ಯೋಧರಲ್ಲೂ ಹೃದಯಾಘಾತ ಹೆಚ್ಚಳ?; ಕರ್ತವ್ಯನಿರತ ಸೈನಿಕ ಹೃದಯಾಘಾತದಿಂದ ಸಾವು

ಕೊಡಗು: ಇತ್ತೀಚೆಗೆ ಜನರು ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಹೆಚ್ಚಾಗಿದ್ದು, ಕರ್ತವ್ಯನಿರತ ಯೋಧರಲ್ಲೂ ಇಂಥ ಪ್ರಕರಣಗಳು ಮೇಲಿಂದ ಮೇಲೆ ಕಂಡುಬಂದಿವೆ. ಇದೀಗ ಆ ಪಟ್ಟಿಗೆ ಯೋಧರೊಬ್ಬರ ಸಾವು ಸೇರ್ಪಡೆಯಾಗಿದೆ. ಕೊಡಗು ಮೂಲದ ಸೈನಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಮಹೇಶ್ (46) ಸಾವಿಗೀಡಾದ ಯೋಧ. ಜೂನಿಯರ್ ಕಮಿಷನ್ ಆಫೀಸರ್ (ಜೆಸಿಒ) ಆಗಿ ಇವರು ಉತ್ತರಾಖಂಡದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯನಿರತರಾಗಿದ್ದಾಗಲೇ ಈ ಸಾವು ಸಂಭವಿಸಿದೆ. ಪತ್ನಿ, ಇಬ್ಬರು ಚಿಕ್ಕಮಕ್ಕಳನ್ನು ಅಗಲಿರುವ ಇವರು ಕಳೆದ ತಿಂಗಳಷ್ಟೇ ರಜೆಯಲ್ಲಿ … Continue reading ಯೋಧರಲ್ಲೂ ಹೃದಯಾಘಾತ ಹೆಚ್ಚಳ?; ಕರ್ತವ್ಯನಿರತ ಸೈನಿಕ ಹೃದಯಾಘಾತದಿಂದ ಸಾವು