ತಂಡ ಮುಖ್ಯ, ನಾನಲ್ಲ… Team India ಕೋಚ್​ ಗಂಭೀರ್ ಕುರಿತು ​ಅಚ್ಚರಿಯ ಹೇಳಿಕೆ ನೀಡಿದ ರಿಂಕು ಸಿಂಗ್​

Rinku Singh

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್​ ಇಂಡಿಯಾ (Team India) 86 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ಟೆಸ್ಟ್​ ಮಾದರಿಯಂತೆ ಟಿ20 ಸರಣಿಯನ್ನು (T20 Series) ವಶಪಡಿಸಿಕೊಂಡಿದೆ. ಪಾಕಿಸ್ತಾನದ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದ ಬಾಂಗ್ಲಾದೇಶವನ್ನು ಸಂಪೂರ್ಣವಾಗಿ ಬಗ್ಗುಬಡಿದ ಸೂರ್ಯಕುಮಾರ್ (Suryakumar)​ ಪಡೆ ಮುಂಬರುವ ಸರಣಿಗಳಿಗೆ ಭರ್ಜರಿ ತಯಾರಿ ನಡೆಸುತ್ತಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾ (Team India) ಆರಂಭದಲ್ಲಿ ಬೇಗನೆ ವಿಕೆಟ್​ ಕಳೆದುಕೊಂಡು ಅಲ್ಪ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಈ ವೇಳೆ ಜತೆಯಾದ  ಬ್ಯಾಟರ್​ಗಳಾದ ನಿತೀಶ್​ ರೆಡ್ಡಿ (Nitish Reddy) (74 ರನ್​, 34 ಎಸೆತ, 4 ಬೌಂಡರಿ, 7 ಸಿಕ್ಸರ್​), ರಿಂಕು ಸಿಂಗ್​ (Rinku Singh) (53 ರನ್​, 29 ಎಸೆತ, 5 ಬೌಂಡರಿ, 3 ಸಿಕ್ಸರ್​) ಕೆಲಕಾಲ ಬಾಂಗ್ಲಾ ಬೌಲರ್​ಗಳನ್ನು ಬೆಂಡೆತ್ತಿದ ಪರಿಣಾಮ ಗುರಿಯನ್ನು 200ರ ಗಡಿ ದಾಟಿಸುವ ಮೂಲಕ ಎದುರಾಳಿಗಳಿಗೆ ದೊಡ್ಡ ಮೊತ್ತದ ಟಾರ್ಗೆಟ್​ (target) ನೀಡಿದರು. ಇನ್ನೂ ಸ್ಪೋಟಕ ಬ್ಯಾಟಿಂಗ್​ ಆಡಿದ ರಿಂಕು ಸಿಂಗ್​ ಕೋಚ್​ ಗೌತಮ್​ ಗಂಭೀರ್​ (Coach Gautam Gambhir) ಪಂದ್ಯಕ್ಕೂ ಮುನ್ನ ಆಡಿದ ಮಾತುಗಳನ್ನು ನೆನಪಿಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ.

Nitish Singh

ಇದನ್ನೂ ಓದಿ: ನಮ್ಮ ಬೌಲರ್​ಗಳು ಪ್ರಭಾವಶಾಲಿಯಾಗಿದ್ದರು ಕೂಡ… ಭಾರತದ ಎದುರು ಸರಣಿ ಸೋಲಿನ ಬಳಿಕ Bangladesh ನಾಯಕ ಹೇಳಿದ್ದಿಷ್ಟು

ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ (Post Match Presentation) ಈ ಕುರಿತು ಮಾತನಾಡಿರವ ರಿಂಕು (Rinku Singh), ಪಂದ್ಯ ಶುರುವಾಗುವುದಕ್ಕೂ ಮುನ್ನ ಕೋಚ್​ ಗೌತಮ್​ ಗಂಭೀರ್​ ಎಲ್ಲರಿಗೂ ಅವರವರ ಆಟ ಆಡುವಂತೆ ಸಲಹೆ ನೀಡಿದರು. ನೀವು ಹೋಗಿ ಚೆಂಡನ್ನು ಹೊಡೆಯುತ್ತಿರಿ ಎಂದು ಹೇಳಿದರು. ಅವರು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಮೊದಲು ಬ್ಯಾಟಿಂಗ್​ ಮಾಡುವಾಗ ಬಾಲ್​ ವಿಕೆಟ್​ಗೆ ಹೆಚ್ಚಾಗಿ ಅಂಟಿಕೊಂಡಿತ್ತು. ಹೀಗಾಗಿ ಸಂಜು (Sanju Samson) ಹಾಗೂ ಸೂರ್ಯಕುಮಾರ್​ ಯಾದವ್​ (Suryakumar Yadav) ಬೇಗನೆ ಔಟಾದರು.

ನಾನು ಬ್ಯಾಟಿಂಗ್​ ಮಾಡಲು ತೆರಳಿದಾಗ ರೆಡ್ಡಿ (NItish Reddy) ನನಗೆ ಈ ವಿಚಾರವನ್ನು ಹೇಳಿದರು. ಉತ್ತಮ ಜತೆಯಾಟ ಕಟ್ಟುವ ನಿಟ್ಟಿನಲ್ಲಿ ನಾವು ನಮ್ಮ ಆಟವನ್ನು ಆಡಿದೆವು. ಮೊದಲಿಗೆ ನಾವು ಹೆಚ್ಚಾಗಿ ಸಿಂಗಲ್ಸ್​ ಕಡೆ ಫೋಕಸ್​ ಮಾಡಿದೆವು. ಆ ನಂತರ ನಿತೀಶ್​ ಒಂದು ಸಿಕ್ಸರ್​ 9Sixer) ಬಾರಿಸಿದರು. ಅಲ್ಲಿಂದ ನಾವು ವೇಗದ ಆಟಕ್ಕೆ ಹೆಚ್ಚಿನ ಒತ್ತು ನೀಡಿದೆವು. ಆ ಕ್ಷಣ ನನಗಿಂತ ಹೆಚ್ಚಾಗಿ ತಂಡ ಮುಖ್ಯವಾಗಿತ್ತು ಹೀಗಾಗಿ ನಾವು ಹೆಚ್ಚಿನ ರನ್​ ಗಳಿಸಿದೆವು. ಮುಂದಿನ ದಿನಗಳಲ್ಲಿ ಮೂರು ಮಾದರಿಗಳಲ್ಲಿ ಆಡುವ ವಿಶ್ವಾಸವಿದೆ ಎಂದು ರಿಂಕು ಸಿಂಗ್​ ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಹೇಳಿದ್ದಾರೆ.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…