blank

ರಸ್ತೆ ಬದಿ ನಿಂತಿದ್ದ ಯುವಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಆಘಾತಕಾರಿ Video Viral

Shootout

ಆಲಿಗಢ: ರಸ್ತೆ ಬದಿ ನಿಂತಿದ್ದ ಯುವಕನ ಮೇಲೆ ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಆಲಿಗಢದಲ್ಲಿ ನಡೆದಿದೆ. ಮೃತನನ್ನು ಹರೀಶ್ (25) ಅಲಿಯಾಸ್ ಕಟ್ಟಾ ಎಂದು ಗುರುತಿಸಲಾಗಿದ್ದು, ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದೆ.

ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ಮನೆಯ ಆಚೆ ಇಬ್ಬರು ಯುವಕರು ಮಾತನಾಡುತ್ತ ನಿಂತಿದ್ದು, ಕೊಲೆಯಾದ ಹರೀಶ್​ ಜತೆಗಿದ್ದ ವ್ಯಕ್ತಿ ಅಲ್ಲೇ ಕುಳಿತುಕೊಳ್ಳುತ್ತಾರೆ. ಈ ವೇಳೆ ಬೈಕಿನಲ್ಲಿ ಬರುವ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಹರೀಶ್​ ಮೇಲೆ ಗುಂಡು ಹಾರಿಸಿದ್ದು, ಜತೆಗಿದ್ದಾತ ಓಡಿ ಹೋಗುತ್ತಾರೆ. ದುಷ್ಕರ್ಮಿಗಳ ಗುಂಪು 6-7 ಬಾರಿ ಹರೀಶ್ ಮೇಲೆ ಗುಂಡು ಹಾರಿಸಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ಧಾನೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಕೂಗಿಕೊಳ್ಳುತ್ತ ಓಡಿ ಬರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ (Video Viral) ನೋಡಬಹುದಾಗಿದೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆ ಬೆಳಗಿನ ಜಾವ 3:00 ಘಂಟೆ ಸುಮಾರಿಗೆ ನಡೆದಿದ್ದು, ಸೆಹ್ರಿ ಪ್ರಾರ್ಥನೆ ಶುರುವಾಗುವುದಕ್ಕೂ ಮುನ್ನ ಈ ಕೊಲೆ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಹರೀಶ್​ ಎಂಬುವವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಯಾವ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮೃತರ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಅರೋಪಿಗಳನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಕ್ಕೆ ತುತ್ತಾಗಿದ್ದ ಆಟಗಾರ ಈಗ ಸಂಪೂರ್ಣ ಫಿಟ್​; ಐಪಿಎಲ್ ಆರಂಭಕ್ಕೂ ಮುನ್ನ ಎಲ್​ಎಸ್​ಜಿಗೆ ಸಿಕ್ತು ಭರ್ಜರಿ ಸುದ್ದಿ

6 ತಿಂಗಳ ಮಗುವಿನೊಂದಿಗೆ ವಿಮಾನ​ ಪ್ರಯಾಣ; ಸಹಪ್ರಯಾಣಿಕರಿಗೆ ದಂಪತಿ ಕೊಟ್ಟ ಪತ್ರ ವೈರಲ್​​

Share This Article

ಹೆಂಡತಿಯ ಈ ವಿಚಾರಗಳನ್ನು ಪತಿ ಯಾರ ಬಳಿಯೂ ಹೇಳಬಾರದು; ವಿವಾಹ ಜೀವನಕ್ಕೆ ಕೇಡು | Chanakya Niti

ಆಚಾರ್ಯ ಚಾಣಕ್ಯರು ತಮ್ಮ ತೀಕ್ಷ್ಣ ಬುದ್ಧಿಶಕ್ತಿ, ರಾಜಕೀಯ ಮತ್ತು ನೈತಿಕ ಜ್ಞಾನಕ್ಕೆ ಹೆಸರುವಾಸಿಯಾಗಿದ್ದಾರೆ. ಚಾಣಕ್ಯ ನೀತಿಯಲ್ಲಿ…

ಮಣ್ಣಿನ ಪಾತ್ರೆಯನ್ನು ಮೊದಲ ಬಾರಿಗೆ ಬಳಸುವುದು ಹೇಗೆ?; ತಿಳಿದುಕೊಳ್ಳುವುದು ಬಹಳ ಮುಖ್ಯ | Health Tips

ಇತ್ತೀಚಿನ ದಿನಗಳಲ್ಲಿ ನಾನ್-ಸ್ಟಿಕ್ ಜತೆಗೆ ಜನರು ಮಣ್ಣಿನ ಮಡಕೆಗಳನ್ನು ಸಹ ಬಳಸಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ ನಮ್ಮ…

ಉಪ್ಪು ಆರೋಗ್ಯಕರವೋ ಅಥವಾ ಹಾನಿಕಾರಕವೋ?; ಯಾವ ಉಪ್ಪು ನಿಮಗೆ ಸರಿ.. ಇಲ್ಲಿದೆ ಮಾಹಿತಿ | Health Tips

ಪ್ರಸ್ತುತ ಜೀವನಶೈಲಿಯಲ್ಲಿ ಜನರು ಆರೋಗ್ಯದ ಬಗ್ಗೆ ಮೊದಲಿಗಿಂತ ಹೆಚ್ಚು ಜಾಗೃತರಾಗಿದ್ದಾರೆ. ಇದರಿಂದಾಗಿ ಅವರು ಪ್ರತಿದಿನ ಬಳಸುವ…