No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಕ್ಕೆ ಮನಸೋಲದವರೇ ಇಲ್ಲ. ಕೇವಲ ನಮ್ಮ ದೇಶದ ಜನತೆ ಮಾತ್ರವಲ್ಲದೇ ವಿದೇಶಿಗರು ಕೂಡ ನಮ್ಮಲ್ಲಿನ ಪದ್ಧತಿ, ಸಂಸ್ಕಾರವನ್ನು ಮೆಚ್ಚಿ, ಹೊಗಳಿದ್ದಾರೆ. ಇಂದಿಗೂ ವಿದೇಶಿ ನೆಲದ ಯುವತಿ-ಯುವಕರು ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ತೊಡಲು ಬಯಸುತ್ತಾರೆ. ಇದು ನಮ್ಮ ದೇಶದ ವಿಶೇಷತೆ. ಆಹಾರ ಕ್ರಮದಲ್ಲಿಯೂ ಇದು ಅನ್ವಯವಾಗುತ್ತದೆ.
ಇದನ್ನೂ ಓದಿ: ಮದುವೆ ನಿರಾಕರಿಸುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ | Supreme Court
ಸಸ್ಯಾಹಾರಿ ಮತ್ತು ಮಾಂಸಹಾರಿಗಳು ನಮ್ಮಲ್ಲಿದ್ದಾರೆ. ಪ್ರವರ್ಧಮಾನಕ್ಕೆ ಬರುವ ಹಲವಾರು ನಗರಗಳಿಗೆ ಎರಡು ವರ್ಗದ ಜನರು ನೆಲೆಸಿದ್ದಾರೆ. ಆದರೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳಿಂದ ಪ್ರಭಾವಿತವಾಗಿರುವ ಜನರು ನೆಲೆಸಿರುವ ಕೆಲವು ನಗರಗಳಲ್ಲಿ ಮಾಂಸದೂಟಕ್ಕೆ ಅವಕಾಶವಿಲ್ಲ. ಈ ನಗರ ಪ್ರದೇಶಗಳಲ್ಲಿ ಮಾಂಸದ ಆಹಾರ ಸಿಗುವುದಿಲ್ಲ. ಸಸ್ಯಾಹಾರಿ ಭಕ್ಷ್ಯಗಳ ಸಮೃದ್ಧ ಮಿಶ್ರಣವನ್ನು ಮಾತ್ರ ಪ್ರದರ್ಶಿಸುತ್ತವೆ. ಸಸ್ಯಾಹಾರಿ-ಸ್ನೇಹಿ ತಾಣಗಳನ್ನು ಅನ್ವೇಷಿಸಲು ಬಯಸುವ ಪ್ರವಾಸಿಗರಿಗೆ ಈ ತಾಣಗಳು ಹೇಳಿ ಮಾಡಿಸಿದ್ದು. ಅಷ್ಟಕ್ಕೂ ಮಾಂಸಾಹಾರಿ ಆಹಾರವನ್ನು ನಿರ್ಬಂಧಿಸಲಾದ ಆ ಏಳು ನಗರಗಳು ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ.
1. ಋಷಿಕೇಶ, ಉತ್ತರಾಖಂಡ
‘ಇಂದ್ರಿಯಗಳ ಪ್ರಭು’ ಎಂದು ಕರೆಯಲ್ಪಡುವ ಋಷಿಕೇಶವು ಪವಿತ್ರ ನಗರ ಮತ್ತು ಪ್ರಮುಖ ಯಾತ್ರಾ ಸ್ಥಳ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ನಗರದ ಆಧ್ಯಾತ್ಮಿಕ ಮಹತ್ವದ ಕಾರಣದಿಂದಾಗಿ ಇಲ್ಲಿ ಮಾಂಸಾಹಾರಿ ಆಹಾರ ಮತ್ತು ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಶಾಂತ ಭೂದೃಶ್ಯಗಳ ನಡುವೆ ಪ್ರವಾಸಿಗರು ಶುದ್ಧ ಸಸ್ಯಾಹಾರಿ ಆಹಾರವನ್ನು ಇಲ್ಲಿ ಆನಂದಿಸಬಹುದು.
2. ವಾರಣಾಸಿ, ಉತ್ತರ ಪ್ರದೇಶ
ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ವಾರಣಾಸಿಯು ಪ್ರಧಾನವಾಗಿ ಸಸ್ಯಾಹಾರಿ ಸಂಸ್ಕೃತಿಯನ್ನು ಹೊಂದಿದೆ. ಹಿಂದೂ ಸಂಪ್ರದಾಯಗಳೊಂದಿಗೆ ನಗರದ ಸಂಪರ್ಕವು ಸಸ್ಯಾಹಾರವನ್ನು ದೈನಂದಿನ ಜೀವನದ ಪ್ರಮುಖ ಅಂಶವನ್ನಾಗಿ ಮಾಡಿಕೊಂಡಿದೆ. 20190ರಲ್ಲಿ, ದೇವಾಲಯಗಳು ಮತ್ತು ಪಾರಂಪರಿಕ ತಾಣಗಳ 250 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸಾಹಾರಿ ಆಹಾರದ ಮಾರಾಟ ಮತ್ತು ಅದರ ಸೇವನೆಯ ಮೇಲೆ ಸರ್ಕಾರ ನಿಷೇಧ ಹೇರಿತು. ಈಗಲೂ ಇದು ಜಾರಿಯಲ್ಲಿದೆ.
ಇದನ್ನೂ ಓದಿ: ಮಾರಣಾಂತಿಕ ದಾಳಿ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಸೈಫ್; ನಟನ ಬಿಗಿ ಭದ್ರತೆ ವಿಡಿಯೋ ವೈರಲ್ | Saif Ali Khan
3. ಹರಿದ್ವಾರ, ಉತ್ತರಾಖಂಡ
ಗಂಗಾ ನದಿಯ ದಂಡೆಯ ಮೇಲಿರುವ ಮತ್ತೊಂದು ಪವಿತ್ರ ನಗರವಾದ ಹರಿದ್ವಾರವು ಆಧ್ಯಾತ್ಮಿಕ ಪ್ರಯಾಣದಲ್ಲಿ ಆಳವಾಗಿ ಬೇರೂರಿದೆ. ಈ ನಗರವು ಹಿಂದೂಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಇಲ್ಲಿಯೂ ಮಾಂಸಾಹಾರಿ ಆಹಾರದ ಮಾರಾಟ ಮತ್ತು ಸೇವನೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
4. ಪಾಲಿಟಾನಾ, ಗುಜರಾತ್
ಗುಜರಾತ್ನಲ್ಲಿರುವ ಪಲಿಟಾನಾವು 2014ರಲ್ಲಿ ಸಂಪೂರ್ಣವಾಗಿ ಮಾಂಸ ಮುಕ್ತ ಎಂದು ಘೋಷಿಸಲ್ಪಟ್ಟ ಒಂದು ವಿಶಿಷ್ಟ ಸಸ್ಯಾಹಾರಿ ನಗರವಾಗಿದೆ. ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಈ ಪಟ್ಟಣದಲ್ಲಿ ಕಾನೂನಿನ ಪ್ರಕಾರ ಶಿಕ್ಷಾರ್ಹ. ಇದರೊಂದಿಗೆ ಇಲ್ಲಿನ ಬಲವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳು ಮಾಂಸಹಾರಿ ಆಹಾರಕ್ಕೆ ನಿಷೇಧ ಹೇರಿದೆ.
5. ವೃಂದಾವನ, ಉತ್ತರ ಪ್ರದೇಶ
ಶ್ರೀಕೃಷ್ಣನ ಬಾಲ್ಯದ ಮನೆಯಾದ ವೃಂದಾವನವು ಹಿಂದೂ ಸಂಪ್ರದಾಯಗಳಲ್ಲಿ ಮುಳುಗಿರುವ ಒಂದು ಶ್ರೇಷ್ಠ ನಗರ. ಪವಿತ್ರ ದೇವಾಲಯವೆಂದೇ ಘೋಷಿಸಲ್ಪಟ್ಟ ಈ ನಗರದಲ್ಲಿ ಮಾಂಸಾಹಾರಿ ಆಹಾರ ಮತ್ತು ಮದ್ಯದ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಸ್ಯಾಹಾರಿ ಸಂಸ್ಕೃತಿಯು ಅದರ ಧಾರ್ಮಿಕ ನಂಬಿಕೆಗಳೊಂದಿಗೆ ಆಳವಾಗಿ ಇಲ್ಲಿನ ಜನರು ಬದುಕುತ್ತಿದ್ದಾರೆ.
ಇದನ್ನೂ ಓದಿ: ತಾಯ್ತನ ತ್ಯಾಗದ ಸಂಕೇತ – ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶರಣಮ್ಮ ಅಭಿಮತ
6. ಅಯೋಧ್ಯೆ, ಉತ್ತರ ಪ್ರದೇಶ
ಪ್ರಸಿದ್ಧ ರಾಮ ಮಂದಿರವಿರುವ ಅಯೋಧ್ಯೆಯಲ್ಲಿ, ದೇವಾಲಯದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರಿ ಆಹಾರ ಮತ್ತು ಮದ್ಯದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳಿವೆ. ಇದು ಮಹತ್ವದ ಧಾರ್ಮಿಕ ತಾಣವಾಗಿ ಅದರ ಸ್ಥಾನಮಾನಕ್ಕೆ ಹೊಂದಿಕೆಯಾಗುವ ಹಿನ್ನೆಲೆ ಇಲ್ಲಿ ಅದೆಕ್ಕೆಲ್ಲ ಅವಕಾಶವಿಲ್ಲ.
7. ಮಧುರೈ, ತಮಿಳುನಾಡು
ಮೀನಾಕ್ಷಿ ದೇವಸ್ಥಾನಕ್ಕೆ ಹೆಸರುವಾಸಿಯಾದ ಮಧುರೈ, ಅಚ್ಚರಿಯ ಸಸ್ಯಾಹಾರಿ ಭಕ್ಷ್ಯಗಳಿಗೆ ಜನಪ್ರಿಯ. ತಮಿಳುನಾಡು ಮಾಂಸಾಹಾರಿ ಪಾಕಪದ್ಧತಿಗೆ ಹೆಸರುವಾಸಿಯಾಗಿದ್ದರೆ, ಮಧುರೈ ತನ್ನ ರುಚಿಕರವಾದ ಸಸ್ಯಾಹಾರಿ ಕೊಡುಗೆಗಳಿಗಾಗಿ ಹೇಳಿ ಮಾಡಿಸಿದ ತಾಣ. ಇದು ಭಾರತದ ಪಾಕಶಾಲೆಯ ವೈವಿಧ್ಯತೆಯನ್ನು ಎತ್ತಿಹಿಡಿದಿದೆ. ಈ ನಗರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವುದಲ್ಲದೆ, ಅಧಿಕೃತ ಸಸ್ಯಾಹಾರಿ ಪಾಕಪದ್ಧತಿಯ ಪರಿಮಳವನ್ನು ಅನುಭವಿಸಲು ಒಂದು ಅನನ್ಯ ಅವಕಾಶವನ್ನು ಸಹ ನೀಡುತ್ತವೆ. ಈ ಸ್ಥಳಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ,(ಏಜೆನ್ಸೀಸ್).