blank

ಶ್ರೀವಿದ್ಯಾಲಕ್ಷ್ಮಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮಹಿಳಾ ದಿನಾಚರಣೆ

blank

ಬೆಂಗಳೂರು : ಜಗತ್ತಿನಲ್ಲಿ ಹೆಣ್ಣಿನ ಸ್ಥಾನ ಮತ್ತು ಜವಾಬ್ದಾರಿ ವಿಶೇಷವಾಗಿದ್ದು, ಆಕೆ ಸೃಷ್ಟಿಕರ್ತೆಯಾಗಿ ಸಮಾಜದ ಪಾಲಿಗೆ ನಂದಾದೀಪವಾಗಿದ್ದಾಳೆ ಎಂದು ಶ್ರೀವಿದ್ಯಾಲಕ್ಷ್ಮಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಮಂಗಳ ಸಿದ್ಧಲಿಂಗಯ್ಯ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಎಲ್ಲ ಜೀವಿಗಳನ್ನು ಪೊರೆದು ರಕ್ಷಿಸುವ ಹೆಣ್ಣು, ಸಮಾಜಕ್ಕೆ ದಾರಿದೀಪದಂತೆ ತನ್ನ ಬದುಕನ್ನು ಸವೆಸುತ್ತಾಳೆ ಎಂದು ಹಲವು ಸಾಧಕ ಮಹಿಳೆಯರ ಸಾಧನೆಗಳನ್ನು ವಿವರಿಸಿದರು.

ಶಾಲೆಯ ನಿರ್ದೇಶಕಿಯಾದ ಪಾವನ ಮಾತನಾಡಿ ಇತ್ತೀಚೆಗೆ ಮಹಿಳೆಯರಿಗೆ ಸರ್ವಿಕಲ್ ಕ್ಯಾನ್ಸರ್(ಗರ್ಭಕಂಠದ ಕ್ಯಾನ್ಸರ್) ಮಾರಕವಾಗಿ ಬಾಧಿಸುತ್ತಿದ್ದು, ಇದನ್ನು ತಡೆಗಟ್ಟುವು ಕುರಿತು ಮಾಹಿತಿಯನ್ನು ನೀಡಿದುರ. ಹೆಣ್ಣುಮಕ್ಕಳು ಸ್ವಯಂ ರಕ್ಷಣೆಗೆ ಕರಾಟೆಯನ್ನು ಕಲಿಯುವುದರ ಅಗತ್ಯವನ್ನು ತಿಳಿಸಿದರು.

ಪ್ರಾಂಶುಪಾಲ ಸಿದ್ದಲಿಂಗಯ್ಯ ಮಾತನಾಡಿ ಮಹಿಳಾ ದಿನಾಚರಣೆಯ ದಿವಸ ಮಾತ್ರ ಮಹಿಳೆಯರಿಗೆ ಗೌರವ ನೀಡುವುದಲ್ಲ. ಬದಲಾಗಿ ಜೀವನ ಪರ್ಯಂತರ ಹೆಣ್ಣುಮಕ್ಕಳಿಗೆ ಗೌರವ ಸಲ್ಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಹೆಣ್ಣು ಗಂಡಿನಲ್ಲಿರುವ ಸಮಾನತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ದೆ ಏರ್ಪಡಿಸಲಾಗಿತ್ತು. ಶಿಕ್ಷಕಿಯರು ಮತ್ತು ಮಹಿಳಾ ಪೋಷಕರಿಗೆ ಯೋಗ ಮತ್ತು ಧ್ಯಾನದ ವಿಧಗಳನ್ನು ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿದ್ದಲಿಂಗಯ್ಯ, ಶಾಲೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಬೆಂಗಳೂರಿಗೆ ಬಂದ ಬಾಗಲಕೋಟೆ ಹೋಳಿ ಹಲಗೆ; ಉ.ಕ.ಸಂಸ್ಕೃತಿಯ ಅನಾವರಣ

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…