blank

ರುದ್ರಭೂಮಿ ತುಂಬ ನೀರು, ಶವ ಹೂಳಲು ಪರದಾಟ

blank

ಹರಿಹರ: ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ಹಿನ್ನೀರಿನಿಂದಾಗಿ ರುದ್ರಭೂಮಿ ಜಲಾವೃತವಾಗಿದ್ದು, ಶವ ಸಂಸ್ಕಾರಕ್ಕೆ ಸಂಬಂಧಿಗಳು ಪರದಾಡಿದ ಪ್ರಸಂಗ ಹೊರವಲಯದ ಗುತ್ತೂರಿನಲ್ಲಿ ಗುರುವಾರ ನಡೆಯಿತು.

ಗುತ್ತೂರು ವಾಸಿ ಮಂಜಪ್ಪ ಎಚ್.ಎಂ.ಸಿ. ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ತೆರಳಿದರು. ಶವ ಹೊತ್ತು ಬಂದಾಗ ರುದ್ರಭೂಮಿಯಲ್ಲಿ ಕಾಲಿಡಲು ಸಾಧ್ಯವಿರಲಿಲ್ಲ. ಕೊನೆಗೆ ಈಜು ಬಲ್ಲ ಕೆಲ ಯುವಕರು ಸೊಂಟ ಮಟ್ಟದ ನದಿ ನೀರಲ್ಲಿ ಸಾಗಿ ಎತ್ತರದ ಪ್ರದೇಶದಲ್ಲಿ ಶವಸಂಸ್ಕಾರ ಮಾಡಿದರು.

ಮಹಿಳೆಯರು ಹಾಗೂ ಈಜು ಬಾರದವರು ದೂರದ ನದಿ ತೀರದಲ್ಲೇ ನಿಂತಿದ್ದರು. ಸಂಬಂಧಿಕರಿಗೆ ತಮ್ಮ ಆತ್ಮೀಯರ ಸಾವಿನ ದುಃಖ ಒಂದೆಡೆಯಾದರೆ, ಅಂತ್ಯಸಂಸ್ಕಾರಕ್ಕಾದ ಅಡ್ಡಿಯಿಂದ ಮತ್ತಷ್ಟು ವಿಚಲಿತರಾದರು.

ಗುತ್ತೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಮಣ್ಣು, ಮರಳುಗಾರಿಕೆಯ ಪರಿಣಾಮವಾಗಿ ನದಿ ದಡದ ರುದ್ರಭೂಮಿ ಗುಂಡಿಯಾಗಿ ಪರಿಣಮಿಸಿದೆ. ಹೀಗಾಗಿ, ಮಳೆಗಾಲದಲ್ಲಿ ಶವಸಂಸ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Share This Article

ಈ 3 ರಾಶಿಯ ಮಹಿಳೆಯರು ಅಯಸ್ಕಾಂತದಂತೆ ಪುರುಷರನ್ನು ತನ್ನತ್ತ ಸೆಳೆಯುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

Coconut water : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ…

ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems

Money Problems : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…