ಬೆಂಗಳೂರು ಗ್ರಾಮಾಂತರ: ಎಸ್ಎಪಿ ಲ್ಯಾಬ್ಸ್ ಸಂಸ್ಥೆ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಸ್ಥಳಾವಕಾಶ ಕಲ್ಪಿಸುವ ತನ್ನ ಎರಡನೆಯ ಕ್ಯಾಂಪಸ್ ಗೆ ಭೂಮಿ ಪೂಜೆಯನ್ನು ಮಾಡಿದೆ. ಈ ಕ್ಯಾಂಪಸ್ ದೇವನಹಳ್ಳಿಯಲ್ಲಿ ಸಿದ್ಧಗೊಳ್ಳಲಿದೆ.
ಎಸ್ಎಪಿ ಮತ್ತು ಕರ್ನಾಟಕ 25 ವರ್ಷಗಳ ಬಂಧ ಹೊಂದಿದೆ.ಬಹು ರಾಷ್ಟೀಯ ಕಂಪನಿ ಯಾದ ಎಸ್ಎಪಿಯ ಅತೀ ದೊಡ್ಡ ಸಾಫ್ಟ್ವೇರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಸೆಂಟರ್ ಇವತ್ತು ಬೆಂಗಳೂರಿನಲ್ಲಿದೆ. ಬಹುರಾಷ್ಟ್ರೀಯ ಕಂಪನಿ ಎಸ್ಎಪಿಯ ಸುಮಾರು 40% ವಿಶ್ವದ ಆರ್ ಅಂಡ್ ಡಿ ಕೊಡುಗೆಯನ್ನು ಇಲ್ಲಿಂದ ಕೊಡುತ್ತಿದ್ದಾರೆ ಎಂದರೆ ಕರ್ನಾಟಕ ಮತ್ತು ಭಾರತ ಎಸ್ಎಪಿಯ ದೃಷ್ಟಿಯಿಂದ ಎಷ್ಟು ಮಹತ್ತರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಎಸ್ಎಪಿಯ ಲ್ಯಾಬ್ಸ್ ಸಂಸ್ಥೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹತ್ತಾರು ಸಾವಿರ ಉದ್ಯೋಗಗಳನ್ನು ಇಲ್ಲಿ ಸೃಷ್ಟಿ ಮಾಡುತ್ತಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಎಸ್ಎಪಿ ಸಂಸ್ಥೆ ಕರ್ನಾಟಕ ಹಾಗೂ ಭಾರತದ ಜೊತೆಗಿರುವ ಬಂಧ ಹಾಗೂ ಬದ್ಧತೆಯ ದ್ಯೋತಕವಾಗಿ ಬರುತ್ತಿರುವುದರಿಂದ ಈ ಕ್ಯಾಂಪಸ್ಗೆ ವಿಶೇಷವಾದ ಅರ್ಥವಿದೆ.
ಇಂತಹ ಒಂದು ಬಹು ನಿರೀಕ್ಷಿತ, ಬಹು ಮುಖ್ಯ ಕಟ್ಟಡದ ಭೂಮಿ ಪೂಜೆಯನ್ನು ಎಸ್ಎಪಿಯ ಲ್ಯಾಬ್ಸ್ , ಇಂಡಿಯಾ ಇದರ ಎಂ ಡಿ ಮತ್ತು ಎಸ್ವಿಪಿ ಶ್ರೀಮತಿ ಸಿಂಧು ಗಂಗಾಧರನ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಎಸ್ಎಪಿಯ ಲ್ಯಾಬ್ಸ್ , ಇಂಡಿಯಾ ಸಂಸ್ಥೆ ತನ್ನ ಇಪ್ಪತ್ತೈದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಇದನ್ನೂ ಓದಿ: 30 ಕೋಟಿ ರೂ. ಮೌಲ್ಯದ ಕೊಕೇನ್ ಕಳ್ಳ ಸಾಗಣೆ; ಲೈಬೀರಿಯಾ ಮೂಲದ ಮಹಿಳೆ ಅರೆಸ್ಟ್
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಇನ್ನೊಂದು ಹೊಸ ಕ್ಯಾಂಪಸ್ ನ್ನು ಪ್ರಾರಂಭ ವನ್ನು ಘೋಷಿಸಲು ನಾವು ಹರ್ಷಿಸುತ್ತೇವೆ . ಈ ಕ್ಯಾಂಪಸ್ ಹದಿನೈದು ಸಾವಿರ ಹೆಚ್ಚಿನ ಉದ್ಯೋಗಳನ್ನು ಸೃಷ್ಟಿಸಲಿದೆ . ಇದರ ಜೊತೆಗೆ ಇದು ಹೆಚ್ಚು ಪರಿಸರ ಸ್ನೇಹಿ ಆಗಿರಲಿದೆ. ಇದರಿಂದ ಯಾವುದೇ ರೀತಿಯ ಕಾರ್ಬನ್ ಎಮಿಶನ್ ಇರುವುದಿಲ್ಲ – ನೀರಿನ ಮರು ಪೂರಣ ಮತ್ತು ಬಳಕೆಯಿಂದ ನೀರನ್ನು ಹೆಚ್ಚು ಉಪಯೋಗಿಸುವುದಿಲ್ಲ.
ಈ ಕ್ಯಾಂಪಸ್ ಹೆಚ್ಚು ಪರಿಸರ ಮತ್ತು ಉದ್ಯೋಗಿಗಳ ನ್ನೆ ಹೆಚ್ಚು ಗಮನದಲ್ಲಿ ಇಟ್ಟು ಕೊಂಡು ಕಟ್ಟಲಾಗುತ್ತದೆ. ಇಂತಹ ಒಂದು ಬಹು ನಿರೀಕ್ಷಿತ ಕ್ಯಾಂಪಸ್ ನ ಮೊದಲ ಹಂತ 2025ರ ಹೊತ್ತಿಗೆ ಉದ್ಘಾಟನೆ ಆಗಲಿದೆ” ಎಂದು ಹೇಳಿದ್ದಾರೆ.