‘ಕೋಪ, ಬೇಸರ’! ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ… ಆರ್​ಸಿಬಿ ವಿರುದ್ಧ ಅಚ್ಚರಿ ಹೇಳಿಕೆ ಕೊಟ್ಟ ಕ್ಯಾಪ್ಟನ್​ ರಜತ್​ | Rajat Patidar

blank

Rajat Patidar: ಇದೇ ಮೇ.17ರಿಂದ ಐಪಿಎಲ್​ 18ನೇ ಆವೃತ್ತಿ ಪುನಾರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಮತ್ತೊಮ್ಮೆ ಆರ್​ಸಿಬಿ ಮತ್ತು ಕೆಕೆಆರ್​ ಮುಖಾಮುಖಿಯಾಗಲಿದೆ. ಈಗಾಗಲೇ ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇಆಫ್​ಗೆ ಲಗ್ಗೆಯಿಡುವ ಅಪಾರ ವಿಶ್ವಾಸವನ್ನು ಹೊಂದಿದೆ. ಇದಕ್ಕೆ ಆಟಗಾರರ ಹುಮ್ಮಸ್ಸು, ಪ್ರದರ್ಶನವೇ ಕಾರಣ.

blank

ಇದನ್ನೂ ಓದಿ: ದಿನದಿಂದ ದಿನಕ್ಕೆ ದರದಲ್ಲಿ ಕುಸಿತ; ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ!? ಹೀಗಿದೆ ಕಾರಣ | Gold Price

ದ್ವಿತೀಯ ಇನ್ನಿಂಗ್ಸ್ ಶುರುವಿಗೂ ಮುನ್ನವೇ ಇದೀಗ ಹೊಸ ಬಾಂಬ್ ಸಿಡಿಸಿರುವ ಆರ್​ಸಿಬಿ ನಾಯಕ ರಜತ್ ಪಟೀದಾರ್​, “2022ರ ಹರಾಜು ಪ್ರಕ್ರಿಯೆ ಆರಂಭದ ಸಮಯದಲ್ಲಿ ನನಗೆ ಆರ್​ಸಿಬಿ ಫ್ರಾಂಚೈಸಿಯಿಂದ ಸಂದೇಶ ಬಂದಿತ್ತು. ನೀವು ರೆಡಿಯಿರಿ ನಿಮ್ಮನ್ನು ಹರಾಜಿನಲ್ಲಿ ಖರೀದಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆಗ ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ಆಳವಾದ ನಂಬಿಕೆ ಮೂಡಿತ್ತು. ಖಂಡಿತವಾಗಿ ಈ ಬಾರಿ ನನ್ನನ್ನು ಕರೆದುಕೊಳ್ಳುತ್ತಾರೆ. ನಾನು ಆರ್​ಸಿಬಿ ಪರ ಆಡಬಹುದು ಎಂದು. ಆದರೆ, ನುಡಿದಂತೆ ಅವರು ನಡೆಯಲಿಲ್ಲ. ಇದು ನನ್ನಲ್ಲಿ ಭಾರೀ ಬೇಸರ ಮೂಡಿಸಿತ್ತು ಹಾಗೂ ಕೆರಳಿಸಿತ್ತು” ಎಂದು ಇತ್ತೀಚಿಗೆ ನಡೆದ ಪಾಡ್​ಕಾಸ್ಟ್​ನಲ್ಲಿ ಹೇಳಿದ್ದಾರೆ.

ಚೊಚ್ಚಲ ಐಪಿಎಲ್​ ಕಪ್​

ಪ್ರಸಕ್ತ ವರ್ಷದ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಿರುವ ಹೊಸ ಕ್ಯಾಪ್ಟನ್​ ರಜತ್ ಪಾಟಿದಾರ್, ಐಪಿಎಲ್ 18ನೇ ಆವೃತ್ತಿಯ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಈ ಸೀಸನ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್​ಸಿಬಿ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆದ್ದು, ಮೂರು ಪಂದ್ಯಗಳನ್ನು ತವರಿನಲ್ಲಿ ಸೋತಿದೆ. ಪ್ರಸ್ತುತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್​ಸಿಬಿ ಈ ಬಾರಿಯಾದರೂ ಚೊಚ್ಚಲ ಐಪಿಎಲ್​ ಪ್ರಶಸ್ತಿ ಗೆದ್ದು ಸಂಭ್ರಮಿಸಲಿ ಎಂಬುದು ಅಸಂಖ್ಯಾತ ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ,(ಏಜೆನ್ಸೀಸ್).

ಮೇ.17, ಜೆರ್ಸಿ ನಂ.18! ಕ್ರಿಕೆಟ್​ ಪ್ರಿಯರಿಗೆ ‘ಕಿಂಗ್ ಕೊಹ್ಲಿ’ ಅಭಿಮಾನಿಗಳ ವಿಶೇಷ ಮನವಿ ಇದು | Virat Kohli

ದಿನದಿಂದ ದಿನಕ್ಕೆ ದರದಲ್ಲಿ ಕುಸಿತ; ಈ ತಿಂಗಳ ಅಂತ್ಯದೊಳಗೆ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ!? ಹೀಗಿದೆ ಕಾರಣ | Gold Price

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank