ಮುಂಬೈ: ಓರ್ವ ಹುಡುಗಿಯ ಕಾರಣದಿಂದ ಒಬ್ಬ ವಿವಾಹಿತ ವ್ಯಕ್ತಿ ಕೊಲೆಯಾಗಿದ್ದರೆ, ಒಬ್ಬ ಯುವಕ ಸೆರೆಯಾಗಿದ್ದು ಇನ್ನಿಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಇದನ್ನೂ ಓದಿ: ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ
ರಾಜ್ಯದ ಹಿಂಜೆವಾಡಿ ಪ್ರದೇಶಕ್ಕೆ ಸೇರಿದ ಸಖರೆವಾಸ್ತಿಯಲ್ಲಿ ತ್ರಿಕೋನ ಲವ್ ಸ್ಟೋರಿಯೊಂದು ನಡೆಯುತ್ತಿತ್ತು. ಯುವಕನೊಬ್ಬ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಯುವಕನ ಜತೆ ಪ್ರೀತಿಯಲ್ಲಿದ್ದ ಯುವತಿ ಅದೇ ಸಮಯದಲ್ಲಿ ವಿವಾಹಿತನಾಗಿದ್ದ ನಿವಾಲ್ ಶುಖ್ಲಾಲ್ ಪರ್ವ (27)ನನ್ನೂ ಪ್ರೀತಿಸಿದ್ದಾಳೆ. ಯುವತಿ ಈ ರೀತಿಯ ಪ್ರೀತಿಯಲ್ಲಿರುವ ವಿಚಾರದಲ್ಲಿ ಇತ್ತೀಚೆಗೆ ಯುವಕನಿಗೆ ಮತ್ತು ಆತನ ಸ್ನೇಹಿತನೊಗೆ ಜಗಳವಾಗಿದೆ. ಆ ಜಗಳ ನಡೆಯುವಾಗ ಅಲ್ಲಿಯೇ ಇದ್ದ ನಿವಾಲ್ ಸಿಟ್ಟಿನಿಂದ ಅವರಲ್ಲಿ ಒಬ್ಬನಿಗೆ ಏಟು ಕೊಟ್ಟಿದ್ದಾನೆ.
ಏಟು ಕೊಟ್ಟ ಎನ್ನುವ ಸಿಟ್ಟಿನಿಂದ ಆ ಇಬ್ಬರು ಯುವಕರು ತಮ್ಮ ಇನ್ನೋರ್ವ ಸ್ನೇಹಿತ ಬಬ್ಲ್ಯಾ ಅಶೋಕ್ (19)ನೊಂದಿಗೆ ಸೇರಿಕೊಂಡು ನಿವಾಲ್ನನ್ನು ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ನವೆಂಬರ್ 21ರಂದು ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು, ದೂರದ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಅದಾದ ನಂತರ ಅವರಲ್ಲಿ ಜಗಳವಾಡಿದ್ದ ಇಬ್ಬರು ಯುವಕರು ಊರು ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಲಂಚದ ಬದಲಾಗಿ ಬಾಲಕಿಯ ಮೇಲೆರಗಿದ ಇನ್ಸ್ಪೆಕ್ಟರ್: ಪಾಪದ ಕೊಂಡ ತುಂಬಿ ಸಿಕ್ಕಿಬಿದ್ದ
ಇವಾಲ್ ಕೊಲೆಯಾಗಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ವಿಚಾರವಾಗಿ ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಹಿಂದಿನ ಯೋಜನೆ ತಿಳಿದುಬಂದಿದ್ದು, ಊರಿನಲ್ಲಿದ್ದ ಬಬ್ಲ್ಯಾ ಅಶೋಕ್ನನ್ನು ಬಂಧಿಸಿದ್ದಾರೆ. ಓಡಿಹೋಗಿರುವ ಇಬ್ಬರು ಯುವಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)