More

    ‘ಪುಷ್ಪರಾಜ್’ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಪಡೆದಿದ್ದು ಅಲ್ಲು ಅರ್ಜುನ್​ ಅಲ್ಲ! ಬದಲಿಗೆ ಈ ನಟ

    ಆಂಧ್ರಪ್ರದೇಶ: ಟಾಲಿವುಡ್​ನ ಐಕಾನ್ ಸ್ಟಾರ್​, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ ದಿ ರೈಸ್’​ ಭಾಗ 1 ತೆಲುಗು ಸಿನಿಮಾ 2021ರಲ್ಲಿ ರಿಲೀಸ್ ಆಗಿ, ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿತು. ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್​ ಅಭಿನಯಕ್ಕೆ ಫಿದಾ ಆದ ಸಿನಿಪ್ರೇಕ್ಷಕರು, ನಟನ ಪಾತ್ರವನ್ನು ಮೆಚ್ಚಿ, ಪುಷ್ಪರಾಜ್ ನಡೆಯುವ ಶೈಲಿ, ಡೈಲಾಗ್​ಗಳನ್ನು ಅನುಕರಣೆ ಮಾಡುತ್ತಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಚಿತ್ರವು ಸೆನ್ಸೇಷನಲ್ ಹಿಟ್ ಆಗುವುದರ ಜತೆಗೆ ಸಾಕಷ್ಟು ಜನಪ್ರಿಯತೆ ಗಳಿಸಿ, ಅಲ್ಲು ಅರ್ಜುನ್​ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು.

    ಇದನ್ನೂ ಓದಿ: ಪ್ರಾಣ ಹಿಂಡುತ್ತಿರುವ ಶಬ್ಧ ಮಾಲಿನ್ಯ; ರಾತ್ರಿ ನಿದ್ರೆಗೆ ಭಂಗ, ಹೃದಯಾಘಾತ ಹೆಚ್ಚುವ ಆತಂಕ

    ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಜೋಡಿಯನ್ನು ತೆರೆಯ ಮೇಲೆ ನೋಡಿದ ಸಿನಿಪ್ರಿಯರು, ಮುಂದಿನ ಭಾಗದಲ್ಲಿಯೂ ಇವರಿಬ್ಬರೇ ಜೋಡಿಯಾಗಿ ನಟಿಸಬೇಕು ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಪ್ರೇಕ್ಷಕರ ಆಶಯದಂತೆಯೇ ಇದೀಗ ಪುಷ್ಪ ಭಾಗ 2ರ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಆಗಸ್ಟ್​ 15ರಂದು ಚಿತ್ರವನ್ನು ಜಾಗತಿಕವಾಗಿ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ದಿನಾಂಕವಿರುವ ಆಕರ್ಷಕ ಪೋಸ್ಟರ್​ ಅನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಇನ್ನು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರ ಪುಷ್ಪರಾಜ್ ಪಾತ್ರವನ್ನು ಕೊಂಡಾಡಿದ್ದ ಸಿನಿಪ್ರಿಯರಿಗೆ ಈ ಸಂಗತಿ ತಿಳಿದರೆ ಖಂಡಿತ ಅಚ್ಚರಿ ಮೂಡುವುದರಲ್ಲಿ ಅನುಮಾನವೇ ಬೇಡ.

    ಇದನ್ನೂ ಓದಿ: ಶೂಟಿಂಗ್​ನಲ್ಲಿ ಭಾರತಕ್ಕೆ21ನೇ ಒಲಿಂಪಿಕ್ಸ್​ ಕೋಟಾ; ಪ್ಯಾರಿಸ್​ಗೆ ದಾಖಲೆಯ ಶೂಟರ್​ಗಳು

    ಹೌದು, ಅಸಲಿಗೆ ಪುಷ್ಪರಾಜ್ ಪಾತ್ರವನ್ನು ನಿರ್ವಹಿಸಲು ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಮೊದಲು ಕೇಳಲಾಗಿತ್ತು. ಆದರೆ, ಇದು ಅಂದುಕೊಂಡಂತೆ ನಡೆಯಲಿಲ್ಲ ಎಂದು ಚಿತ್ರರಂಗದ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಆದರೆ, ಈ ಸುದ್ದಿ ತಿಳಿದ ಅನೇಕರು, ಆ ಪಾತ್ರಕ್ಕೆ ಅಲ್ಲು ಅರ್ಜುನ್​ ಅವರೇ ಸರಿ, ಕೊಟ್ಟ ರೋಲ್​ಗೆ ನ್ಯಾಯ ಒದಗಿಸಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.

    ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

    ಇನ್ನೇನು ತಾಳಿ ಕಟ್ಟಬೇಕು ಅಷ್ಟರೊಳಗೆ ಅವನು ಬೇಡ ಎಂದಳು ವಧು! ಆಕೆ ಕೊಟ್ಟ ಕಾರಣ ಕೇಳಿ ವರ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts