More

    ಆದಿಪುರುಷ್​ ಸಿನಿಮಾದ ಬಗ್ಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ವಿಶಿಷ್ಟ ವಿಮರ್ಶೆ!

    ನವದೆಹಲಿ: ಕ್ರಿಕೆಟ್​ ಮೈದಾನದಲ್ಲಿ ಸ್ಫೋಟಕ ಆಟವಾಡಿ ನಿವೃತ್ತಿ ಹೊಂದಿದ ಬಳಿಕ ಟ್ವಿಟರ್​ನಲ್ಲಿ ಚಟಾಕಿಗಳನ್ನು ಹಾರಿಸುವ ಮೂಲಕ ಗಮನಸೆಳೆಯುತ್ತ ಬಂದಿರುವ ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ವೀರೇಂದ್ರ ಸೆಹ್ವಾಗ್​, ಇದೀಗ “ಆದಿಪುರುಷ್​’ ಸಿನಿಮಾದ ಬಗ್ಗೆ ತಮಾಷೆಯ ವಿಮರ್ಶೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ರಾಮಾಯಣದ ಕಥೆಯನ್ನು ಹೊಂದಿರುವ ಸಿನಿಮಾ ವಿಮರ್ಶಕರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಸೂಪರ್​ಸ್ಟಾರ್​ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರಗಳ ವೇಷಭೂಷಣ, ಗ್ರಾಫಿಕ್ಸ್​ ಮತ್ತು ಸಂಭಾಷಣೆಯ ಕಳಪೆ ಗುಣಮಟ್ಟದಿಂದ ಟೀಕೆಗಳನ್ನು ಎದುರಿಸಿದೆ. ಅಲ್ಲದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸಿನಿಮಾ ಎಂಬ ಟೀಕೆಗೂ ಗುರಿಯಾಗಿದೆ. ಇಂಥ ನಕಾರಾತ್ಮಕ ವಿಮರ್ಶೆಗಳ ನಡುವೆ ಸೆಹ್ವಾಗ್​ ಕೂಡ ಚಿತ್ರತಂಡದ ಕಾಲೆಳೆದಿದ್ದಾರೆ.

    “ಆದಿಪುರುಷ್​ ಸಿನಿಮಾ ನೋಡಿದ ಬಳಿಕ ನನಗೆ, ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬುದು ಗೊತ್ತಾಯಿತು’ ಎಂದು ಸೆಹ್ವಾಗ್​ ಒಂದೇ ಸಾಲಿನಲ್ಲಿ ತಮಾಷೆಯಾಗಿ ಸಿನಿಮಾವನ್ನು ವಿಮರ್ಶಿಸಿದ್ದಾರೆ. ಪ್ರಭಾಸ್​ ಈ ಹಿಂದೆ ಅಭಿನಯಿಸಿದ್ದ ಬಾಹುಬಲಿ ಸಿನಿಮಾದ ಪಾತ್ರವನ್ನೂ ಎಳೆದುತರುವ ಮೂಲಕ ಸೆಹ್ವಾಗ್​, ಸಿನಿಮಾವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

    ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts