ಭಾಷೆ ಇಲ್ಲದಿದ್ದರೆ ಜಗತ್ತು ಕತ್ತಲೆಯೆಡೆಗೆ: ಹಿರಿಯ ಸಾಹಿತಿ ಹಂಪನಾ ಅಭಿಮತ

blank
blank

ಬೆಂಗಳೂರು: ಭಾಷೆ ಎಂಬ ದೀಪ ಇಲ್ಲದಿದ್ದರೆ ಜಗತ್ತು ಕತ್ತಲೆಯಲ್ಲಿ ಮುಳುಗುತ್ತಿತ್ತು ಎಂದು ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಹೇಳಿದ್ದಾರೆ.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವೀರಲೋಕ ಬುಕ್ಸ್​ನ 3ನೇ ವಾರ್ಷಿಕೋತ್ಸವ ಹಾಗೂ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆ ಎಂಬ ದೀಪ ಇಲ್ಲದಿದ್ದರೆ ಎನಾಗುತ್ತಿತ್ತು ಎಂಬುದನ್ನು ಕವಿಯೊಬ್ಬರು ಅದ್ಭುತವಾಗಿ ವರ್ಣಿಸಿದ್ದಾರೆ. ವಿದ್ಯುತ್​ ಮತ್ತು ವಿದ್ವತ್​ ಎರಡೂ ಮನುಷ್ಯನಿಗೆ ಅಗತ್ಯವಾಗಿದೆ. ವಿದ್ಯುತ್​ ಬೆಳಕು ನೀಡಿದರೆ, ವಿದ್ವತ್​ ಮನುಷ್ಯನನ್ನು ಬೆಳಗುತ್ತದೆ. ಚಿತ್ರಕಲಾವಿದ ಚಿತ್ರಕಲೆ ಮೂಲಕ ಹಲವು ಕಲ್ಪನೆ ಕೊಟ್ಟಿಕೊಡುತ್ತಾನೆ, ಲೇಖಕನು ಶಬ್ದದಲ್ಲೇ ಎಲ್ಲವನ್ನೂ ಸೃಷ್ಟಿ ಮಾಡುತ್ತಾನೆ ಎಂದು ವಿಶ್ಲೇಷಿಸಿದರು.

ವೀರಲೋಕ ಬುಕ್ಸ್​ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್​ ಮಾತನಾಡಿ, ಮೂರು ವರ್ಷಗಳಲ್ಲಿ 200-300 ಪುಸ್ತಕಗಳನ್ನು ಬಿಡುಗಡೆ ಮಾಡಬಹುದಿತ್ತು. ಆದರೆ, ಪುಸ್ತಕ ಸಂತೆ ಹಲವು ಪಾಠ ಕಲಿಸಿದೆ. ಜತೆಗೆ ಗುಣಮಟ್ಟದ ಪುಸ್ತಕಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ 150 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆ ಹಿಗ್ಗಿಸುವ ಸಲುವಾಗಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.

ಬಿಡುಗಡೆಯಾದ ಕೃತಿಗಳು: ಪತ್ರಕರ್ತನ ಪಯಣ (ಲಕ್ಷ್ಮಣ ಕೊಡಸೆ), ಸುಪಾರಿ ಸ್ವಾಮಿ ಮತ್ತು ಸಕೀನ (ರಾಗಂ), ವೀರ ಬಲ್ಲಾಳ (ಡಾ.(ಲಕ್ಷ್ಮಣ ಕೌಂಟಿ), ಲೋಕ ರಾವಣ (ರಾಧಾಕೃಷ್ಣ ಕಲ್ಚಾರ್​), ಭಾಷೆ& ಬದುಕು (ಡಾ.ಸಂತೋಷ ಹಾನಗಲ್ಲ), ದೇವ ಸನ್ನಾಧಿ (ಗಿರಿಜಾ ರೈಕ್ವ), ರುಚಿಗೆ ತಕ್ಕಷ್ಟು (ಅಕ್ಷತಾ ಪಾಂಡವಪುರ), ಏನಾಗುತ್ತೆ ಗುರು (ಆರ್​.ಬಿ. ಗುರುಬಸವರಾಜ) ಪುಸ್ತಕಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ನಟ ಮಂಡ್ಯ ರಮೇಶ್​ ನಿರ್ದೇಶಿಸಿರುವ “ಸ್ಥಾವರವೂ ಜಂಗಮ’ ನಾಟಕ ಪ್ರದರ್ಶನ ನಡೆಯಿತು. ಲೇಖಕ ಜಿ.ಎನ್​. ಮೋಹನ್​ ಹಾಜರಿದ್ದರು.

ಮೂವತ್ತು ವರ್ಷ ಹಿಂದೆ ಮಾಧ್ಯಮ ಕ್ಷೇತ್ರ ಹೇಗಿತ್ತು ಸೇರಿ ಇತ್ಯಾದಿ ಮಾಹಿತಿ ಕ್ರೋಡಿಕರಿಸಿ ಪುಸ್ತಕವನ್ನು ಬರೆದಿದ್ದಾನೆ. ಪತ್ರಕರ್ತರು, ಪತ್ರಿಕೋದ್ಯಮಿಗಳು, ವಿದ್ಯಾರ್ಥಿಗಳು ಈ ಪುಸ್ತಕವನ್ನು ಓದುವ ಅಗತ್ಯ ಇದೆ.
| ಲಕ್ಷ್ಮಣ ಕೊಡಸೆ, ಹಿರಿಯ ಪತ್ರಕರ್ತ

ರಾಷ್ಟ್ರಕ್ಕೆ ಭಾಷಾ ನೀತಿ ಅಗತ್ಯ ಇದೆಯೇ, ದ್ವಿಭಾಷಾ ಮತ್ತು ತ್ರಿಭಾಷಾ ನೀತಿಯಿಂದ ಜಾರಿಗೆ ತಂದರೆ ಅನುಕೂಲ ಮತ್ತು ಪರಿಣಾಮಗಳೇನು ಎಂಬುದರ ಕುರಿತು ಪುಸ್ತಕದಲ್ಲಿ ನಮೂದಿಸಿದ್ದೇನೆ. ಇದನ್ನು ಪ್ರತಿಯೊಬ್ಬರೂ ಓದಬೇಕು.
| ಡಾ. ಸಂತೋಷ ಹಾನಗಲ್ಲ, ಲೇಖಕ.

 

ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿ: ಕೇಂದ್ರಕ್ಕೆ ಮಹೇಂದ್ರ ಮುಣೋತ್​ ಮನವಿ

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…