ಬೆಂಗಳೂರು: ವಿಜಯಾನಂದ ನಗರದ ನಂದಿನಿ ಲೇಔಟ್ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದರು. ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್ ಹೈಟೆನ್ಶನ್ ವೈರ್ ತಾಗಿ, ಇಬ್ಬರೂ ಜೀವನ್ಮರಣದ ಹೋರಾಟ ನಡೆಸುವಂತಾಗಿತ್ತು. ಇದೀಗ ಬಾಲಕ ಸುಪ್ರೀತ್ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಮೂರು ದಿನದಿಂದ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಸುಪ್ರೀತ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಜುನಾಥ್ ಮತ್ತು ಪ್ರೇಮ ದಂಪತಿಯ ಒಬ್ಬನೇ ಮಗನಾಗಿದ್ದ ಸುಪ್ರೀತ್, ಮಹಾಲಕ್ಷ್ಮೀ ಲೇಔಟ್ನ ವಿಜಯಾನಂದನಗರದಲ್ಲಿ ವಾಸವಾಗಿದ್ದ. ಸದ್ಯ ವಿಕ್ಟೋರಿಯ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಬಾಲಕದ ದೇಹ ನೀಡಲಿದ್ದಾರೆ.