ಬಿಹಾರ: ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ಗ್ರಾಮಸ್ಥರು ಸಿಮೆಂಟ್, ಹರಳು ಮಿಶ್ರಣವನ್ನು ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಇದು ವಿಚಿತ್ರ ಎನಿಸಿದರೂ… ಬಿಹಾರದ ಜೆಹಾನಾಬಾದ್ ನಲ್ಲಿ ನಡೆದಿರುವ ಈ ದರೋಡೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಸಡಕ್ ಗ್ರಾಮ ಯೋಜನೆಯಡಿಯಲ್ಲಿ ಗ್ರಾಮಕ್ಕೆ ಮೂರು ಕಿಲೋಮೀಟರ್ ರಸ್ತೆ ನಿರ್ಮಾಣ ಯೋಜನೆ ನಿಗದಿಯಾಗಿದ್ದು, ಇದನ್ನು ಮೂರು ತಿಂಗಳ ಹಿಂದೆ ಆರ್ ಜೆಡಿ ಶಾಸಕ ಸತೀಶ್ ಕುಮಾರ್ ದಾಸ್ ಚಾಲನೆ ನೀಡಿದ್ದರು.
ಅನುಮತಿ ದೊರೆತ ನಂತರ ಜಹಾನಾಬಾದ್ನ ಮಖದುಂಪುರದ ಔದಾನ ಭೇಗಾ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಯಿತು. ಗ್ರಾಮದಲ್ಲಿ ಕಾಂಕ್ರೀಟ್ ಹಾಕಬೇಕಾದ ಜಾಗ ಗುರುತಿಸಲಾಗಿದೆ. ಗುತ್ತಿಗೆದಾರರ ಸಮ್ಮುಖದಲ್ಲಿ ಆ ಸ್ಥಳಗಳಲ್ಲಿ ಕಾಂಕ್ರೀಟ್ ಹಾಕುವ ಕಾರ್ಯ ಆರಂಭವಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣದ ಬಳಿಕ ಕಾರ್ಮಿಕರು ಹಾಗೂ ಗುತ್ತಿಗೆದಾರರು ಸ್ಥಳದಿಂದ ತೆರಳಿದ್ದಾರೆ. ನಂತರ ಈ ರಸ್ತೆಗೆ ಹಾಕಲಾಗಿದ್ದ ವಸ್ತುಗಳನ್ನು ಜನರೇ ಕದ್ದುಕೊಂಡು ಹೋಗಿದ್ದಾರೆ.
बिहार में लोगों ने मुख्यमंत्री की सड़क ही लूट ली!
जहानाबाद के मखदूमपुर के औदान बीघा गांव में मुख्यमंत्री सड़क ग्राम योजना के तहत सड़क बनाई जा रही थी. दावा है कि ढलाई के समय लोग पूरा मटेरियल ही लूट ले गये. बताया जा रहा कि इससे पहले भी ये सड़क ऐसे ही लूट ली गई थी. (@AdiilOfficial) pic.twitter.com/ZCBiStXr5Y
— Utkarsh Singh (@UtkarshSingh_) November 3, 2023
ರಸ್ತೆಗೆ ಹೊಸದಾಗಿ ಹಾಕಿದ ಸಿಮೆಂಟ್ ಕಾಂಕ್ರೀಟ್ನ್ನು ಬುಟ್ಟಿಯಲ್ಲಿ ತುಂಬಿಕೊಂಡು ತಮ್ಮ ಮನೆಗಳಿಗೆ ಸಾಗಿಸಲು ಆರಂಭಿಸಿದ್ದಾರೆ. ಎಲ್ಲರೂ ನೋಡುತ್ತಿರುವಾಗಲೇ ಹೊಸದಾಗಿ ಕಾಂಕ್ರೀಟ್ ಹಾಕಿದ್ದ ರಸ್ತೆಯನ್ನು ಗ್ರಾಮಸ್ಥರು ತೆರವುಗೊಳಿಸಿದರು.
ಸುಮಾರು ಎರಡು ಗಂಟೆಗಳ ನಂತರ ಗುತ್ತಿಗೆದಾರರು ಬಂದು ರಸ್ತೆಯ ಸ್ಥಿತಿಗತಿಯನ್ನು ನೋಡಿದರು. ಇಡೀ ರಸ್ತೆಯನ್ನು ಗ್ರಾಮಸ್ಥರೇ ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
VIDEO | ಆಹಾರ ತಿನ್ನುವುದನ್ನು ನಿಲ್ಲಿಸಿ ಮೃತ ಮಾಲೀಕನಿಗಾಗಿ ಶವಾಗಾರದ ಎದುರೇ 4 ತಿಂಗಳಿನಿಂದ ಕಾಯುತ್ತಿರುವ ಶ್ವಾನ