ಮೊದಲು ಸಂಚು ರೂಪಿಸಿದ್ದು ಸಲ್ಮಾನ್​​ಗೆ ಆದ್ರೆ ಬಲಿಯಾಗಿದ್ದು ಬಾಬಾ ಸಿದ್ದಿಕಿ! ಹಂತಕರು ಬಿಚ್ಚಿಟ್ರು ಸ್ಪೋಟಕ ಸತ್ಯ | Salman

blank

ಮುಂಬೈ: ರಾಜಕಾರಣಿ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈಯುವ ಮುಂಚೆನೆ ನಟ ಸಲ್ಮಾನ್​ ಖಾನ್(​Salman) ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಇದೀಗ ಸಿದ್ದಿಕಿ ಕೊಂದ ಶೂಟರ್​ಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬಾಬಾ ಸಿದ್ದಿಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಸಲ್ಮಾನ್​ ಖಾನ್​ ಶೂಟರ್​ಗಳ ಹಿಟ್​ಲಿಸ್ಟ್​ನಲ್ಲಿದ್ದರು. ಆದರೆ, ಸಲ್ಮಾನ್​ ಅವರಿಗೆ ಬಿಗಿಭದ್ರತೆ ಹಿನ್ನೆಲೆ ಹತ್ಯೆಗೈಯಲು ಸಾಧ್ಯವಾಗಲಿಲ್ಲ ಎಂದು ವರದಿ ಉಲ್ಲೇಖಿಸಿವೆ.

ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್​ ಏಕಸದಸ್ಯ ಪೀಠ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದ ವಿಭಾಗೀಯ ಪೀಠ

ಕಳೆದ ಎರಡು ತಿಂಗಳಿಂದೆ ಅಂದರೆ ಇದೇ ಅ.12ರಂದು ಇಲ್ಲಿನ ಬಾಂದ್ರಾದಲ್ಲಿ ಬೈಕ್​ನಲ್ಲಿ ಬಂದ ಮೂವರು ಶೂಟರ್​ಗಳು ಬಾಬಾ ಸಿದ್ದಿಕಿ(66) ಅವರ ಎದೆಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಸಮೀಪ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ, ತನಿಖೆ ವೇಳೆ ಹಲವು ಮಹತ್ವದ ಸುಳಿವುಗಳನ್ನು ಬಂಧಿತರು ಬಾಯ್ಬಿಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಲ್ಮಾನ್​ ಖಾನ್​ ಹತ್ಯೆಗೈಯು ಸಂಚು ಇದೇ ಮೊದಲಲ್ಲ

ಸಲ್ಮಾನ್​ ಖಾನ್​ ಹತ್ಯೆಗೈಯಲು ಸಂಚು ರೂಪಿಸುವುದು ಇದೇ ಮೊದಲಲ್ಲ. ಇತ್ತೀಚಿಗೆ ಬಾಂದ್ರಾದ ಅವರ ನಿವಾಸದ ಬಳಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಆದರೆ, ಸಲ್ಮಾನ್​ ಪ್ರಾಣಪಾಯದಿಂದ ಪಾರಾಗಿದ್ದರು. ಆರೋಪಿಗಳನ್ನು ಗುಜರಾತ್​ನಲ್ಲಿ ಬಂಧಿಸಲಾಗಿತ್ತು. ಈ ಘಟನೆಯನ್ನು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​ ಮಾಡಿರುವುದಾಗಿ ಒಪ್ಪಿಕೊಂಡಿತ್ತು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಬಿಷ್ಣೋಯಿ ಗ್ಯಾಂಗ್​ನಿಂದ ಮತ್ತು ಇತರರಿಂದ ಹತ್ಯೆಗೈವುದಾಗಿ ಬೆದರಿಕೆಯ ಹಲವು ಕರೆಗಳು ಸಲ್ಮಾನ್​ಗೆ ಬರುತ್ತಿರುವ ಘಟನೆಗಳು ನಡೆಯುತ್ತಿವೆ.

ವಿವಾಹ ವಾರ್ಷಿಕೋತ್ಸವ ದಿನವೇ ಪೋಷಕರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪುತ್ರ! ಆತ ಕೊಟ್ಟ ಕಾರಣ ಕೇಳಿದ್ರೆ…

ಜಾಗಿಂಗ್​ಗೆ ಹೋಗಿ ಮನೆಗೆ ಮರಳಿದ ಮಗನಿಗೆ ಕಾದಿತ್ತು ಶಾಕ್​​… ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ದಿನದಂದೇ ನಡೆಯಿತು ಘೋರ ದುರಂತ| Shock

Share This Article

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…