ನೆಲ ಕಚ್ಚಿದ ಬಾಲಿವುಡ್​ಗೆ ಮತ್ತೆ ಜೀವ ತುಂಬೋದು ಹೇಗೆ? ಅಕ್ಷಯ್ ಕುಮಾರ್ ನೀಡಿದ್ದಾರೆ ಈ ಒಂದು ಸಲಹೆ…!

blank
blank

ಮುಂಬೈ: ಬಾಲಿವುಡ್​ನ ಸಿನಿಮಾಗಳು ಜನರ ಮನಸ್ಸನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿಲ್ಲ. ಬಿಗ್ ಬಜೆಟ್ ಸಿನಿಮಾ ಶಮ್​ಶೀರ, ಲಾಲ್ ಸಿಂಗ್ ಛಡ್ಡಾ ಮತ್ತು ಹಲವಾರು ಬಾಲಿವುಡ್ ತಾರೆಯರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿಲ್ಲ. ಇದಕ್ಕೆ ಕಾರಣ, ಕರೊನಾ ನಂತರದ ದಿನಗಳಲ್ಲಿ ಜನ ಥಿಯೇಟರ್​ಗಳತ್ತ ಬರುತ್ತಿಲ್ಲ. ಇದಲ್ಲದೇ ಬಾಲಿವುಡ್​ನ ಈ ಸ್ಥಿತಿಗೆ ದಕ್ಷಿಣ ಭಾರತದ ಸಿನಿಮಾಗಳ ಜನಪ್ರಿಯತೆ ಇನ್ನೊಂದು ಕಾರಣ ಎಂಬುದು ಹಲವರ ಅಭಿಪ್ರಾಯ. ಆದರೆ ನಟ ಅಕ್ಷಯ್ ಕುಮಾರ್ ಇವೆರಡನ್ನೂ ಒಪ್ಪುವುದಿಲ್ಲ. ಅಕ್ಷಯ್ ಕುಮಾರ್ ಹೇಳುವುದೇನೆಂದರೆ, ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಬಾಲಿವುಡ್​ ಅನ್ನು ಪುನಃ ಯಶಸ್ಸಿನ ಕಡೆ ಕರೆದೊಯ್ಯಬಹುದು.

ಹಿಂದಿ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿಲ್ಲ. ಥಿಯೇಟರ್​ಗೆ ಜನರನ್ನು ಕರೆತರುವಲ್ಲಿ ವಿಫಲವಾಗಿವೆ. ಬಾಲಿವುಡ್ ತನ್ನನ್ನು ತಾನು ರೀಇನ್ವೆಂಟ್ ಮಾಡಿಕೊಳ್ಳಬೇಕು. ಸಿನಿಮಾದ ಬಜೆಟ್ ಮತ್ತು ಟಿಕೆಟ್​ನ ದರವನ್ನು ಸುಮಾರು ಶೇಕಡಾ 30- 40ರ ಷ್ಟು ಕಡಿತಗೊಳಿಸಬೇಕೆಂದು ಅಕ್ಷಯ್ ಕುಮಾರ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

“ನಾವು ಎಲ್ಲವನ್ನೂ ಕೆಡವಿ, ಮರುನಿರ್ಮಿಸಿ, ಮರುಶೋಧಿಸಿ ಮತ್ತೆ ಪ್ರಾರಂಭಿಸಬೇಕು. ನಟರ ಸಂಭಾವನೆ, ಸಿನಿಮಾ ನಿರ್ಮಾಣದ ಖರ್ಚು ಕಡಿಮೆ ಮಾಡಬೇಕು. ಟಿಕೆಟ್​ನ ದರವನ್ನು ಕಡಿತಗೊಳಿಸಬೇಕು. ಜನರನ್ನು ಪುನಃ ಥಿಯೇಟರ್​ಗೆ ಕರೆತರಲು ಇದನ್ನು ಮಾಡಲೇಬೇಕು” ಎಂದು ಅಕ್ಷಯ್ ಕುಮಾರ್ ಬಾಲಿವುಡ್​ಗೆ ಸಲಹೆ ನೀಡಿದ್ದಾರೆ.

2022ರಲ್ಲಿ ರಿಲೀಸ್ ಆದ ಅಕ್ಷಯ್ ಕುಮಾರ್​ ಅವರ ನಾಲ್ಕು ಚಿತ್ರಗಳು ಗಲ್ಲಾ ಪೆಟ್ಟಿಗೆ ತುಂಬಿಸಲಿಲ್ಲ. 55 ವರ್ಷದ ಅಕ್ಷಯ್ ಕುಮಾರ್ ಕೈಯಲ್ಲಿ ಬಡೇ ಮಿಯಾ ಛೋಟೆ ಮಿಯಾ ಮತ್ತು ಸೋರಾರೈ ಪೊಟ್ರುವಿನ ರೀಮೇಕ್ ಸೇರಿದಂತೆ ಹಲವಾರು ಚಿತ್ರಗಳಿವೆ. – ಏಜೆನ್ಸೀಸ್

Share This Article

ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ…

Numerology: ಈ ದಿನಾಂಕದಂದು ಜನಿಸಿದವರಿಗೆ ಬಂಪರ್! ಇವರು ನಿಜವಾಗಿಯೂ ಲಕ್ಷ್ಮೀ ಪುತ್ರರು..

Numerology: ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಸಹಾಯದಿಂದ,…