ಕೊಲ್ಲಿಬಚ್ಚಲು ಅಣೆಕಟ್ಟು ಭರ್ತಿ

blank

ಆನಂದಪುರ: ಸಮೀಪದ ಗಿಳಾಲಗುಂಡಿ ಗ್ರಾಮದ ಸಮೀಪ ಇರುವ ಕೊಲ್ಲಿಬಚ್ಚಲು ಅಣೆಕಟ್ಟು ಭರ್ತಿಯಾಗಿ ಗುರುವಾರ ಬೆಳಗ್ಗೆಯಿಂದ ಉಕ್ಕಿ ಹರಿಯುತ್ತಿದೆ.

ಕಳೆದ ವರ್ಷ ಜುಲೈ ಎರಡನೇ ವಾರ ಭರ್ತಿಯಾಗಿದ್ದ ಅಣೆಕಟ್ಟು ಈ ವರ್ಷ ವಾಡಿಕೆಗಿಂತ ಮೊದಲೆ ತುಂಬಿದೆ. ಮೇ 20ರಿಂದ ಮುಂಗಾರುಪೂರ್ವ ಮಳೆ ಸಾಕಷ್ಟು ಸುರಿದಿದ್ದ ಕಾರಣ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭೂಮಿ ಹದಗೊಂಡಿತ್ತು. ಅಣೆಕಟ್ಟೆಗೆ ಹರಿದು ಬರುವ ಕೋಣೆಹೊಸೂರಿನ ಹಳ್ಳ ಪೂರ್ಣಗೊಂಡು ಹರಿಯಲಾರಂಭಿಸಿತ್ತು.

ಅಣೆಕಟ್ಟೆಯಿಂದ ಉಕ್ಕಿದ ನೀರು ಅರ್ಧ ಭಾಗ ಗಿಳಾಲಗುಂಡಿಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಮ್ಮನ ಕೆರೆಗೆ ಹಾಗೂ ಇನ್ನರ್ಧ ಭಾಗ ತಂಗಳವಾಡಿ ಮೂಲಕ ಹೊಸಕೊಪ್ಪ ಗ್ರಾಮ ತಲುಪಿ ಆರು ಕಟ್ಟಿನ ಹಳ್ಳದ ಮೂಲಕ ಅಂಬ್ಲಿಗೊಳ ಜಲಾಶಯ ಸೇರುತ್ತಿದೆ. 2008ರಲ್ಲಿ ನೀರಾವರಿ ಉದ್ದೇಶದಿಂದ ಅಣೆಕಟ್ಟು ನಿರ್ಮಿಸಲಾಗಿತ್ತು. ಸುತ್ತ ದಟ್ಟ ಅರಣ್ಯದಿಂದ ಕೂಡಿರುವ ಅಣೆಕಟ್ಟು ವೀಕ್ಷಣೆಗೆ ರಸ್ತೆ ಮಾರ್ಗವಿದೆ.

ಯಲಸಿ ಗ್ರಾಮದ ಹೆಗ್ಗೆರೆಯಲ್ಲಿ ಕೆರೆಬೇಟೆ

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…