ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಎಲ್ಲಡೆ ಚರ್ಚೆಯಾಗುತ್ತಿರುವ ನಡುವೆಯೇ ಸುದೀಪ್ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಸುದೀಪ್ ಮ್ಯಾನೇಜರ್ ಜಾಕ್ ಮಂಜು ಅವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಬೆದರಿಕೆ ಪತ್ರ ಪ್ರಕರಣವನ್ನು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದೆ.
ಇದನ್ನೂ ಓದಿ: ಪ್ಲಾಸ್ಟಿಕ್ ಕೊಡಿ ಚಿನ್ನ ತಗೊಳ್ಳಿ! ಹೊಸ ಸಾಹಸಕ್ಕೆ ಕೈ ಹಾಕಿದ ಜಮ್ಮು ಕಾಶ್ಮೀರದ ಗ್ರಾಮ
ಬೆದರಿಕೆ ಪತ್ರದಲ್ಲಿ ಏನಿದೆ?
ಹಾಗಾದ್ರೆ ಸುದೀಪ್ಗೆ ಬಂದ ಬೆದರಿಕೆ ಪತ್ರದಲ್ಲಿ ಏನಿದೆ ಅಂತಾ ನೋಡುವುದಾದರೆ, ಎಷ್ಟು ಜನ ಹೆಣ್ಣು ಮಕ್ಕಳ ಬಾಳು ಹಾಳು ಮಾಡಿತ್ತಿಯೋ, ಈ ಸಲ ಅದಕ್ಕೆಲ್ಲ ಒಂದು ಕೊನೇ ಮಾಡುತ್ತೇವೆ. ನಿನ್ನ ರಾಸಲೀಲೆ ವಿಡಿಯೋ, ನಿನ್ನ ಪಂಜಾಬಿ ಹುಡುಗಿ, ನಿನ್ನ ಚೆನ್ನೈ ಹುಡುಗಿ, ನಿನ್ನ ದುಬೈ, ನಿನ್ನ ರಾಜ ರಾಜೇಶ್ವರಿ ನಗರ ವಿಡಿಯೋ ಹಾಗೂ ನಿನ್ನ ಜೆಪಿ ನಗರ ವೀಡಿಯೋವನ್ನು ಮಹಾ ಸಾಚ ಅಂದುಕೊಂಡಿರುವ ನಿನ್ನ ಸ್ನೇಹಿತರ ಮುಂದೆ ಬೇಗ ಸೇರುತ್ತದೆ. ನೀನು ಕ್ರಿಕೆಟ್ ಆಡು. ನಾವು ನಿನ್ನನ್ನು ಹೆದರಿಸುತ್ತಿಲ್ಲ ಮತ್ತು ಬ್ಲಾಕ್ಮೇಲ್ ಸಹ ಮಾಡುತ್ತಿಲ್ಲ. ಮೇಕಪ್ ಇಲ್ಲದೆ ಇರುವ ನಿನ್ನ ನಿಜವಾದ ಮುಖ ಜನರಿಗೆ ಗೊತ್ತಾಗಬೇಕು. ನಿರ್ಮಾಪಕರಿಗೆ ಹೊಟ್ಟೆ ಉರಿಸಿದರೆ ಸುಮ್ಮನೆ ಇರುತ್ತಾರೇನೋ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಂದಹಾಗೆ ಜಾಕ್ ಮಂಜು ನೀಡಿರುವ ದೂರಿನನ್ವಯ ಐಪಿಸಿ 504 (ಬೆದರಿಕೆ), 506 (ಪ್ರಾಣ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದ್ದು, ಮುಂದೆ ಏನು ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ನಟ ಸುದೀಪ್ಗೆ ಬೆದರಿಕೆ ಪತ್ರ: ದೂರು ದಾಖಲು
ಇದರ ನಡುವೆ ಇಂದು ಕಿಚ್ಚ ಸುದೀಪ್, ಬಿಜೆಪಿ ಸೇರಲಿದ್ದಾರೆ ಎಂದು ಬಹಳ ಚರ್ಚೆಯಾಗುತ್ತಿದೆ. ಇಂದು ಸುದೀಪ್ ಕರೆದಿರುವ ಸುದ್ದಿಗೋಷ್ಠಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿ ಸೇರ್ತಾರಾ ಅಥವಾ ಹೊಸ ಸಿನಿಮಾಗಳ ಬಗ್ಗೆ ಮಾಹಿತಿ ನೀಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದ್ದು, ಇಂದು ಮಧ್ಯಾಹ್ನ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆ. (ದಿಗ್ವಿಜಯ ನ್ಯೂಸ್)
ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ನಟ ಸುದೀಪ್ಗೆ ಬೆದರಿಕೆ ಪತ್ರ: ದೂರು ದಾಖಲು
ನಟ ಸುದೀಪ್ ಬಿಜೆಪಿ ಸೇರುತ್ತಾರಾ?! ಇಂದು ಮಧ್ಯಾಹ್ನ ಸಿಎಂ ಸುದ್ದಿಗೋಷ್ಟಿ
ಪ್ಲಾಸ್ಟಿಕ್ ಕೊಡಿ ಚಿನ್ನ ತಗೊಳ್ಳಿ! ಹೊಸ ಸಾಹಸಕ್ಕೆ ಕೈ ಹಾಕಿದ ಜಮ್ಮು ಕಾಶ್ಮೀರದ ಗ್ರಾಮ