ಇದು ಕಾನೂನಿನ ದುರುಪಯೋಗ; ಸುಕೇಶ್​ ಚಂದ್ರಶೇಖರ್​​ಗೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್​ | Supreme Court

blank

ನವದೆಹಲಿ: ರಾಷ್ಟ್ರ ರಾಜಧಾನಿಯ ಮಂಡೋಲಿ ಜೈಲಿನಿಂದ ಪಂಜಾಬ್ ಮತ್ತು ದೆಹಲಿ ಜೈಲುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಜೈಲಿಗೆ ತನ್ನನ್ನು ಸ್ಥಳಾಂತರಿಸುವಂತೆ ಕೋರಿ ಆರೋಪಿ ಸುಕೇಶ್ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್(Supreme Court) ಮಂಗಳವಾರ(ಫೆಬ್ರವರಿ 18) ತಿರಸ್ಕರಿಸಿದೆ.

ಇದನ್ನು ಓದಿ: ಬ್ರಿಟಿಷ್ ಪ್ರವಾಸಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಜೀವಾವಧಿ ಶಿಕ್ಷೆ; ತೀರ್ಪಿನಲ್ಲಿ ನ್ಯಾಯಾಲಯ ಹೇಳಿದಿಷ್ಟು.. | Life Imprisonment

ಅರ್ಜಿಯನ್ನು ವಜಾಗೊಳಿಸುವಾಗ ಸುಪ್ರೀಂ ಕೋರ್ಟ್ ಸುಕೇಶ್​​ ಚಂದ್ರಶೇಖರ್​​​ ಅವರಿಗೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಛೀಮಾರಿ ಹಾಕಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಿಬಿ ವರಾಳೆ ಅವರಿದ್ದ ಪೀಠವು ಸುಕೇಶ್ ಚಂದ್ರಶೇಖರ್ ಅವರು ಈ ಹಿಂದೆ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅದನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು ಎಂದು ಹೇಳಿದೆ.

ಸುಕೇಶ್ ಅವರಿಗೆ ದೆಹಲಿ ಸರ್ಕಾರದ ವಿರುದ್ಧ ಈ ಹಿಂದೆ ದೂರು ಇತ್ತು, ಆದರೆ ಈಗ ಸರ್ಕಾರ ಬದಲಾಗಿದೆ. ಆದ್ದರಿಂದ ಅವರಿಗೆ ಯಾವುದೇ ಸಮಸ್ಯೆ ಇರಬಾರದು ಎಂದು ಹೇಳಿದೆ. ನಿಮಗೆ ಖರ್ಚು ಮಾಡಲು ಹಣವಿದೆ, ನೀವು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಇದು ಕಾನೂನಿನ ದುರುಪಯೋಗ. ನೀವು ಒಂದೇ ಅರ್ಜಿಯನ್ನು ಮತ್ತೆ ಮತ್ತೆ ಹೇಗೆ ಸಲ್ಲಿಸುತ್ತೀರಿ? ಎಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಹಾಜರಾದ ಹಿರಿಯ ವಕೀಲ ಶೋಯೆಬ್ ಆಲಂ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ, ಅರ್ಜಿದಾರರಿಗೆ ತನ್ನ ಕುಟುಂಬದಿಂದ ದೂರವಿಡಬಾರದು ಎಂಬ ಹಕ್ಕಿದೆ ಎಂದು ಹೇಳಿದರು. ಸುಕೇಶ್​​ನನ್ನು ಕರ್ನಾಟಕದ ಹತ್ತಿರದ ಜೈಲಿನಲ್ಲಿ ಇಡಬೇಕೆಂದು ವಕೀಲರು ಒತ್ತಾಯಿಸಿದರು. ಅರ್ಜಿದಾರರು ಪಂಜಾಬ್ ಮತ್ತು ದೆಹಲಿ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದ ಜೈಲಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದರು.

ಇದಕ್ಕೆ ಪೀಠವು, ನಾವು ಸಮಾಜ ಮತ್ತು ಅದರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಹೇಳಿತು. ನಿಮ್ಮ ಮೂಲಭೂತ ಹಕ್ಕುಗಳು ಇತರರ ಹಕ್ಕುಗಳನ್ನು ಅತಿಕ್ರಮಿಸಬಾರದು. ಅಧಿಕಾರಿಗಳ ವಿರುದ್ಧ ನೀವು ಯಾವ ರೀತಿಯ ಆರೋಪಗಳನ್ನು ಮಾಡಿದ್ದೀರಿ ಎಂದು ನೋಡುತ್ತೀರಿ. ಸುಕೇಶ್ ಚಂದ್ರಶೇಖರ್​​ ಹಣ ವರ್ಗಾವಣೆ ಮತ್ತು ಹಲವಾರು ಜನರನ್ನು ವಂಚಿಸಿದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಇತರರ ವೆಚ್ಚದಲ್ಲಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿ ಪೀಠವು ಅರ್ಜಿಯನ್ನು ವಜಾಗೊಳಿಸಿತು.(ಏಜೆನ್ಸೀಸ್​​)

ಜಾಕ್ವೆಲಿನ್​ಗೆ ಸುಕೇಶ್​ನಿಂದ​​​ ಖಾಸಗಿ ಜೆಟ್ ಗಿಫ್ಟ್​​; ಪ್ರೇಮಿಗಳ ದಿನದಂದು ಜೈಲಿನಿಂದ ಬರೆದ ಪ್ರೇಮಪತ್ರದಲ್ಲಿ ಏನಿದೆ? | Sukesh Chandrashekhar

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…