ಬೆಂಗಳೂರಿಗೆ ಬಂದ ಬಾಗಲಕೋಟೆ ಹೋಳಿ ಹಲಗೆ; ಉ.ಕ.ಸಂಸ್ಕೃತಿಯ ಅನಾವರಣ

blank

ಬೆಂಗಳೂರು: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜಾನಪದ ಬಾಗಲಕೋಟೆ ಹೋಳಿ ಹಲಗೆ ಮೇಳವು ಯಶಸ್ವಿಯಾಗಿ ನಡೆಯಿತು.

blank

500 ವರ್ಷಗಳ ಇತಿಹಾಸವಿರುವ ಹೋಳಿ ಸಂಪ್ರದಾಯವನ್ನು ವಿಶಿಷ್ಟ ಸಂಗೀತ ಪ್ರದರ್ಶನದೊಂದಿಗೆ ಆಚರಿಸಿತು. ಹಲಗೆ ಮೇಳದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ಎರಡು ತಂಡಗಳಾಗಿ ಹಲಗೆ ಸಂಗೀತ ವಾದ್ಯವನ್ನು ನುಡಿಸಲಾಯಿತು. ಶೆಹನಾಯಿ, ಕಣಿ ಮತ್ತು ಜುಮ್ಮರ್ ಜುಗಲ್‌ಬಂದಿ ಪ್ರೇಕ್ಷಕರ ಮನಸೂರೆಗೊಂಡವು. 16 ಜನರ ತಂಡ ಪ್ರದರ್ಶಿಸಿದ ಗೂಸ್‌ಬಂಪ್ ಸಂಗೀತವು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ದೂರದ ಬಾಗಲಕೋಟೆ ಹೋಳಿ ಆಚರಣೆಯನ್ನು ಬೆಂಗಳೂರಿಗೆ ತರುವ ಮೂಲಕ ಸಂಘಟಕರು ಹೊಸ ಪ್ರಯತ್ನದಲ್ಲಿ ಯಶಸ್ವಿಯಾದರು. ಶಿವರಾತ್ರಿಯ ಮರುದಿನ ಪ್ರಾರಂಭವಾಗುವ ಹೋಳಿ ಹುಣ್ಣಿಮೆಯಂದು ಕಾಮಣ್ಣನನ್ನು ಸುಡುವ ಮೂಲಕ ಮೂರನೇ ದಿನ ಕೊನೆಗೊಳ್ಳುತ್ತದೆ. ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಾನಪದ ಸಂಗೀತ ಮತ್ತು ಅದರ ಸ್ಪರ್ಧೆ, ಮೂರು ದಿನಗಳ ಹೋಳಿ ಆಚರಣೆ ಮತ್ತು ಆ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯುತ್ತದೆ.

ಕಾರ್ಯಕ್ರಮದಲ್ಲಿ ಬಾಗಲಕೋಟೆ ಮೂಲದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಶಾಸಕ ಗೋಪಾಲಯ್ಯ, ಮಾಜಿ ಶಾಸಕ ನೆ..ನರೇಂದ್ರ ಬಾಬು, ರಾಜಾಜಿ ನಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಸ್.ಹರೀಶ್ ಮತ್ತು ಬಿಜೆಪಿ ಮುಖಂಡ ಜಗದೀಶ್ ಹಿರೇಮನಿ ಮೇಳದಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು.

ಹಲಗೆ ಮೇಳದ ಆಯೋಜಕರಾದ ಸಂಗಮೇಶ್ ಹಡ್ಲಿ, ಬದರಿ ಕಾಕಂಡಕಿ, ಶ್ರೀಶೈಲ್ ಜಿಗಜಿನ್ನಿ, ಅನಂತ್ ಧೋಂಖಾಡಿ, ಈಶ್ವರ್ ಇಂಡಿ, ನಾಗರಾಜ್ ಹುಂಡೇಕಾರ್ ಮತ್ತಿತರರ ಪರಿಶ್ರಮಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾ.10ರಿಂದ ರಂಭಾಪುರಿ ಪೀಠದಲ್ಲಿ ಜಾತ್ರೆ; ವೀರಭದ್ರಸ್ವಾಮಿ ಮಹಾರಥೋತ್ಸವ, ಜಗದ್ಗುರು ರೇಣುಕಾಚಾರ್ಯ ಜಯಂತಿ

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…