ಉಗ್ರ ತಹವ್ವೂರ್​ ರಾಣಾನನ್ನು ಭಾರತಕ್ಕೆ ಕರೆತರಲು ಸರ್ಕಾರ ಖರ್ಚು ಮಾಡಿದ್ದೆಷ್ಟು ಗೊತ್ತೆ!: ಇಲ್ಲಿದೆ ಮಾಹಿತಿ | Tahawwur Rana

blank

Tahawwur Rana : 26/11 ಮುಂಬೈ ದಾಳಿಯ ಮಾಸ್ಟರ್​ಮೈಂಡ್​ ಉಗ್ರ ತಹವ್ವೂರ್​ ರಾಣಾನನ್ನು 16 ವರ್ಷಗಳ ಬಳಿಕ ಭಾರತಕ್ಕೆ ಕರೆ ತರಲಾಯಿತು. ಸದ್ಯಕ್ಕೆ ಇತನಿಗೆ ನ್ಯಾಯಾಲಯವು 18 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿದೆ. ಈ ಆರೋಪಿಯನ್ನು ಭಾರತಕ್ಕೆ ಮರಳಿ ಕರೆತರುವುದು ಅಷ್ಟೇ ಸೂಕ್ಷ್ಮವೂ ಆಗಿತ್ತು ಹಾಗೂ ಅಷ್ಟೇ ದುಬಾರಿಯೂ ಆಗಿತ್ತು. ತಹವ್ವೂರ್ ರಾಣಾನನ್ನು ಭಾರತಕ್ಕೆ ಮರಳಿ ಕರೆತರಲು ಸರ್ಕಾರ ಎಷ್ಟು ಹಣವನ್ನು ಖರ್ಚು ಮಾಡಿದೆ ಎಂಬುದು ನೋಡೋಣ.

ಸರ್ಕಾರ ಇತನಿಗೆ ಖರ್ಚು ಮಾಡಿದ್ದೆಷ್ಟು..?

ವರದಿಗಳ ಪ್ರಕಾರ, ಉಗ್ರ ರಾಣಾನನ್ನು ಭಾರತಕ್ಕೆ ಕರೆತೆರಲು ಗಲ್ಫ್​ ಜಿ-550 ಐಷರಾಮಿ ಚಾರ್ಟರ್​ ವಿಮಾನವನ್ನು ಬಳಸಲಾಗಿದೆ.ಇದರ ಬೆಲೆ ಗಂಟೆಗೆ 9 ಲಕ್ಷ ರೂ. ಈ ಚಾರ್ಟರ್​ ವಿಮಾನವನ್ನು ಇತನನ್ನು ಕರೆತರುವ ಸಲುವಾಗಿ ಬಾಡಿಗೆ ಪಡೆಯಲಾಗಿದೆ.

ಈ ವಿಮಾನದಲ್ಲಿ ಅಮೆರಿಕದ ಮಿಯಾಮಿಯಿಂದ ಭಾರತಕ್ಕೆ ಕರೆತರಲಾಯಿತು. ವಿಮಾನವು ಬುಧವಾರ (ಸ್ಥಳೀಯ ಸಮಯ) ಬೆಳಗಿನ ಜಾವ 2:15 ರ ಸುಮಾರಿಗೆ ಮಿಯಾಮಿಯಿಂದ ಹೊರಟು ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿತು. ಇಲ್ಲಿ ವಿಮಾನಕ್ಕೆ ಸುಮಾರು 11 ಗಂಟೆಗಳ ವಿರಾಮ ನೀಡಲಾಯಿತು ಮತ್ತು ಮರುದಿನ ಗುರುವಾರ, ಅದು ಟೇಕ್ ಆಫ್ ಆಗಿ ಸಂಜೆ 6:22 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿದಿದೆ.

ಈ ಸಂಪೂರ್ಣ ಸಮಯ ಪೂರ್ಣಗೊಳಿಸಲು ಬರೊಬ್ಬರಿ 40 ಗಂಟೆಗಳ ಸಮಯ ಹಿಡಿದಿದೆ. ಈ ಗಂಟೆಗಳ ಪ್ರಕಾರ ಉಗ್ರ ರಾಣಾನನ್ನು ಭಾರತಕ್ಕೆ ಕರೆತರಲು ವಿಮಾನವೆಚ್ಚ ಮಾತ್ರವೇ 4 ಕೋಟಿ ರೂ. ಅಧಿಕ ಖರ್ಚಾಗಿದೆ ಎಂದು ವರದಿ ಉಲ್ಲೇಖಿಸಿವೆ.

ಅಲ್ಲದೆ, ಯಾರಾದರೂ ಮಿಯಾಮಿಯಿಂದ ದೆಹಲಿಗೆ ಸಾಮಾನ್ಯ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರೆ, ಅದಕ್ಕೆ 4 ಲಕ್ಷ ರೂ. ವೆಚ್ಚವಾಗುತ್ತದೆ. ಈ ರೀತಿ ನೋಡಿದರೆ, ತಹವ್ವೂರ್ ಅನ್ನು ಮರಳಿ ತರಲು ಭಾರತ ಸರ್ಕಾರ 100 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ.

ಇಷ್ಟೊಂದು ಖರ್ಚು ಮಾಡಿದ್ದೇಕೆ..?

ಒಬ್ಬ ಭಯೋತ್ಪಾದಕನನ್ನು ವಾಪಸ್ ಕರೆತರಲು ಇಷ್ಟೊಂದು ದೊಡ್ಡ ಮೊತ್ತವನ್ನು ಏಕೆ ಖರ್ಚು ಮಾಡಲಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಇದಕ್ಕೆ ಸರಳ ಉತ್ತರವೆಂದರೆ ಭದ್ರತಾ ದೃಷ್ಟಿಕೋನ. ವಾಸ್ತವವಾಗಿ ತಹವೂರ್ ಒಬ್ಬ ಉನ್ನತ ಮಟ್ಟದ ಭಯೋತ್ಪಾದಕ. ಅಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಅಮೆರಿಕ ಎರಡೂ ಅವನನ್ನು ಮರಳಿ ಕರೆತರಲು ಹೆಚ್ಚಿನ ಎಚ್ಚರಿಕೆ ವಹಿಸಿವೆ.(ಏಜೆನ್ಸೀಸ್​)

EX Girlfriend​ಗೆ ನೂರಾರು ಗಿಫ್ಟ್​ ಕಳುಹಿಸಿ ಸೇಡು ತೀರಿಸಿಕೊಂಡ ಗೆಳೆಯ!; ಹೇಗೆ ಗೊತ್ತಾ?

ಪೊಲೀಸರು ನಿಮ್ಮನ್ನು ಬಂಧಿಸಲು ಮನೆಗೆ ಬಂದ್ರೆ ಏನು ಮಾಡಬೇಕು?; ನಿಮ್ಮ ಹಕ್ಕುಗಳೇನು!: ಇಲ್ಲಿದೆ ಮಾಹಿತಿ | Arrest

Share This Article

ನಾಗರಹಾವು ಕಚ್ಚಿದ್ರೆ ತಕ್ಷಣ ಈ ರೀತಿ ಮಾಡಿ… ಇಲ್ಲವಾದಲ್ಲಿ ಮೂರೇ ನಿಮಿಷಕ್ಕೆ ಪ್ರಾಣ ಹೋಗುತ್ತೆ! Cobra Snake

Cobra Snake : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು…

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…