More

    ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ?: ಕುತೂಹಲ ಕೆರಳಿಸಿದೆ ಸಿಎಂ ಬಿಎಸ್​ವೈ ದೆಹಲಿ ಭೇಟಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ದೆಹಲಿಗೆ ತೆರಳಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.ಈ ವಿಚಾರ ಈಗ ಸಚಿವ ಸಂಪುಟ ಕುರಿತ ಚರ್ಚೆಗೆ ಇನ್ನಷ್ಟು ಗ್ರಾಸ ಒದಗಿಸಿದೆ. ಸಚಿವ ಸಂಪುಟ ವಿಸ್ತರಣೆಯಾಗುವುದೋ ಇಲ್ಲಾ ಪುನಾರಚನೆಯೇ ಆಗಲಿದೆಯೋ ಎಂಬ ಮಾತು ಕೇಳತೊಡಗಿದೆ.

    ಬಿಎಸ್​ವೈ ಅವರು ನಡ್ಡಾ ಅವರೊಂದಿಗೆ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರ ಚರ್ಚಿಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾದಲ್ಲಿ, ಯಾರನ್ನು ಸೇರಿಸಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಪುನಾರಚನೆಯೇ ಆದರೆ, ಹೊಸ ಸಚಿವ ಸಂಪುಟದಲ್ಲಿ ಯಾರ್ಯಾರು ಇರುತ್ತಾರೆ. ಯಾರು ಇರಲ್ಲ ಎಂಬುದು ಗಮನಾರ್ಹವಾಗುತ್ತದೆ. ಏನಿದ್ದರೂ, ನಾಳೆ ದೆಹಲಿಯಲ್ಲಿಯೇ ರಾಜ್ಯ ಸಚಿವ ಸಂಪುಟ ಕುರಿತ ನಿರ್ಧಾರ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಬ್ರಿಕ್ಸ್ ಶೃಂಗ 2020- ಪಾಕ್​ಗೆ ಪರೋಕ್ಷ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ಮೋದಿ

    ಸಚಿವ ಸಂಪುಟ ವಿಸ್ತರಣೆ ಕುರಿತ ಸುದ್ದಿಗಳು ಉಪಚುನಾವಣೆಗೂ ಮೊದಲೇ ಆರಂಭವಾಗಿತ್ತು. ಚುನಾವಣೆಗೂ ಮೊದಲೇ ಅವರು ದೆಹಲಿಗೆ ಹೋಗಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮಾತನಾಡಲಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಆದರೆ, ಅದ್ಯಾವುದೂ ನಡೆಯಲಿಲ್ಲ. ಈಗ ಬಿಎಸ್​ವೈ ಅವರು ನಾಳೆ ದೆಹಲಿಗೆ ತೆರಳುತ್ತಿರುವುದು ಆಕಾಂಕ್ಷಿಗಳಲ್ಲಿ ಹೊಸ ಆಸೆ ಚಿಗುರುವಂತೆ ಮಾಡಿದೆ.

    ಸಚಿವ ಸಂಪುಟ ವಿಸ್ತರಣೆ ಯಾವಾಗ? ಸುಳಿವು ನೀಡಿದ ಸಿಎಂ ಬಿಎಸ್​ವೈ!

    ಸಂಪುಟ ವಿಸ್ತರಣೆಗೆ ತೀವ್ರ ಲಾಬಿ; 18ಕ್ಕೆ ಸಿಎಂ ಭೇಟಿ ಸಾಧ್ಯತೆ

    ಅಧಿವೇಶನ ಮುನ್ನ ಸಂಪುಟ ವಿಸ್ತರಣೆ : ವಾರದ ಕೊನೆಯಲ್ಲಿ ಸಿಎಂ ದೆಹಲಿ ಭೇಟಿ?

    ಇಂದು ಸಚಿವರ ಜತೆ ಸಿಎಂ ಮಹತ್ವದ ಸಭೆ; ಸಂಪುಟ ವಿಸ್ತರಣೆಗೂ ಮುನ್ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts