ಅಹಮದಾಬಾದ್: ನಿನ್ನೆ (ಮೇ.22) ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಮತ್ತು ಆರ್ಆರ್ ನಡುವಿನ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಪಡೆ 4 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿ, ಕ್ವಾಲಿಫೈರ್ 2 ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ, ಇತ್ತ ಕೇವಲ ಶೇ. 1 ಚಾನ್ಸ್ ಇದ್ದಾಗಲೂ ಎಲ್ಲರ ನಿರೀಕ್ಷೆ ಮೀರಿಸಿ ಐಪಿಎಲ್ ಪ್ಲೇಆಫ್ ಹಂತಕ್ಕೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸತತ 17ನೇ ಪ್ರಯತ್ನದಲ್ಲೂ ಕಪ್ ಗೆಲುವಿನ ಕನಸನ್ನು ಕನಸಾಗಿಯೇ ಉಳಿಸಿಕೊಂಡಿದೆ.
ಇದನ್ನೂ ಓದಿ: ಐಪಿಎಲ್ಗೆ ದಿನೇಶ್ ಕಾರ್ತಿಕ್ ಗುಡ್ಬೈ! ಭಾವುಕರಾದ ಡಿಕೆಗೆ ವಿರಾಟ್ ಕೊಹ್ಲಿ ಸಾಂತ್ವಾನ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ಪಡೆ ಆರ್ಸಿಬಿಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ, ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡರೂ ರಜತ್ ಪಾಟೀದಾರ್ (34 ರನ್, 22 ಎಸೆತ, 2 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ (33 ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ಮಹಿಪಾಲ್ ಲೊಮ್ರೊರ್ (32 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಸಂಘಟಿತ ಬ್ಯಾಟಿಂಗ್ನೊಂದಿಗೆ 8 ವಿಕೆಟ್ಗೆ 172 ರನ್ಗಳನ್ನು ಕಲೆಹಾಕುವಲ್ಲಿ ಶಕ್ತವಾಯಿತು.
ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆರ್ಆರ್ ಪಡೆಗೆ ಯಶಸ್ವಿ ಜೈಸ್ವಾಲ್ (45 ರನ್, 30 ಎಸೆತ, 8 ಬೌಂಡರಿ) ಹಾಗೂ ರಿಯಾನ್ ಪರಾಗ್ (36 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19 ಓವರ್ಗಳಲ್ಲಿ 6 ವಿಕೆಟ್ಗೆ 174 ರನ್ಗಳಿಸಿ, ಆರ್ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿತು. ಈ ಮ್ಯಾಚ್ ಕೈತಪ್ಪುತ್ತಿದೆ ಎಂಬುದು ತಿಳಿಯುತ್ತಿದ್ದಂತೆ ವಿರಾಟ್ ಮತ್ತು ಆರ್ಸಿಬಿ ತಂಡದ ಆಟಗಾರರು ಭಾರೀ ಬೇಸರವನ್ನು ಹೊತ್ತು, ಪೆವಿಲಿಯನ್ ಕಡೆ ಮುಖಮಾಡಿದರು.
ಇದನ್ನೂ ಓದಿ: IPL 2024: ಎಲಿಮಿನೇಟರ್ ಪಂದ್ಯದಲ್ಲಿ RR ವಿರುದ್ಧ RCB ಸೋಲಿಗೆ 5 ಪ್ರಮುಖ ಕಾರಣಗಳು ಹೀಗಿವೆ…
ಒಂದೆಡೆ ತಮ್ಮ ಕಟ್ಟ ಹಾಗೂ ನಿಷ್ಠಾವಂತ ಅಭಿಮಾನಿಗಳ ಮಹಾದಾಸೆಯನ್ನು ಈ ಬಾರಿಯೂ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಆರ್ಸಿಬಿ ತಂಡದವರು ಅತೀವ ನೋವಿನಲ್ಲಿ ಲೀಗ್ನಿಂದ ಹೊರನಡೆದರೆ, ಮತ್ತೊಂದೆಡೆ ಕಣ್ಣಿಗೆ ಕಾಣದಂತೆ ಪರಾರಿಯಾಗಿದ್ದ ಸಿಎಸ್ಕೆ ತಂಡದ ಕೆಲವು ಅಭಿಮಾನಿಗಳು ಮತ್ತೇ ಟ್ರೋಲ್ ಮಾಡುವ ಮೂಲಕ ಪತ್ತೆಯಾಗಿದ್ದಾರೆ. ಆದರೆ, ಪಾಸಿಟಿವ್ ಆಗಿ ಅಲ್ಲ, ಬದಲಿಗೆ ನೆಗೆಟಿವ್ ಆಗಿ. ಸದ್ಯ ಈ ಬೆಳವಣಿಗೆ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
https://x.com/saravanvelu2/status/1793353226432975296
https://x.com/you_get_06/status/1793361762424664352
ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಸೋಲನ್ನು ಸಂಭ್ರಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಅಭಿಮಾನಿಗಳು, ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ವ್ಯಾಪಕವಾಗಿ ಟೀಕಿಸಿದೆ. ಇದನ್ನು ಗಮನಿಸಿದ ಆರ್ಸಿಬಿ ಫ್ಯಾನ್ಸ್, ಭಾರೀ ಆಕ್ರೋಶ ಹೊರಹಾಕಿದ್ದು, ‘ನಿಮ್ಮಂತ ಅಭಿಮಾನಿಗಳಿಗೆ ಏನೂ ಹೇಳಬೇಕೋ ತಿಳಿಯದು’. ‘ನೀವಂತೂ ಗೆಲ್ಲಲು ಸಾಧ್ಯವಾಗಲಿಲ್ಲ’. ‘ಅದಕ್ಕೆ ಇಂತಹ ಕೀಳುಮಟ್ಟಕ್ಕೆ ಇಳಿಯುವ ಅವಶ್ಯಕತೆ ಇತ್ತಾ?, ಇದು ನಮ್ಮಲ್ಲಿ ಇರುವಂತಹ ಒಗ್ಗಟ್ಟಿನ ಪ್ರದರ್ಶನ ನಿಮ್ಮಲ್ಲಿ ಇಲ್ಲ ಎಂಬುದನ್ನು ತೋರಿಸಿದೆ. ಇದೇನಾ ನಿಮ್ಮ ಸಂಸ್ಕೃತಿ ಎಂದು ಛೀಮಾರಿ ಹಾಕಿದ್ದಾರೆ. ಸದ್ಯ ಈ ಟ್ರೋಲ್, ಮೀಮ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ,(ಏಜೆನ್ಸೀಸ್).
https://x.com/vakugu/status/1793475877344616814
ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…
ಲೀಗ್ನಿಂದ ಹೊರಬಿದ್ದ MIಗೆ ನೀತಾ ಅಂಬಾನಿ ಕ್ಲಾಸ್; ರೋಹಿತ್, ಹಾರ್ದಿಕ್ಗೆ ವಿಶೇಷ ಕಿವಿಮಾತು!