ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ಟೂರ್ನಿಗೆ ಸಂಬಂಧಿಸಿದ ತಯಾರಿಯನ್ನು ಆರಂಭಿಸಿದೆ. 18ನೇ ಆವೃತ್ತಿಯಲ್ಲಿ ಕಪ್ ಗೆಲ್ಲಲೇಬೇಕೆಂದು ಫ್ರಾಂಚೈಸಿಗಳು ಬಲಿಷ್ಠ ತಂಡವನ್ನೇ ಕಟ್ಟಿದ್ದು, ಆರ್ಸಿಬಿ ತಂಡ ಕೂಡ ಒಂದಾಗಿದೆ. ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರ್ಸಿಬಿ (RCB) ಫ್ರಾಂಚೈಸಿಯು ಈ ಬಾರಿಯ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದು, ಬಲಿಷ್ಠ ಪಡೆಯನ್ನ ಕಟ್ಟುವ ಮೂಲಕ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ.

ಇನ್ನೂ ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿ (RCB) ಹಾಗೂ ಚೆನ್ನೈ (CSK) ಫ್ರಾಂಚೈಸಿಗಳು ಬದ್ಧವೈರರಿಗಳೆಂದು ಪರಿಗಣಿಸಿದ್ದು, ಪ್ರತಿಬಾರಿ ಹೈವೋಲ್ಟೇಜ್ ಪಂದ್ಯ ನಡೆದಾಗಲೆಲ್ಲಾ ಟಿಆರ್ಪಿ ಹಾಗೂ ವೀಕ್ಷಣೆ ವಿಚಾರವಾಗಿ ದಾಖಲೆ ಬರೆದಿದೆ. ಆದರೆ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಆರ್ಸಿಬಿ ಕುರಿತಾಗಿ ಅವಮಾನಕರ ಹೇಳಿಕೆಯೊಂದನ್ನು ನೀಡಿದ್ದರು. ಈ ವಿಚಾರ ಆರ್ಸಿಬಿ ಹಾಗೂ ಸಿಎಸ್ಕೆ ಅಭಿಮಾನಿಗಳ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಗಿತ್ತು. ಇದೀಗ ಆರ್ಸಿಬಿ ಸಿಎಸ್ಕೆ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಈಚೆಗೆ ನಡೆದ ವಿಜಯ್ ಹಜಾರೆ ಟ್ರೋಫಿ ಸೆಮಿಫಿನಾಲೆ ಪಂದ್ಯದಲ್ಲಿ ವಿದರ್ಭ ಹಾಗೂ ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದವು. ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ 7 ರನ್ಗಳಿಗೆ ಔಟ್ ಆಗಿದ್ದರು. ಆರ್ಸಿಬಿ ಆಟಗಾರ ಜಿತೇಶ್ ಶರ್ಮ ಹಿಡಿದ ಅದ್ಭುತ ಕ್ಯಾಚ್ಗೆ ಋತುರಾಜ್ ಪೆವಿಲಿಯನ್ನತ್ತ ಮುಖ ಮಾಡಿದ್ದರು. ಇದೀಗ ಈ ವಿಡಿಯೋವನ್ನು ಪೋಸ್ಟ್ ಮಾಡಿ ಆರ್ಸಿಬಿ ಫ್ರಾಂಚೈಸಿ It is someone from RCB ಎಂದು ಟ್ವೀಟ್ಗೆ ಅಡಿಬರಹ ನೀಡುವ ಮೂಲಕ ಖಡಕ್ ತಿರುಗೇಟು ನೀಡಿದೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.
‘It is someone from RCB’ 😍
Jitesh doing what he does best! 👏#PlayBold #VijayHazareTrophy #ನಮ್ಮRCB pic.twitter.com/0E7z282mlN
— Royal Challengers Bengaluru (@RCBTweets) January 16, 2025
ಘಟನೆಯ ಹಿನ್ನೆಲೆ?
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಎಸ್ಕೆ ನಾಯಕ ಋತುರಾಜ್ (Ruturaj Gaikwad) ಅವರನ್ನು ಮಾತನಾಡುವಂತೆ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಋತುರಾಜ್ಗೆ ಪ್ರಶ್ನಗೆಳನ್ನು ಕೇಳಲಾಗಿತ್ತು. ಪ್ರಶ್ನೆಗೆ ಉತ್ತರಿಸಲು ಮುಂದಾದಾಗ ಋತುರಾಜ್ ಅವರ ಮೈಕ್ ಆಫ್ ಆಗಿತ್ತು. ಇದರಿಂದ ಋತುರಾಜ್ಗೆ ತೀವ್ರ ಇರುಸುಮುರುಸು ಉಂಟಾಯಿತು.
ಈ ವಿಚಾರವಾಗಿ ನಿರೂಪಕರು ಮೈಕ್ ಆಪರೇಟರ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರಿಸಿದ ಋತುರಾಜ್ ಬಹುಶಃ ಅವರು ಆರ್ಸಿಬಿಯಿಂದ (RCB) ಬಂದಿರಬೇಕು ಎಂದು ಹೇಳಿದ್ದರು. ಈ ವಿಡಿಯೋ ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಸ್ವತಃ ಫ್ರಾಂಚೈಸಿ ಸಿಎಸ್ಕೆ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದು, ಈ ವಿಡಿಯೋ 1.9 ಮಿಲಿಯನ್ಗಿಂತಲೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಚಾರ ಐಪಿಎಲ್ ಶುರುವಾಗುವುದಕ್ಕೂ ಮುನ್ನ ಆರ್ಸಿಬಿ ಹಾಗೂ ಸಿಎಸ್ಕೆ ಫ್ಯಾನ್ಸ್ ನಡುವಿನ ಜಟಾಪಟಿ ಜೋರಾಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಶ್ವಾನ; ಮನಕಲುಕುವ Video Viral