More

    ಭೀಕರ ಅಪಘಾತ: ಟಿಪ್ಪರ್​-ಬೈಕ್ ಡಿಕ್ಕಿ, ಸವಾರರಿಬ್ಬರೂ ಸ್ಥಳದಲ್ಲೇ ಸಾವು..

    ಬಾಗಲಕೋಟೆ: ಟಿಪ್ಪರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.

    ಬಾಗಲಕೋಟೆ ಜಮಖಂಡಿ ಮಾರ್ಗದ ಲೋಕಾಪುರ-ಖಜ್ಜಿಡೋಣಿ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರದ ಶಾರದಾಳ ಗ್ರಾಮದ ಯಂಕಣ್ಣ ತಳವಾರ (29), ಉದಗಟ್ಟಿ ಗ್ರಾಮದ ಹನುಮಂತ ಪೂಜಾರ (28) ಸಾವಿಗೀಡಾದ ಬೈಕ್ ಸವಾರರು.

    ಇವರು ಲೋಕಾಪುರ ಪಟ್ಟಣದಿಂದ ತಮ್ಮ ಊರ ಕಡೆಗೆ ತೆರಳುತ್ತಿದ್ದ ಟಿಪ್ಪರ್​ಗೂ ಇವರ ಬೈಕ್​ಗೂ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಲೋಕಾಪುರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಫೇಸ್​ಬುಕ್​ನಲ್ಲೇನಿದು ಒಳಗೊಂದು, ಹೊರಗೊಂದು?!; ಆಗಿದ್ದಾದರೂ ಏನು?

    ದೇವಸ್ಥಾನದಲ್ಲೇ ಕದ್ದು, ಕಳ್ಳನನ್ನು ಪತ್ತೆ ಮಾಡಿ ಎಂದು ದೂರಿತ್ತ ಅರ್ಚಕ; ಹುಂಡಿಹಣ ಕದ್ದ ತಿಂಗಳ ಬಳಿಕ ಸಿಕ್ಕಿಬಿದ್ದ..

    ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts