ಬಾಗಲಕೋಟೆ: ಟಿಪ್ಪರ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ಬಾಗಲಕೋಟೆ ಜಮಖಂಡಿ ಮಾರ್ಗದ ಲೋಕಾಪುರ-ಖಜ್ಜಿಡೋಣಿ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರದ ಶಾರದಾಳ ಗ್ರಾಮದ ಯಂಕಣ್ಣ ತಳವಾರ (29), ಉದಗಟ್ಟಿ ಗ್ರಾಮದ ಹನುಮಂತ ಪೂಜಾರ (28) ಸಾವಿಗೀಡಾದ ಬೈಕ್ ಸವಾರರು.
ಇವರು ಲೋಕಾಪುರ ಪಟ್ಟಣದಿಂದ ತಮ್ಮ ಊರ ಕಡೆಗೆ ತೆರಳುತ್ತಿದ್ದ ಟಿಪ್ಪರ್ಗೂ ಇವರ ಬೈಕ್ಗೂ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಲೋಕಾಪುರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೇಸ್ಬುಕ್ನಲ್ಲೇನಿದು ಒಳಗೊಂದು, ಹೊರಗೊಂದು?!; ಆಗಿದ್ದಾದರೂ ಏನು?
ದೇವಸ್ಥಾನದಲ್ಲೇ ಕದ್ದು, ಕಳ್ಳನನ್ನು ಪತ್ತೆ ಮಾಡಿ ಎಂದು ದೂರಿತ್ತ ಅರ್ಚಕ; ಹುಂಡಿಹಣ ಕದ್ದ ತಿಂಗಳ ಬಳಿಕ ಸಿಕ್ಕಿಬಿದ್ದ..
ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?