ಗುರು-ಶಿಷ್ಯರ ಜುಗಲ್​ಬಂದಿ! “ಯುಐ’ ಮತ್ತು “ಮ್ಯಾಕ್ಸ್​’ ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕೆಲವೊಮ್ಮೆ ಪರಿಸ್ಥಿತಿಗಳು, ಕೆಲ ಸಂದರ್ಭಗಳು ಉತ್ತಮ ಗೆಳೆಯರನ್ನೂ ಶತ್ರುಗಳನ್ನಾಗಿ ಮಾಡಿಬಿಡುತ್ತವೆ. ಇದೀಗ “ಯುಐ’ ಮತ್ತು “ಮ್ಯಾಕ್ಸ್​’ ಚಿತ್ರಗಳ ನಡುವಿನ ಬಾಕ್ಸಾಫಿಸ್​ ಗುದ್ದಾಟ, ಉಪೇಂದ್ರ ಮತ್ತು ಕಿಚ್ಚ ಸುದೀಪ್​ ನಡುವೆ ಕಂದಕ ಸೃಷ್ಟಿಸಿದೆಯಾ ಎಂಬ ಪ್ರಶ್ನೆ ಮೂಡಿಸಿದೆ. ಕಳೆದ ಡಿ. 20ರಂದು “ಯುಐ’ ರಿಲೀಸ್​ ಡೇಟ್​ ಘೋಷಿಸಲಾಗಿತ್ತು. ಅದರ ಬೆನ್ನಲ್ಲೇ “ಮ್ಯಾಕ್ಸ್​’ ಡಿ. 25ರಂದು ತೆರೆಗೆ ಬರಲಿದೆ ಎಂದು ಅನೌನ್ಸ್​ ಮಾಡಲಾಯಿತು. ಆಗಲೇ “ಯುಐ’ ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ. ಶ್ರೀಕಾಂತ್​, “ಯುಐ’ ರಿಲೀಸ್​ ಆಗಿ ಕೇವಲ ಐದು ದಿನಗಳ ಅಂತರದಲ್ಲಿ “ಮ್ಯಾಕ್ಸ್​’ ಬಿಡುಗಡೆಯಾಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಪ್ರೇಕ್ಷಕರನ್ನು ಥಿಯೇಟರ್​ಗಳಿಗೆ ಕರೆತರಲು ಹರಸಾಹಸಪಡುತ್ತಿರುವ ಸಮಯದಲ್ಲಿ ಬಾಕ್ಸಾಫಿಸ್​ ಸಮರ ಬೇಕಿರಲಿಲ್ಲ ಎಂಬ ಮಾತುಗಳೂ ಚಿತ್ರರಂಗ ಮತ್ತು ಅಭಿಮಾನಿ ವಲಯಗಳಲ್ಲಿ ಕೇಳಿಬಂದವು. ಹಾಗಾದರೆ “ಯುಐ’ ವರ್ಸಸ್​ “ಮ್ಯಾಕ್ಸ್​’ ಎಲ್ಲಿಯವರೆಗೆ ಬಂತು?

ಗುರು-ಶಿಷ್ಯರ ಜುಗಲ್​ಬಂದಿ! "ಯುಐ' ಮತ್ತು "ಮ್ಯಾಕ್ಸ್​' ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

ಉಪೇಂದ್ರ ನನ್ನ ಗುರು…
ನಟ ಕಿಚ್ಚ ಸುದೀಪ್​ ಡಿ.1ರಂದು “ಮ್ಯಾಕ್ಸ್​’ ಚಿತ್ರದ ಸಾಂಗ್​ ರಿಲೀಸ್​ ವೇಳೆ, “ಉಪೇಂದ್ರ ಅವರ ಸ್ಟಾರ್​ಡಂ ಬಗ್ಗೆ ನನಗೆ ಯಾವತ್ತೂ ಡೌಟ್​ ಇಲ್ಲ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ನಾವೆಲ್ಲರೂ ಅವರನ್ನು ನೋಡಿ ಕಲಿತು ಚಿತ್ರರಂಗಕ್ಕೆ ಬಂದವರು. “ಮ್ಯಾಕ್ಸ್​’ ರಿಲೀಸ್​ ಬಗ್ಗೆ ಉಪೇಂದ್ರ ಅವರಿಗೆ ತಲೆನೋವಿಲ್ಲ. ನಮಗೇಕೆ? ನನಗೆ ಅವರ ಮೇಲೆ ಅಪಾರ ಗೌರವ, ಪ್ರೀತಿಯಿದೆ. ನಾನು ಸಿನಿಮಾ ಮಾಡಬಹುದು. ಅದಕ್ಕೆ ಹಣ ಹಾಕುತ್ತಿರುವುದು ನಿರ್ಮಾಪಕರು. ಆಗಸ್ಟ್​ನಲ್ಲಿ ರಿಲೀಸ್​ ಮಾಡಲು ತುಂಬ ಪ್ರಯತ್ನಪಟ್ಟೆವು. ಆಗ ಒಂದು ತಿಂಗಳು ಮುಂದೂಡಿ ಅಂದಿದ್ದೆ. ಆದರೆ, ಕೊನೆಗೆ ನಿರ್ಮಾಪಕರು ಡಿ.25ರಂದು ಬಿಡುಗಡೆ ಮಾಡಲು ನಿರ್ಧರಿಸಿದರು. ಉಪೇಂದ್ರ ಸರ್​ಗೆ ತೊಂದರೆ ಆಗುತ್ತಿದೆ ಅಂದರೆ, ಆಗ ನಾನು ಮಾತನಾಡುತ್ತೇನೆ. ಅವರು ನನ್ನ ಗುರುಗಳು. ನಾನು ಶಿಷ್ಯ’ ಎಂದು ಹೇಳಿದ್ದರು. ಹಾಗೇ ಡಿ. 23ರಂದು “ಯುಐ’ ಸಿನಿಮಾ ನೋಡಿದ ಸುದೀಪ್​, “ಈ ರೀತಿಯ ಕಥೆಯನ್ನು ಸಿನಿಮಾ ಮಾಡಲು ಕೇವಲ ಉಪೇಂದ್ರ ಸರ್​ಗಷ್ಟೇ ಸಾಧ್ಯ. ಚಿತ್ರದ ಬಗ್ಗೆ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬರುತ್ತಿವೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದರು.

ಗುರು-ಶಿಷ್ಯರ ಜುಗಲ್​ಬಂದಿ! "ಯುಐ' ಮತ್ತು "ಮ್ಯಾಕ್ಸ್​' ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

ಅವರಿಗೂ ಒಳಿತಾಗಲಿ…

“ಯುಐ’ ನಿರ್ಮಾಪಕ ಕೆ.ಪಿ. ಶ್ರೀಕಾಂತ್​, ಡಿ. 2ರಂದು ಚಿತ್ರದ ಸುದ್ದಿಗೋಷ್ಠಿಯ ವೇಳೆ, “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಇಬ್ಬರೂ ನಿರ್ಮಾಪಕರನ್ನು ಕರೆದು ಮಾತನಾಡಬಹುದಿತ್ತು. ನಾವು ಡಿ. 20ರಂದು ರಿಲೀಸ್​ ಅಂತ ಮೂರು ತಿಂಗಳ ಹಿಂದೆಯೇ ಘೋಷಿಸಿದ್ದವು. ಸುದೀಪ್​ ಅವರ ಬಳಿ ಕೂಡ ಮಾತನಾಡಿದ್ದೆವು. ಆದರೆ, ಆಗ ಅವರಿಗೂ ಡಿ. 25ರಂದು ಚಿತ್ರ ಬಿಡುಗಡೆ ಅಂತ ಗೊತ್ತಿರಲಿಲ್ಲ’ ಎಂದಿದ್ದರು. ಉಪೇಂದ್ರ, “ಎರಡು ಸಿನಿಮಾ ರಿಲೀಸ್​ ಆಗಿ, ಎರಡೂ ಸೂಪರ್​ಹಿಟ್​ ಆಗಿರುವ ಹಲವು ಉದಾಹರಣೆಗಳಿವೆ. ಅವರ ಚಿತ್ರಕ್ಕೂ ಒಳ್ಳೆಯದಾಗಲಿ’ ಎಂದು ಶಭಹಾರೈಸಿದ್ದರು.

ಗುರು-ಶಿಷ್ಯರ ಜುಗಲ್​ಬಂದಿ! "ಯುಐ' ಮತ್ತು "ಮ್ಯಾಕ್ಸ್​' ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

ರಿಲೀಸ್​ ಬಳಿಕ ಮುನಿಸು..?
ಇನ್ನು ಡಿ. 29ರಂದು “ಯುಐ’ ಚಿತ್ರದ ಸಕ್ಸಸ್​ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಉಪೇಂದ್ರ, “ನಮಗೆ ಗೊತ್ತೇಯಿಲ್ಲ. ಪಕ್ಕದಲ್ಲಿ ಯಾವ ಸಿನಿಮಾ ರಿಲೀಸ್​ ಆಗಿದೆ ಅಂತ. ನಮಗೆ “ಯುಐ’ ಬಗ್ಗೆ ಮಾತ್ರ ಗೊತ್ತು. ಮಾರ್ಕೆಟ್​ ಇದು, ಇಲ್ಲಿ ನಾವು ಅಂಗಡಿ ಮಾಡಿದರೆ, ಪಕ್ಕದಲ್ಲಿ ಇನ್ನೊಬ್ಬ ಬಂದು ಅಂಗಡಿ ಇಡುತ್ತಾನೆ. ತೆಲುಗು, ತಮಿಳು ಚಿತ್ರಗಳೂ ರಿಲೀಸ್​ ಆಗುತ್ತಿರುತ್ತವೆ. ನಮಗೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಸಿನಿಮಾ ಬಗ್ಗೆ ನಾವು ಮಾತನಾಡುತ್ತೇವಷ್ಟೇ’ ಎಂದಿದ್ದರು.

ಗುರು-ಶಿಷ್ಯರ ಜುಗಲ್​ಬಂದಿ! "ಯುಐ' ಮತ್ತು "ಮ್ಯಾಕ್ಸ್​' ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

ದಾಖಲೆ ಯಾರದು?
ಇನ್ನು ಬಾಕ್ಸಾಫಿಸ್​ ಗಳಿಕೆ, ಟಿಕೆಟ್​ ಬುಕ್ಕಿಂಗ್​ ಬಗ್ಗೆಯೂ ಎರಡು ತಂಡಗಳ ನಡುವೆ ಜುಗಲ್​ಬಂದಿ ನಡೆದಿದೆ. 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಸಿನಿಮಾ, ಆನ್​ಲೈನ್​ನಲ್ಲಿ ಆರು ಲಕ್ಷ ಟಿಕೆಟ್​ ಮಾರಾಟ ಮಾಡಿದ, ಅತಿ ಹೆಚ್ಚು ಪ್ರೇಕ್ಷಕರು ನೋಡಿದ ಸಿನಿಮಾ ಅಂತೆಲ್ಲ ದಾಖಲೆಗಳ ಬಗ್ಗೆ ಎರಡು ತಂಡಗಳೂ ಸಂಭ್ರಮಿಸುತ್ತಿವೆ. ಅದೇನೇ ಇರಲಿ, ಈ ಸ್ಟಾರ್​ ಚಿತ್ರಗಳ ಕ್ಲ್ಯಾಷ್​, ಸ್ಟಾರ್​ಗಳ ಕ್ಲ್ಯಾಷ್​ ಆಗದಿರಲಿ ಎಂಬುದು ಅವರ ಅಭಿಮಾನಿಗಳ ಅಭಿಮತ.

ಗುರು-ಶಿಷ್ಯರ ಜುಗಲ್​ಬಂದಿ! "ಯುಐ' ಮತ್ತು "ಮ್ಯಾಕ್ಸ್​' ಚಿತ್ರತಂಡಗಳ ನಡುವಿನ ಹಗ್ಗಜಗ್ಗಾಟ

Share This Article

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…

ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep

Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…

ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದಿರಾ; ಇಲ್ಲಿದೆ ಅದರ ಹಿಂದಿನ ಕಾರಣದ ಮಾಹಿತಿ| Health Tips

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಯಾರಿಗಾದರೂ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಅದರ ಹಿಂದೆ ಹಲವು ಕಾರಣಗಳಿರಬಹುದು.…