More

    ಜನಸಂದಣಿ ಮೇಲೆ ಹರಿದ ಬಸ್​; ಐದು ಮಂದಿ ಮೃತ್ಯು

    ಗಾಂಧಿನಗರ: ಬಸ್​ಗಾಗಿ ಕಾಯುತ್ತಿದ್ದ ಜನರ ಮೇಲೆ ಗುಜರಾತ್​ ಸಾರಿಗೆ ಸಂಸ್ಥೆಗೆ ಸೇರಿದ ಬಸ್​ ಹರಿದ ಕಾರಣ ಐವರು ಪ್ರಾಣ ಬಿಟ್ಟಿರುವ ಘಟನೆ ಗಾಂಧಿನಗರದ ಕಲೋಲ್​ನಲ್ಲಿ ನಡೆದಿದೆ.

    ಘಟನೆ ಬೆಳಗ್ಗೆ 7:30ರ ಸುಮಾರಿಗೆ ನಡೆದಿದ್ದು ಬಸ್​​ಗಾಗಿ ಕಾಯುತ್ತಿದ್ದವರ ಮೇಲೆ ಸಾರಿಗೆ ಹರಿದಿದೆ ಎಂದು ವರದಿಯಾಗಿದೆ.

    ಹಿಂಬದಿಯಿಂದ ಡಿಕ್ಕಿ

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಅತಿ ವೇಗವಾಗಿ ಬಂದ ಖಾಸಗಿ ಬಸ್​ ಒಂದು ಗುಜರಾತ್​ ಸಾರಿಗೆ ಸಂಸ್ತೆಯ ಬಸ್​ಗೆ ಹಿಂಬದಯಿಂದ ಡಿಕ್ಕಿ ಹೊಡೆದ ಕಾರಣ ಬಸ್​ ಸ್ಟ್ಯಾಂಡ್​ನಲ್ಲಿ ನಿಂತಿದ್ದವರ ಮೇಲೆ ಹರಿದಿದೆ.

    ಇದನ್ನೂ ಓದಿ: VIDEO| ಕಾರು​ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಸಹಾಯ ಮಾಡಿತ್ತು ಕ್ಯಾಮರಾ!

    ಮೃತ ದುರ್ದೈವಿಗಳನ್ನು ಶಾರದ ಜಗಾರಿಯಾ(50), ಬಲವಂತ್​ ಠಾಕೂರ್​(45), ದಿಲೀಪ್​ ಸಿನ್ಹ್ ವಿಹೋಲ್​(48), ಪಾರ್ಥ್​ ಪಟೇಲ್​(22), ಸಾವನ್​ ದರ್ಜಿ(21) ಎಮದು ಗುರುತಿಸಲಾಗಿದೆ.

    ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಕಾರಣ ಖಾಸಗಿ ಸಂಸ್ಥೆಯ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts