ಚಲಿಸುವ ರೈಲಿನಿಂದ ಫೋನ್ ಬಿದ್ದು ಹೋದ್ರೆ ಚಿಂತಿಸಬೇಡಿ… ಈ ರೀತಿ ಮಾಡಿ, ಮತ್ತೆ ಮೊಬೈಲ್ ನಿಮ್ಮ ಕೈಸೇರುತ್ತೆ! Mobile

Mobile

Mobile : ರೈಲಿನಲ್ಲಿ ಪ್ರಯಾಣಿಸದವರು ತುಂಬಾನೇ ಕಡಿಮೆ ಅಂದರೆ ಅತಿಶಯೋಕ್ತಿ ಅಲ್ಲ. ದೂರದ ಪ್ರಯಾಣಕ್ಕೆ ಮಾತ್ರವಲ್ಲದೆ ಕಚೇರಿ ಮತ್ತು ಕಾಲೇಜಿಗೆ ಹೋಗಲು ಸಹ ರೈಲುಗಳನ್ನು ಅವಲಂಬಿಸಿರುವ ಜನರಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವಾಗ, ಅನೇಕ ಜನರು ಕಿಟಕಿಯ ಸೀಟಿನಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರು ರೈಲಿನ ಬಾಗಿಲಿನ ಹತ್ತಿರ ಕುಳಿತು ಹೊರಗಿನ ದೃಶ್ಯಗಳನ್ನು ಆನಂದಿಸುತ್ತಾರೆ.

blank

ಆದರೆ, ಬಾಗಿಲಿನ ಬಳಿ ಪ್ರಯಾಣಿಸುವುದು ಒಳ್ಳೆಯದಲ್ಲ. ಕಿಟಕಿ ಅಥವಾ ಬಾಗಿಲಿನ ಬಳಿ ನಿಂತಾಗ ನಮ್ಮ ಸ್ಮಾರ್ಟ್‌ಫೋನ್ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಕಿಟಕಿ ಅಥವಾ ಬಾಗಿಲಿನಿಂದ ಮೊಬೈಲ್​ ಕೆಳಗೆ ಬಿದ್ದರೆ ಏನು ಮಾಡಬೇಕು? ಅಂತಹ ಪರಿಸ್ಥಿತಿಯಲ್ಲಿ ಬಹುತೇಕ ಮಂದಿಗೆ ಏನು ಮಾಡಬೇಕೆಂದು ತಿಳಿದಿಲ್ಲ.

ಕೆಲವರು ತಕ್ಷಣ ರೈಲಿನಲ್ಲಿರುವ ತುರ್ತು ಸರಪಳಿಯನ್ನು ಎಳೆಯುತ್ತಾರೆ. ಆದರೆ ಇದು ರೈಲಿನಲ್ಲಿರುವ ಎಲ್ಲ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುತ್ತದೆ. ಅಲ್ಲದೆ, ಭಾರತೀಯ ರೈಲ್ವೆ ಕಾಯ್ದೆಯ ಪ್ರಕಾರ, ಅನಗತ್ಯವಾಗಿ ಸರಪಳಿಯನ್ನು ಎಳೆಯುವುದು ಶಿಕ್ಷಾರ್ಹ ಅಪರಾಧ. ಶಿಕ್ಷೆಯು ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ಇಂಜೆಕ್ಷನ್​ ಮಹಿಮೆಯಂತೆ! ತನ್ನ ಸೌಂದರ್ಯ ರಹಸ್ಯ ಕೆದಕಿದ ನೆಟ್ಟಿಗನಿಗೆ ಖುಷ್ಬೂ ಕೊಟ್ಟ ತಿರುಗೇಟು ಹೀಗಿತ್ತು… Khushbu Sundar

ಚಲಿಸುವ ರೈಲಿನಿಂದ ನಿಮ್ಮ ಫೋನ್ ಬಿದ್ದರೆ, ಭಯಪಡಬೇಡಿ. ನಂತರ, ನಿಮ್ಮ ಫೋನ್ ಎಲ್ಲಿ ಕಳೆದುಹೋಗಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಕೆಲವು ಚಿಹ್ನೆಗಳಿಗೆ ಗಮನ ಕೊಡಿ. ರೈಲು ಹಾದುಹೋದ ಕೊನೆಯ ನಿಲ್ದಾಣವನ್ನು ನೆನಪಿಡಿ. ನಂತರ, ಹೊರಗೆ ಗೋಚರಿಸುವ ಕಪ್ಪು ಮತ್ತು ಹಳದಿ ರೈಲು ಕಂಬದ ಮೇಲಿನ ಸಂಖ್ಯೆಗೆ ಗಮನ ಕೊಡಿ. ಹಳಿಯ ಮಾರ್ಗದಲ್ಲಿರುವ ಪ್ರತಿಯೊಂದು ವಿದ್ಯುತ್ ಕಂಬದ ಮೇಲೆ ನಿರ್ದಿಷ್ಟ ಸಂಖ್ಯೆಯನ್ನು ಬರೆಯಲಾಗಿದೆ. ಆದ್ದರಿಂದ, ಫೋನ್ ಬಿದ್ದ ಸ್ಥಳದ ಬಳಿ ಇರುವ ಕಂಬದ ಸಂಖ್ಯೆಗೆ ಗಮನ ಕೊಡಿ. ಈ ಮಾಹಿತಿಯನ್ನು ಬಳಸಿಕೊಂಡು, ಫೋನ್ ಬಿದ್ದ ಸ್ಥಳವನ್ನು ನೀವು ಗುರುತಿಸಬಹುದು.

ನಿಮ್ಮ ಜೊತೆ ಇರುವ ಯಾರಿಂದಲಾದರೂ ಮೊಬೈಲ್ ಫೋನ್ ತೆಗೆದುಕೊಂಡು, ರೈಲ್ವೆ ರಕ್ಷಣಾ ಪಡೆ ಸಹಾಯವಾಣಿ ಸಂಖ್ಯೆ 182ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು. ಫೋನ್‌ನ ಮಾದರಿ, ಬ್ರ್ಯಾಂಡ್, ಸಂಖ್ಯೆ, ಫೋನ್ ಬಿದ್ದ ಸಮಯ ಮತ್ತು ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಿ. ಇದು ಫೋನ್ ಅನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಆರ್‌ಪಿಎಫ್ ಅಧಿಕಾರಿಗಳು ಫೋನ್ ಅನ್ನು ಕಂಡುಕೊಂಡರೆ, ಅವರು ಅದನ್ನು ಹತ್ತಿರದ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತಾರೆ ಮತ್ತು ನಿಮಗೆ ತಿಳಿಸುತ್ತಾರೆ. ಬಳಿಕ ನೀವು ಆ ಫೋನ್​ ಅನ್ನು ಮರಳಿ ಪಡೆಯಬಹುದು. (ಏಜೆನ್ಸೀಸ್​)

ಇಂಜೆಕ್ಷನ್​ ಮಹಿಮೆಯಂತೆ! ತನ್ನ ಸೌಂದರ್ಯ ರಹಸ್ಯ ಕೆದಕಿದ ನೆಟ್ಟಿಗನಿಗೆ ಖುಷ್ಬೂ ಕೊಟ್ಟ ತಿರುಗೇಟು ಹೀಗಿತ್ತು… Khushbu Sundar

ರೋಹಿತ್​ ಪುತ್ರಿ ಸಮೈರಾ ಈ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿ: ಸ್ಕೂಲ್​ ಫೀಸ್​ ಬಗ್ಗೆ ತಿಳಿದ್ರೆ ಹುಬ್ಬೇರೋದು ಖಚಿತ! Rohit Sharma

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank