ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಕೈಗೆತ್ತಿಗೊಂಡಿರುವ ಸಿಬಿಐ, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನು ಗ್ರಿಲ್ ಮಾಡುತ್ತಿದ್ದಾರೆ.
ಆದರೆ, ರಿಯಾ ಒಂದು ಮುಖವಾಡ ಅಷ್ಟೇ, ಒಳಗೆ ಇನ್ನ್ಯಾರೋ ಇದ್ದಾರೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸ್, ಭಲಾಡ್ಯರನ್ನು ರಕ್ಷಿಸುತ್ತಿದ್ದಾರೆ ಎಂದು ಸಹ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ರಿಯಾ ಚಕ್ರವರ್ತಿ ಕಪಾಳಕ್ಕೆ ಬಾರಿಸಿದರಾ ಸಿಬಿಐ ಅಧಿಕಾರಿ?
ಈ ಕುರಿತು ಟ್ವೀಟ್ ಮಾಡಿರುವ ವಿವೇಕ್ ಅಗ್ನಿಹೋತ್ರಿ, ಒಂದು ಹಳೆ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ. ಈ ಹಿಂದೆ ಒಬ್ಬ ದೊಡ್ಡ ಸ್ಟಾರ್ ನಟ ಹೇಗೆ ಸುಶಾಂತ್ಗೆ ಧಮ್ಕಿ ಹಾಕಿದ್ದರು ಎಂಬುದನ್ನು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಒಂದು ಫಾರ್ಮ್ ಹೌಸ್ನಲ್ಲಿ ದೊಡ್ಡ ಪಾರ್ಟಿ ನಡೆಯುತ್ತಿತ್ತಂತೆ. ಈ ಸಂದರ್ಭದಲ್ಲಿ ಸುಶಾಂತ್ ಮತ್ತು ಇನ್ನೊಬ್ಬ ಉದಯೋನ್ಮುಖ ನಟನ ನಡುವೆ ಒಂದು ಸಣ್ಣ ಜಗಳವಾಗಿದೆ. ಆ ನಟನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಒಬ್ಬ ಸ್ಟಾರ್ ನಟ. ತನ್ನೆದುರಿಗೇ ತನ್ನ ಹುಡುಗನ ಜತೆಗೆ ಸುಶಾಂತ್ ಜಗಳವಾಡುತ್ತಿರುವುದನ್ನು ನೋಡಿದ ಆ ಸ್ಟಾರ್ ನಟ ಸಿಟ್ಟಾಗುವುದಷ್ಟೇ ಅಲ್ಲ, ‘ನಿನ್ನ ಕೆರಿಯರ್ ಮುಗಿಸಿಬಿಡ್ತೀನಿ’ ಎಂದು ಸುಶಾಂತ್ಗೆ ಧಮ್ಕಿ ಹಾಕಿದ್ದರಂತೆ. ಆದರೆ, ಆ ಸ್ಟಾರ್ ನಟ ಯಾರು ಎಂದು ವಿವೇಕ್ ಅಪ್ಪಿತಪ್ಪಿಯೂ ಎಲ್ಲೂ ಹೇಳಿಲ್ಲ.
ಇದನ್ನೂ ಓದಿ: ಸನ್ನಿ ಲಿಯೋನ್ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್!
ಈ ಕುರಿತು ಮಾತನಾಡಿರುವ ವಿವೇಕ್, ‘ರಿಯಾ ಒಂದು ಮುಖವಾಡ ಅಷ್ಟೇ. ನಿಜಕ್ಕೂ ತಪ್ಪು ಮಾಡಿರುವವರು ಬೇರೆ ಯಾರೋ ಇದ್ದಾರೆ. ಅವರನ್ನೆಲ್ಲಾ ಸರ್ಕಾರ ಮತ್ತು ಪೊಲೀಸ್ ರಕ್ಷಿಸುತ್ತಿದೆ’ ಎಂದು ಬಾಂಬ್ ಸಿಡಿಸಿದ್ದಾರೆ.
ಇನ್ನು ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಡ್ರಗ್ಸ್ ಸಂಸ್ಕೃತಿಯ ಬಗ್ಗ ಮಾತನಾಡಿರುವ ಅವರು, ‘ಅದು ಈಗಿನ ಕಥೆಯಲ್ಲ. ಕಳೆದ 10 ವರ್ಷಗಳಿಂದ ಜಾರಿಯಲ್ಲಿದೆ ಮತ್ತು ಬಹಳ ಸಹಜವಾಗಿಬಿಟ್ಟಿದೆ’ ಎಂದು ವಿವೇಕ್ ಹೇಳಿಕೊಂಡಿದ್ದಾರೆ.
ಡ್ರಗ್ ಮಾಫಿಯಾ; ಚಿರು ಸರ್ಜಾ ವಿರುದ್ಧ ಮಾತನಾಡಿದವರಿಗೆ ಚೇತನ್ ಚಾಟಿ!