ವಿಜಯವಾಣಿ ಸುದ್ದಿಜಾಲ ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ “ಕಾಂತಾರ’ದ ಪ್ರೀಕ್ವೆಲ್ “ಭಾಗ 1′ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಕುಂದಾಪುರದಲ್ಲಿ ಬೃಹತ್ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಚಿತ್ರದಲ್ಲಿ ದೇಶ-ವಿದೇಶಗಳ ಹಲವಾರು ಮಂದಿ ಕಲಾವಿದರು, ತಂತ್ರತಜ್ಞರು ಕೆಲಸ ಮಾಡುತ್ತಿರುವುದು ವಿಶೇಷ. ಇದೀಗ “ಆರ್ಆರ್ಆರ್’, “ಮಣಿಕಾರ್ಣಿಕಾ’ ಚಿತ್ರಗಳ ಖ್ಯಾತಿಯ ಸಾಹಸ ನಿರ್ದೇಶಕ ಟೊಡೊರ್ ಲಜರೊವ್ “ಕಾಂತಾರ’ ಟೀಮ್ ಸೇರಿಕೊಂಡಿದ್ದಾರೆ.
ಬಲ್ಗೇರಿಯಾ ಮೂಲದ ಟೊಡೊರ್ “ಹೆಲ್ಬಾಯ್’, “ಮಾರ್ಕೊಪೋಲೋ’, “ಟ್ರಾಯ್’ ಸೇರಿ 70ಕ್ಕೂ ಹೆಚ್ಚು ಹಾಲಿವುಡ್ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಸಾಹಸ ನಿರ್ದೇಶಿಸಿದ್ದಾರೆ. ಇದೀಗ “ಕಾಂತಾರ ಭಾಗ 1′ ಚಿತ್ರದಲ್ಲಿ ಎರಡು ಪ್ರಮುಖ ಆ್ಯಕ್ಷನ್ ಸನ್ನಿವೇಶಗಳ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕಾಗಿ ದೇಹ ಹುರಿಗೊಳಿಸಿಕೊಂಡಿರುವ ನಾಯಕ ರಿಷಬ್ ಶೆಟ್ಟಿ ಕಳರಿಪಾಯುಟ್ಟು ಸಮರ ಕಲೆ ತರಬೇತಿ ಪಡೆದಿದ್ದಾರೆ.
ಎಲ್ಲವೂ ಅಂದುಕೊಂಡಂತಾದರೆ, ಚಿತ್ರ 2025ರ ಜೂನ್ ಒಳಗೆ ಪ್ಯಾನ್ ಇಂಡಿಯಾ ತೆರೆಗೆ ಬರಲಿದೆ. “ಕಾಂತಾರ’ ಜತೆಗೆ ರಿಷಬ್ ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶಿಸುತ್ತಿರುವ “ಹನುಮಾನ್’ ಚಿತ್ರದ ಸೀಕ್ವೆಲ್ “ಜೈ ಹನುಮಾನ್’ನಲ್ಲಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೆ ಸ್ಟ್ ಲುಕ್ ಬಿಡುಗಡೆಯಾಗಿದೆ.