ಶಿರಾಡಿಯಲ್ಲಿ ವಿಶ್ವಕರ್ಮ ಪೂಜೆ

Kdb_Vishwakarma

ನೆಲ್ಯಾಡಿ: ಇಲ್ಲಿನ ವಿಶ್ವಕರ್ಮ ಸೇವಾ ಸಂಘದ ವತಿಯಿಂದ 16ನೇ ವರ್ಷದ ವಿಶ್ವಕರ್ಮ ಪೂಜೆ ಕೇಶವ ಆಚಾರ್ಯ ಪೌರೋಹಿತ್ಯದಲ್ಲಿ ಶಿರಾಡಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು.

ಬೆಳಗ್ಗೆ ವಿಶ್ವಕರ್ಮ ಪೂಜೆ ಬಳಿಕ ಭಜನೆ ನಡೆಯಿತು. ಬಳಿಕ ಮಹಾಪೂಜೆ ಜರುಗಿತು. ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಪಿ.ಟಿ. ಕಡಬ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಮಾಜದವರು ಕೈ ಜೋಡಿಸಬೇಕು. ಈ ಮೂಲಕ ಸಂಘಟಿತರಾಗಿ ನಾವು ಇನ್ನಷ್ಟು ಸದೃಢರಾಗಬೇಕು ಎಂದರು.

ಪುರೋಹಿತ ಕೇಶವ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ತಂಗಮಣಿ ಕೆ.ಆರ್. ಶಿರಾಡಿ ಅವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿ ವಿ.ಕ.ಸೇ.ಸಂ.ದ ನಿವೇಶನ ಖರೀದಿ ಅಧ್ಯಕ್ಷ ಶಶಿಧರ ಕೆ.ಆರ್.ಶಿರಾಡಿ ಪ್ರಾಸ್ತಾವಿಸಿದರು. ಸಂಘದ ಕಾರ್ಯದರ್ಶಿ ಶಶೀಂದ್ರ ಆಚಾರ್ಯ ವರದಿ ವಾಚಿಸಿದರು. ಸುರೇಂದ್ರ ಶಿರಾಡಿ ಸ್ವಾಗತಿಸಿದರು. ಶಿಕ್ಷಕಿ ಉಷಾ ಕೆ.ಕೆ. ವಂದಿಸಿದರು. ಶಿಕ್ಷಕಿ ಸುಧಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Share This Article

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…