ಹಳೇ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ, ಈಗಿರುವವರನ್ನು ಭಗವಂತ ಬಂದರೂ ಕಾಪಾಡಲ್ಲ: V Somanna

Somanna Siddaramaiah

ಬಾಗಲಕೋಟೆ: ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಹಳೇ ಸಿದ್ದರಾಮಯ್ಯ ಇದ್ದರೆ ಹುಡುಕಿ ಕೊಡಿ. ಹೊಸ ಸಿದ್ದರಾಮಯ್ಯರಿಗೆ ಆಡಳಿತ ಮಾಡಲು ಆಗುತ್ತಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಟೀಕಿಸಿದ್ದಾರೆ.

ಬಾಗಲಕೋಟೆಯಲ್ಲಿ ವಿವಿಧ ರೈಲ್ವೆ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ (V Somanna), ಸಿದ್ದರಾಮಯ್ಯ ಚಾವಿನೂ ಗೊತ್ತಿಲ್ಲ, ಡಿಕೆಶಿನೂ ಗೊತ್ತಿಲ್ಲ. ನನಗೆ ಗೊತ್ತಿರುವುದು, ಸಿದ್ದರಾಮಯ್ಯ ಮಂತ್ರಿ ಆಗಿದ್ದಾಗ ನಾನು ಮಂತ್ರಿ ಆಗಿದ್ದವನು. ಅವರ ಹತ್ತಿರದಲ್ಲಿ ಕೆಲಸ ಮಾಡಿದ್ದೇನೆ. ಆದರೆ, ಹಳೇ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಈ ಸಿದ್ದರಾಮಯ್ಯ ನನಗೆ ಗೊತ್ತಿಲ್ಲ. ಇವತ್ತಿನ ಸಿದ್ದರಾಮಯ್ಯ ಅವರ ಅವ್ಯವಸ್ಥೆಯನ್ನು ಭಗವಂತ ಬಂದರೂ ಕಾಪಾಡಲ್ಲ. ಅವರಿಗೇನಾದರೂ ಇನ್ನೂ ಸ್ವಲ್ಪ ನೈತಿಕತೆ ಇದ್ದರೆ ಕೈಮುಗಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ.

centrol minister v.somanna
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

ಈ ಸರ್ಕಾರ ಒಂದು ರೀತಿ ಅಸಹ್ಯ ಅನ್ನಿಸುತ್ತಿದೆ. ಸಿದ್ದರಾಮಯ್ಯ ಅವರ ಕಾರ್ಯವೈಖರಿ, ಅನುಭವ, ದೂರದೃಷ್ಟಿ, ಚಿಂತನೆ ಎಲ್ಲವೂ ಮಾಯವಾಗಿದೆ. ಇದೊಂದು ಮಾಯಾಬಜಾರ್ ಸರ್ಕಾರ. ಯಾರ ದಯಾಮರಣ ಅಲ್ಲ, ಏನು ಹೇಳಿದರೂ ಅವರ ತಲೆಗೆ ಹೋಗುವುದಿಲ್ಲ. ಅವರು ಖುರ್ಚಿ ಉಳಿಸಿಕೊಳ್ಳಲು ಕಾತೂರ ಆಗಿದ್ದಾರೆ ವಿನಃ ಸರ್ಕಾರ ನಡೆಸಬೇಕು, ಜನರಿಗೆ ಸ್ಪಂದಿಸಬೇಕು ಯಾವುದು ಇಲ್ಲ. ಹೀಗಾಗಿ ಎರಡ್ಮೂರು ತಿಂಗಳಲ್ಲಿ ಈ ರಾಜ್ಯಕ್ಕೆ ಹೆಚ್ಚಿನ‌ ಗಂಡಾಂತರ ಬರುತ್ತದೆ.

ನಾನು ಸಹ ಐದು ಬಾರಿ ಶಾಸಕ, ಎರಡು ಸಲ ಪರಿಷತ್ ಸದಸ್ಯ ಆರು ಸಲ ಮಂತ್ರಿ ಆಗಿದ್ದೇನೆ. ನೂರಾರು ಕಡೆಗೆ ಹೋಗಿದ್ದೇನೆ. ಈ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ಮನೆ ಕಟ್ಟಲು ಆಗಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೊಟ್ಟಿರುವ ಮನೆಗಳು ಇಲ್ಲವಾಗಿವೆ. ಕೊಟ್ಟಿರುವ ದುಡ್ಡು ಏನಾಯಿತು ಗೊತ್ತಿಲ್ಲ. ಸಿದ್ದರಾಮಯ್ಯ ಈ ಮಟ್ಟದ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದರೆ ಇದಕ್ಕಿಂತ ತಲೆಬಾಗಿಸುವ ಕೆಲಸ ಮತ್ತೊಂದಿಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ (V Somanna) ವಾಗ್ದಾಳಿ ನಡೆಸಿದ್ದಾರೆ.

ತಂಗಿಯ Instagram ರೀಲ್​ಗೆ ಕಮೆಂಟ್​ ಮಾಡಿದ ಯುವಕನಿಗೆ ಬರ್ಬರವಾಗಿ ಇರಿದ ಅಣ್ಣ

ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ, ಸಂತೋಷ ತರಲಿ; ಬಿಡುಗಡೆ ಬಳಿಕ ನಟ Darshan ಮೊದಲ ಪೋಸ್ಟ್​

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…