10 ಬೆಟ್ಟಿಂಗ್​ ಪ್ರಕರಣದಲ್ಲಿ 25 ಮಂದಿ ಬಂಧನ

Cricket Betting
blank

ಕೋಲಾರ: ಐಪಿಎಲ್​ ಸೀಸನ್​ ಸಮಯದಲ್ಲಿ ಅಕ್ರಮವಾಗಿ ಬೆಟ್ಟಿಂಗ್​ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಸಂಬಂಧ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ 10 ಪ್ರಕರಣದಲ್ಲಿ 25 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾವಳಿಗಳು ನಡೆಯುತ್ತಿದ್ದ ವೇಳೆ ಕೆಲವರು ಆನ್​ಲೈನ್​ ಮೂಲಕ ಅಕ್ರಮವಾಗಿ ಬೆಟ್ಟಿಂಗ್​ ಅಡಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ, ಜತೆಗೆ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿದವರು ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದರು.

ಗಲ್​ಪೇಟೆ ಪೊಲೀಸರು ನಗರದ ರಹಮತ್​ ನಗರದ ಉರ್ದು ಶಾಲೆಯ ಬಳಿ ಐಪಿಎಲ್​ ಬೆಟ್ಟಿಂಗ್​ ಆಡುತ್ತಿದ್ದ ಸ್ಥಳದಲ್ಲಿ ದಾಳಿ ಮಾಡಿದಾಗ ಮಹಾಲಕ್ಷಿ$್ಮ ಬಡಾವಣೆಯ ಸೈಯದ್​ ನಿಜಾಂನನ್ನು ಬಂಧಿಸಿ ಒಂದು ಮೊಬೈಲ್​ ಮತ್ತು ಪಣಕ್ಕೆ ಕಟ್ಟಿದ್ದ 3,400 ರೂ. ವಶಪಡಿಸಿಕೊಳ್ಳಲಾಗಿದೆ. ರಹಮತ್​ನಗರದ ಖುತುಬ್​ ಪಾಷಾ ಮತ್ತು ಶಹೀನ್​ ಷಾ ನಗರದ ಇಮ್ರಾನ್​, ಮುಜಾಮಿಲ್​ ಪರಾರಿಯಾಗಿದ್ದು, ದೂರು ದಾಖಲಾಗಿದೆ ಎಂದರು.
ಕೋಲಾರ ನಗರ, ಗಲ್​ಪೇಟೆ ಮತ್ತು ಶ್ರೀನಿವಾಸಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂರು ಜನ ಕ್ರಿಕೆಟ್​ ಬೆಟ್ಟಿಂಗ್​ ಬುಕ್ಕಿಗಳಾದ ಶಾಮೀರ್​, ಬಿ.ಎನ್​.ನಾಗರಾಜ್​ ಹಾಗೂ ರಾಜಶೇಖರ್​ ಬಂಧಿಸಿ, 18,500 ರೂ. ಹಾಗೂ 5 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ರಹಮತ್​ ನಗರದ ರೈಲ್ವೆ ಬ್ರಿಡ್ಜ್​ ಬಳಿ ಕ್ರಿಕೆಟ್​ ಬೆಟ್ಟಿಂಗ್​ ಜೂಜಾಟದಲ್ಲಿ ನೂರ್​ ನಗರದ ನಿವಾಸ ಜಾಕೀರ್​, ಟಮಕ ಅರುಣ್​ನನ್ನು ವಶಕ್ಕೆ ಪಡೆದು 1,600 ರೂ. ಮತ್ತು ಎರಡು ಮೊಬೈಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೋಲಾರ ನಗರ ಠಾಣೆಯ ಪಿ.ಐ. ಎಂ.ಸದಾನಂದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್​ ತಂಡವು ದೀರ್​ಪಾಷಾ, ವಸೀಂ ಬೇಗ್​, ಮುಜಾಯಿದ್​ ಪಾಷಾನನ್ನು ಬಂಧಿಸಿ ಅವರಿಂದ ಒಂದು ಮೊಬೈಲ್​, 4.600 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಸೈಬರ್​ ಅಪರಾಧ & ಮಾಧಕ ವಸ್ತುಗಳ ನಿಯಂತ್ರಣ ಪೊಲೀಸ್​ ಠಾಣೆ ಪೊಲೀಸರು ತಾಲೂಕಿನ ಅಮ್ಮೇರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ಚಲಪತಿ ಮತ್ತು ಮುಬಾರಕ್​ ಪಾಷಾನನ್ನು ದಸ್ತಗಿರಿ ಮಾಡಿ 4,400 ರೂ. ಹಾಗೂ ಎರಡು ಮೊಬೈಲ್​ ಹಾಗೂ ಮತ್ತೊಂದು ಬೆಟ್ಟಿಂಗ್​ ಪ್ರಕರಣದಲ್ಲಿ ಖಾಜಾನನ್ನು ಬಂಧಿಸಿ 4,200 ರೂ., ಮೊಬೈಲ್​ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆ ಪೊಲೀಸರು ಚಿಟ್ನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದ ಶ್ರೀನಾಥ್​, ಶಿವಕುಮಾರ್​ ಬಂಧಿಸಿ, 4,500 ರೂ., 2 ಮೊಬೈಲ್​ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮಾಲೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಜ್ವಲ್​, ಮಂಜುನಾಥ ಬಂಧಿಸಿ 8000 ರೂ., ಒಂದು ಮೊಬೈಲ್​ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಗಾಂಧಿ ನಗರದ ಬಳಿ ಅಕ್ರಮವಾಗಿ ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದ ತೌಸಿಪ್ ಪಾಷ, ಶಹೀನ್ನಾ, ಕುತುಬ್​, ಮದನ್​ ಮತ್ತು ನಿಜಾಮ್​ ವಿರುದ್ಧ ರೂದು ದಾಖಲಿಸಲಾಗಿದೆ ಎಂದು ವಿವರಿಸಿದರು.

Share This Article

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…

ಈ ಅಭ್ಯಾಸಗಳು ನಿಮ್ಮನ್ನು ಎಂದಿಗೂ ಶ್ರೀಮಂತರಾಗಲು ಬಿಡುವುದಿಲ್ಲ, ಅವುಗಳನ್ನು ತಕ್ಷಣ ಬಿಟ್ಟುಬಿಡಿ | Chanakya Niti

Chanakya Niti: ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದೂ ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ತಮ್ಮ…