More

    ಪಾರಿವಾಳ ಹಿಡಿಯಲು ಹೋದಾಗ ತಾಗಿದ ಹೈಟೆನ್ಶನ್ ವೈರ್; ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು

    ಬೆಂಗಳೂರು: ವಿಜಯಾನಂದ ನಗರದ ನಂದಿನಿ ಲೇಔಟ್​​ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದರು. ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್​​ ಹೈಟೆನ್ಶನ್ ವೈರ್ ತಾಗಿ, ಇಬ್ಬರೂ ಜೀವನ್ಮರಣದ ಹೋರಾಟ ನಡೆಸುವಂತಾಗಿತ್ತು. ಇದೀಗ ಬಾಲಕ ಸುಪ್ರೀತ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಮೂರು ದಿನದಿಂದ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಸುಪ್ರೀತ್​ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಜುನಾಥ್ ಮತ್ತು ಪ್ರೇಮ ದಂಪತಿಯ ಒಬ್ಬನೇ ಮಗನಾಗಿದ್ದ ಸುಪ್ರೀತ್, ಮಹಾಲಕ್ಷ್ಮೀ ಲೇಔಟ್​​ನ ವಿಜಯಾನಂದ‌ನಗರದಲ್ಲಿ ವಾಸವಾಗಿದ್ದ. ಸದ್ಯ ವಿಕ್ಟೋರಿಯ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಬಾಲಕದ ದೇಹ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts