Pahalgam Terrorists Attack: ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪವಾಸಿಗರ ಮೇಲೆ ನಡೆದ ಉಗ್ರರ ಭೀಕರ ಗುಂಡಿನ ದಾಳಿ ಇಡೀ ದೇಶವನ್ನೇ ಆಕ್ರೋಶದ ಕಡಲಿಗೆ ನೂಕಿದೆ. ಲಷ್ಕರ್ ಗುಂಪಿನ ಕೈವಾಡ ಇರುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕ್ ವಿರುದ್ಧ ಐದಂಶದ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ 1960ರಿಂದ ಉಭಯ ದೇಶಗಳ ನಡುವೆ ಬಲವಾಗಿ ಉಳಿದಿರುವ ಸಿಂಧೂ ನದಿ ಒಳ ಒಪ್ಪಂದ (ಐಡಬ್ಲ್ಯೂಟಿ), ಅಟ್ಟಾರಿ ಗಡಿ ಬಂದ್, ವೀಸಾ ರದ್ದತಿ ಮತ್ತು ಪಾಕಿಸ್ತಾನಿ ಅಧಿಕಾರಿಗಳು ಭಾರತ ಬಿಟ್ಟು ಹೋಗುವಂತೆ ಆದೇಶ ಹೊರಡಿಸಲಾಗಿದೆ. ಇದಕ್ಕೆ ಭಾರತೀಯರಿಂದಲೂ ಸಂಪೂರ್ಣ ಬೆಂಬಲ ದೊರಕಿದೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದರಿಂದ ಭಯೋತ್ಪಾದಕ ದಾಳಿಯಿಂದ ಪಾರಾದ ವ್ಯಕ್ತಿ! ನಿಜಕ್ಕೂ ಏನಾಯಿತು ಗೊತ್ತಾ? Pahalgam attack
ಪಹಲ್ಗಾಮ್ ಉಗ್ರರ ದಾಳಿಯಿಂದ ಅಕ್ಷರಶಃ ಕೆರಳಿರುವ ಭಾರತೀಯರು, ಭಯೋತ್ಪಾದಕರನ್ನು ಹೊಡೆದುರುಳಿಸುವಂತೆ ಭಾರತೀಯ ಸೇನೆಗೆ ಒತ್ತಾಯಿಸಿದೆ. ಈ ಮಧ್ಯೆ ಬಿಸಿಸಿಐ ಕೂಡ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಗುಂಡೇಟಿಗೆ ಬಲಿಯಾದ ಹಿನ್ನೆಲೆ ಭಾರತ ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಆಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
“ಉಗ್ರರ ಗುಂಡೇಟಿಗೆ ಬಲಿಯಾದವರ ಕುಟುಂಬದ ಜತೆಗೆ ನಾವಿದ್ದೇವೆ. ಈ ಹೇಯ ಕೃತ್ಯವನ್ನು ಖಂಡಿಸುತ್ತೇವೆ. ನಮ್ಮ ಸರ್ಕಾರ ಏನು ಹೇಳಲಿದೆಯೋ ಅದಕ್ಕೆ ನಾವು ಬದ್ಧ. ಸರ್ಕಾರದ ನಿಲುವಿನ ಕಾರಣದಿಂದಾಗಿ ಇನ್ನು ಮುಂದೆ ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಆದರೆ, ಐಸಿಸಿ ವಿಷಯಕ್ಕೆ ಬಂದಾಗ, ಐಸಿಸಿ ಏರ್ಪಡಿಸುವ ಟೂರ್ನಿ ಹಿನ್ನೆಲೆ ನಾವು ಆಡುತ್ತೇವೆ. ಪಾಕ್ ಎದುರು ಆಡಲು ನಮಗೆ ಇಷ್ಟವಿಲ್ಲ. ಈ ಘಟನೆ ಬಗ್ಗೆ ಐಸಿಸಿಗೂ ಗೊತ್ತಿರಲಿದೆ ಎಂಬ ಭಾವನೆ ನಮ್ಮದು” ಎಂದು ಹೇಳಿದ್ದಾರೆ.
2012-13ರಲ್ಲಿ ಪಾಕಿಸ್ತಾನ ಸೀಮಿತ ಓವರ್ಗಳ ಸರಣಿಗಾಗಿ ಭಾರತಕ್ಕೆ ಪ್ರಯಾಣ ಬೆಳೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ. ಭಾರತ ಕೊನೆಯ ಬಾರಿಗೆ 2008ರಲ್ಲಿ ಪಾಕಿಸ್ತಾನಕ್ಕೆ ತೆರಳಿತ್ತು. ಎರಡೂ ತಂಡಗಳು ಪರಸ್ಪರ ಎದುರಿಸುವ ಏಕೈಕ ಟೂರ್ನಿ ಎಂದರೆ ಅದು ಅಂತರರಾಷ್ಟ್ರೀಯ ಪಂದ್ಯಗಳು ಮಾತ್ರ. ಇನ್ನು ಈ ನಿರ್ಧಾರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ಪ್ರತಿಕ್ರಿಯಿಸಿದ್ದು, “ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರು ಬಲಿ ಆಗಿರುವುದು ದುರಂತ. ಮೃತರಿಗೆ ನಮ್ಮ ಸಂತಾಪ. ಅವರ ಕುಟುಂಬಸ್ಥರಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ. ಈ ಸಮಯದಲ್ಲಿ ನಾವು ಅವರೊಂದಿಗೆ ಕೈಜೋಡಿಸುತ್ತೇವೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
5 ಗೆಲುವು, ತವರಿನಲ್ಲಿ 3 ಸೋಲು; ವಿರಾಟ್ ಕೊಹ್ಲಿ ಕೊನೆಯವರೆಗೂ… ಆರ್ಸಿಬಿಗೆ ಅಂಬಟಿ ರಾಯುಡು ಕಿವಿಮಾತು | RCB