Sai Pallavi: ಟಾಲಿವುಡ್ ಸ್ಟಾರ್ ಹೀರೋಯಿನ್ ಸಾಯಿ ಪಲ್ಲವಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ಭಾರೀ ಜನಮನ್ನಣೆ ಗಳಿಸಿರುವ ಈ ಚೆಲುವೆ, ಇತ್ತೀಚೆಗಷ್ಟೇ ಅಮರನ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಸಕ್ಸಸ್ ಗಳಿಸಿದ್ದಾರೆ.
ದಕ್ಷಿಣ ಚಿತ್ರರಂಗದಲ್ಲಿ ತನಗೊಂದು ವಿಶೇಷವಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಾಯಕಿ ಸಾಯಿ ಪಲ್ಲವಿ. ತನ್ನ ಸೌಂದರ್ಯ ಮತ್ತು ನಟನೆಯಿಂದ ಬೆಳ್ಳಿತೆರೆಯಲ್ಲಿ ಜಾದೂ ಮಾಡಿದ ಈ ನಾಯಕಿ ಹೆಚ್ಚಾಗಿ ವಿವಾದಗಳಿಂದ ದೂರವಿರುತ್ತಾರೆ. ಆದರೆ ಆಕೆಯ ಬಗ್ಗೆ ಯಾವಾಗಲೂ ವದಂತಿಗಳಿವೆ. ಸಾಯಿ ಪಲ್ಲವಿ ಅವರು ಇದೇ ಮೊದಲ ಬಾರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ…
ರಾಮಾಯಣ ಚಿತ್ರಕ್ಕಾಗಿ ಸಾಯಿ ಪಲ್ಲವಿ ಅನೇಕ ಅಭ್ಯಾಸಗಳನ್ನು ಬದಲಾಯಿಸಿದ್ದಾರೆ. ಈ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡಲು ನಾನ್ ವೆಜ್ ಬಿಟ್ಟಿದ್ದಾರೆ ಎಂಬುದೇ ದೊಡ್ಡ ಸುದ್ದಿಯಾಗಿದೆ. ಇಷ್ಟು ದಿನ ಈ ಸುದ್ದಿಗೆ ಪ್ರತಿಕ್ರಿಯಿಸದ ಸಾಯಿ ಪಲ್ಲವಿ ತಾಳ್ಮೆ ಕಳೆದುಕೊಂಡರು, ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದರು. ಆಧಾರ ರಹಿತ ವದಂತಿಗಳನ್ನು ಬರೆದರೆ ಎಷ್ಟೇ ದೊಡ್ಡ ಕಂಪನಿಯಾದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು.
Most of the times, Almost every-time, I choose to stay silent whenever I see baseless rumours/ fabricated lies/ incorrect statements being spread with or without motives(God knows) but it’s high-time that I react as it keeps happening consistently and doesn’t seem to cease;… https://t.co/XXKcpyUbEC
— Sai Pallavi (@Sai_Pallavi92) December 11, 2024
“ನನ್ನ ಬಗ್ಗೆ ಸಾಕಷ್ಟು ವದಂತಿಗಳಿವೆ. ಅದು ಬಂದಾಗಲೆಲ್ಲಾ ನಾನು ಮೌನವಾಗಿರುತ್ತಿದ್ದೆ. ಏಕೆಂದರೆ ಸತ್ಯ ಏನೆಂದು ದೇವರಿಗೆ ಗೊತ್ತು. ಆದರೆ ನಾನು ಮೌನ ವಹಿಸುತ್ತಿದ್ದೇನೆ ಎಂದು ಇಂತಹ ವದಂತಿಗಳನ್ನು ಬರೆಯಲಾಗುತ್ತಿದೆ. ಈಗ ಪ್ರತಿಕ್ರಿಯಿಸುವ ಸಮಯ. ನನ್ನ ಸಿನಿಮಾಗಳ ರಿಲೀಸ್, ಜಾಹೀರಾತು, ನನ್ನ ಕೆರಿಯರ್ ಹೀಗೆ ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸಿದರೆ.. ಎಷ್ಟೇ ದೊಡ್ಡ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಇಷ್ಟು ವರ್ಷ ಸಹಿಸಿಕೊಂಡಿದ್ದೇನೆ. ಆದರೆ ಇನ್ನು ಮುಂದೆ ಇಂತಹ ಕಸದ ಕಥೆಗಳನ್ನು ನೋಡಲು ನಾನು ತಯಾರಿಲ್ಲ” ಎಂದು ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದಾರೆ.