More

    ರಜನಿಕಾಂತ್ ದೇವರು ಎಂದ ನಟಿ ಪ್ರಿಯಾಮಣಿ; ಸಹನಟರ ಬಗ್ಗೆ ಮನದಾಳದ ಮಾತು

    ಮುಂಬೈ: ಇತ್ತೀಚೆಗೆ ಜಾಗತಿಕವಾಗಿ ಬಿಡುಗಡೆಗೊಂಡು ಬ್ಲಾಕ್​ಬಸ್ಟರ್​ ಆಗಿ ಹೊರಹೊಮ್ಮಿದ ಶಾರೂಖ್​ ನಟನೆಯ ‘ಜವಾನ್​’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟಿ ಪ್ರಿಯಾಮಣಿ, ಇದೀಗ ತಮ್ಮ ಸಹನಟರ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಮದುವೆ ಆಗುವುದಾಗಿ ಅಪ್ರಾಪ್ತೆ ಮೇಲೆ ದೌರ್ಜನ್ಯ; ಯುವಕನಿಗೆ 3 ವರ್ಷ ಜೈಲು

    ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ನಟಿ ಪ್ರಿಯಾಮಣಿ, ಅಮೀರ್ ನಿರ್ದೇಶನದ 2007ರ ಚಲನಚಿತ್ರ ‘ಪರುತಿವೀರನ್‌’ನಲ್ಲಿ ನಟ ಕಾರ್ತಿಯೊಂದಿಗೆ ನಟಿಸಿದ್ದನ್ನು ನೆನೆದು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಕಾರ್ತಿ ಬಗ್ಗೆ ವಿವರಿಸಿದ ನಟಿ, ಇಂದಿಗೂ ಅವರು ನನಗೆ ಉತ್ತಮ ಸ್ನೇಹಿತ ಎಂದು ಹೇಳಿದರು.

    ಇದನ್ನೂ ಓದಿ:  ಕಟ್ಟಡ ಮಾಲೀಕನಿಗೆ ಹ್ತಾ ನೀಡುವಂತೆ ಬೆದರಿಕೆ; ಬಿಜೆಪಿ ಮುಖಂಡನ ಲಾಕ್ ಮಾಡಿ ಜೈಲಿಗೆ ಕಳುಹಿಸಿದ ಖಾಕಿ

    ನಟ ನಾಗಾರ್ಜುನ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ನಟಿ, ಅವರು ಆಕರ್ಷಕ ಎಂದು ಬಣ್ಣಿಸಿದರು. ತದನಂತರದಲ್ಲಿ ಕಾಲಿವುಡ್​ನ ಸೂಪರ್​ಸ್ಟಾರ್​, ತಲೈವಾ ರಜನಿಕಾಂತ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಿಯಾಮಣಿ, ತಮಿಳಿನಲ್ಲಿ ‘ತಲೈವಾ’ ಎಂದರೆ ದೇವರು, ಹಾಗಾಗಿ ಅವರು ದೇವರು ಎಂದು ಹೇಳಿದರು. ನಟಿಯ ಈ ಹೇಳಿಕೆಗೆ ರಜನಿ ಫ್ಯಾನ್ಸ್​ ಫಿದಾ ಆಗಿದ್ದಾರೆ,(ಏಜೆನ್ಸೀಸ್).

    ವಿಶ್ವವಿಖ್ಯಾತ ಮೈಸೂರು ದಸರಾ 2023; ಸರಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಎಚ್.ಸಿ. ಮಹದೇವಪ್ಪ

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts