿ ಕುಮಾರಸ್ವಾಮಿಯ ಫೋಟೋ ಕಚ್ಚಿ ತಂದ ಶ್ವಾನ, ಆ ಮೂಲಕ ಕುಮಾರಸ್ವಾಮಿ ಮುಂದಿನ ಸಿಎಂ‌ ಎಂಬ ಸೂಚನೆ ನೀಡಿದೆ.

    ಇದನ್ನೂ ಓದಿ: ಬಿಜೆಪಿ ಟಿಕೆಟ್ ಮಿಸ್, ಕೇಸರಿ v/s ಕೆಂಪು: ಪಕ್ಷೇತರ ಸ್ಪರ್ಧೆಗೆ ನುಗ್ಗಿದ ‘ಗೂಳಿ’ಹಟ್ಟಿ ಶೇಖರ್

    ನಾಯಿಗೆ ಭೈರವ ಎಂದು ಹೆಸರಿಟ್ಟು ದೇವರಂತೆ ಪೂಜಿಸುವ ಈ ಮನೆಯವರು, ಪ್ರತಿವಾರ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ನಾಯಿಗೂ ಪೂಜೆ ಸಲ್ಲಿಸುತ್ತಾರೆ. ಈ ಹಿಂದೆ ಇದೇ ಶ್ವಾನ ನೀಡಿದ ಸೂಚನೆಗಳು ನಿಜ ಆಗಿವೆ ಎನ್ನುವ ಈ ಮನೆಯವರು, ತಮ್ಮ ನಾಯಿಗೆ ವಿಶೇಷ ಶಕ್ತಿ ಇದೆ ಎಂದು ನಂಬಿದ್ದಾರೆ.

    ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts