ಕೋಟ: ಹೂವಿನಕೋಲು ಕಾರ್ಯಕ್ರಮ ಪ್ರತಿ ಮನೆಗಳಲ್ಲೂ ಚೈತನ್ಯ ಹಾಗೂ ಬೆಳಕು ತುಂಬುತ್ತದೆ. ಈ ಕಲಾಪ್ರಕಾರವನ್ನು 13 ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿರುವ ಯಶಸ್ವಿ ಕಲಾವೃಂದದ ಕಾರ್ಯ ಸ್ವಾಗತಾರ್ಹ ಎಂದು ಕೊರ್ಗಿ ಜಯಪ್ರಕಾಶ ಹೆಗ್ಡೆ ಹೇಳಿದರು. ಕೊಮೆ ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಶ್ವೇತಯಾನ-71 ಪ್ರಯುಕ್ತ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಕ್ಲಬ್ ತೆಕ್ಕೆಟ್ಟೆಯ ಸುಧಾಕರ ಶೆಟ್ಟಿ, ದೇವದಾಸ್ ರಾವ್ ಕೂಡ್ಲಿ, ಹರ್ಷಿತಾ ಅಮೀನ್, ಆರಬಿ ಹೆಗಡೆ ನಿಟ್ಟೂರು, ಪರಿಣಿತಾ ವೈದ್ಯ ಉಪಸ್ಥಿತರಿದ್ದರು.