blank

ಹಿಮಪಾತದ ನಡುವೆ ಹೆಪ್ಪುಗಟ್ಟಿದ ನೀರಿಗಿಳಿದ ವ್ಯಕ್ತಿ; Viral Video ನೋಡಿ ಹೊಗಳಿದ ನೆಟ್ಟಿಗರು

blank

ಧರ್ಮಶಾಲಾ: ಚಳಿಗಾಲ ಅಥವಾ ಮಳೆಗಾಲ ಬಂದಾಗ ಶೀತದ ಸಮಯದಲ್ಲಿ ಜನರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸುತ್ತಾರೆ.ಉತ್ತಮ ಬಟ್ಟೆಗಳನ್ನು ತೊಡುವ ಮೂಲಕ ದೇಹವನ್ನು ಬೆಚ್ಚಗಿಡಲು ಪ್ರಯತ್ನಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು(Viral Video) ಹರಿದಾಡುತ್ತಿದೆ. ಅದರಲ್ಲಿ ವ್ಯಕ್ತಿಯೊಬ್ಬರು -13 ಡಿಗ್ರಿ ತಾಪಮಾನವಿರುವ ಮಂಜುಗೆಡ್ಡೆಯ ನೀರಿಗೆ ಇಳಿದಿದ್ದಾರೆ.

blank

ಇದನ್ನು ಓದಿ: ನಾಸಾ ಗಗನಯಾತ್ರಿ ಹಂಚಿಕೊಂಡ ಬಾಹ್ಯಾಕಾಶದ Video Viral; ಇದು Fake ಎಂದ ನೆಟ್ಟಿಗರು

ವಾಸ್ತವವಾಗಿ ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೀರಿಗೆ ಇಳಿದು, ನೀರಿನಲ್ಲಿ ಏನನ್ನೋ ತೆಗೆಯುತ್ತಿರುವುದನ್ನು ನೋಡಬಹುದು. ಅಸಲಿಗೆ ಅವರು ಜಲಶಕ್ತಿ ಇಲಾಖೆ ನೌಕರರಾಗಿದ್ದಾರೆ. ಬಟ್ಟೆಯಿಲ್ಲದೆ ಚಳಿಯಲ್ಲಿ ಬರಿ ಒಳಉಡುಪಿನಲ್ಲಿ ಮಂಜುಗಡ್ಡೆಯಿಂದ ಕೂಡಿರುವ ನೀರಿನಲ್ಲಿ ಇಳಿದಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಹಿಮಾಚಲ ಪ್ರದೇಶದ ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಕೂಡ ಹಂಚಿಕೊಂಡು ಉದ್ಯೋಗಿಗಳನ್ನು ಹೊಗಳಿದ್ದಾರೆ.

blank

12 ಸೆಕೆಂಡ್​ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಉದ್ಯೋಗಿಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದಾರೆ. ಯಾವುದೇ ಸುರಕ್ಷತಾ ಕಿಟ್ ಅಥವಾ ಯಾವುದೇ ಸಾಧನವಿಲ್ಲ, ನಾಚಿಕೆಯಾಗಬೇಕು ನಿಮಗೆ, ನೀವೇಅಂತಹ ತಣ್ಣೀರಿಗೆ ಹೋಗಿದ್ದರೆ ನಾವು ಕೂಡ ನಿಮ್ಮನ್ನು ಹೀಗೆಯೇ ಹೊಗಳುತ್ತಿದ್ದೆವು, ಅವರಿಗೆ ಬಹುಮಾನ ನೀಡಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)

ರೂಮ್​ ಹೀಟರ್​ನಲ್ಲಿ ಚಪಾತಿ ಮಾಡಿದ ಮಹಿಳೆ; Viral Video ನೋಡಿ ರಿಸ್ಕಿ ಜುಗಾಡ್​​ ಎಂದ ನೆಟ್ಟಿಗರು

Share This Article

ಮಿದುಳಿನ ಆರೋಗ್ಯ ರಕ್ಷಣೆಗೆ ನಾವೇನು ಮಾಡಬೇಕು?

ಇಂದು ಕೃತಕ ಬುದ್ಧಿಮತ್ತೆ ಕೂಡ ನಮ್ಮ ಕೈಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಮಿದುಳಿನ ಆರೋಗ್ಯ ದಿನೇ…

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…