ಬಂಟಕಲ್ಲು ದೇವಳ ಅಧ್ಯಕ್ಷರಾಗಿ ಉಮೇಶ್

bantakal

ಶಿರ್ವ: ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರರಾಗಿ ಸೂಡ ಗಂಪದಬೈಲು ಜಯರಾಮ ಪ್ರಭು, ಅಧ್ಯಕ್ಷರಾಗಿ ಉಮೇಶ್ ಪ್ರಭು ಪಾಲಮೆ, ಉಪಾಧ್ಯಕ್ಷರಾಗಿ ಎಳ್ಳಾರೆ ಪಾಂಡುರಂಗ ಕಾಮತ್ ಅವಿರೋಧ ಆಯ್ಕೆಯಾಗಿದ್ದಾರೆ.

ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಸದಸ್ಯರಾಗಿ ಶಶಿಧರ ವಾಗ್ಲೆ, ಸಂತೋಷ್ ವಾಗ್ಲೆ, ಸುರೇಂದ್ರ ನಾಯಕ್, ಶಿವರಾಮ ನಾಯಕ್, ಉಮೇಶ ನಾಯಕ್, ಸತ್ಯನಾರಾಯಣ ನಾಯಕ್, ಗಣಪತಿ, ವಿಠಲ್, ಉದಯ ಪ್ರಭು, ರಾಮದಾಸ್ ಪ್ರಭು, ದೇವದಾಸ್ ಪಾಟ್ಕರ್, ರಾಮಣ್ಣ ಪ್ರಭು ಆಯ್ಕೆಯಾಗಿದ್ದಾರೆ.

ನಿವೃತ್ತ ಮುಖ್ಯಶಿಕ್ಷಕ ಸೂಡ ದೇವೇಂದ್ರ ಬೋರ್ಕಾರ್ ಶಿರ್ವ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಪಾಟ್ಕರ್, ಬಿ.ಪುಂಡಲೀಕ ಮರಾಠೆ, ರಂಜಿತ್ ಭಟ್, ಹರೀಶ್ ಪಾಟ್ಕರ್, ಚಂದ್ರಕಾಂತ್ ನಾಯಕ್, ಶ್ರೀಕಾಂತ್ ಕಾಮತ್, ರಮಾನಾಥ್ ನಾಯಕ್, ಗಣಪತಿ ನಾಯಕ್, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್, ಕ್ಷೇತ್ರದ ಸದಸ್ಯರು ಉಪಸ್ಥಿತರಿದ್ದರು. ಉಮೇಶ ಪ್ರಭು, ಪಾಂಡುರಂಗ ಕಾಮತ್, ಜಯರಾಮ ಪ್ರಭು, ಸತ್ಯನಾರಾಯಣ ನಾಯಕ್, ವಿಠಲ ಮಡ್ಕೇಕಾರ್ ವರದಿ ಮಂಡಿಸಿದರು. ಶಶಿಧರ ವಾಗ್ಲೆ ಸ್ವಾಗತಿಸಿದರು. ಸಂತೋಷ್ ನಾಯಕ್ ಪಳ್ಳಿ ವಂದಿಸಿದರು. ಉಮೇಶ್ ನಾಯಕ್ ಪೆರ್ನಂಕಿಲ ನಿರೂಪಿಸಿದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…