Pawan kalyan; ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ದಾಳಿಯನ್ನು ಇಡೀ ರಾಷ್ಟ್ರವೇ ಶ್ಲಾಘಿಸುತ್ತಿದೆ. ಇನ್ನೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ-ರಾಜಕಾರಣಿ ಆದ ಪವನ್ ಕಲ್ಯಾಣ್ ಕೂಡ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶಕ್ತಿಯುತ ದಾಳಿಗಳನ್ನು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಶಸ್ತ್ರ ಪಡೆಗಳ ಧೈರ್ಯಶಾಲಿ ನಾಯಕತ್ವಕ್ಕೆ ಕೃತಜ್ಞತೆ ತಿಳಿಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದಕ ದಾಳಿ; ವಿಮಾನ ವಿಳಂಬದ ಬಗ್ಗೆ ಸೂಚನೆ ನೀಡಿದ ಬೆಂಗಳೂರು ವಿಮಾನ ನಿಲ್ದಾಣ| airport
वीरता जहाँ पर नहीं, पुण्य का क्षय है।
वीरता जहाँ पर नहीं, स्वार्थ की जय है।।
– Dinakarदशकों तक सहनशीलता… सहनशीलता!
अत्यधिक सहन के बाद मौन बैठी संपूर्ण भारतवर्ष को "ऑपरेशन सिंदूर" के… pic.twitter.com/fDMsq638Pr
— Pawan Kalyan (@PawanKalyan) May 7, 2025
ಪವನ್ ಕಲ್ಯಾಣ್ ಭಾರತೀಯ ಸಶಸ್ತ್ರ ಪಡೆಗಳ ಆಪರೇಷನ್ ಸಿಂಧೂರ್ ಅನ್ನು ಶ್ಲಾಘಿಸಿದ್ದು , ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವ ಕಾರ್ಯಾಚರಣೆಯ ಬಗ್ಗೆ ಮಾಹಿತಿಯಿಲ್ಲದ ಕಾಮೆಂಟ್ಗಳನ್ನು ಮಾಡದಂತೆ ಒತ್ತಾಯಿಸಿದ್ದಾರೆ. ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ತಮ್ಮ ಪೋಸ್ಟ್ಗಳಲ್ಲಿ ಜಾಗರೂಕರಾಗಿರಬೇಕು. ಯಾವುದೇ ವಿಷಯವು ರಾಷ್ಟ್ರದ ವಿರುದ್ಧವಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ.
ಪವನ್ ಕಲ್ಯಾಣ್ ಹೇಳಿದ್ದೇನು?
ತೆಲುಗು ಸೂಪರ್ಸ್ಟಾರ್ ಪವನ್ ಕಲ್ಯಾಣ್ ಇಂದು (7) ತಮ್ಮ ‘ಎಕ್ಸ್’ ನಲ್ಲಿ ಪ್ರಧಾನಿ ಮೋದಿ ಮತ್ತು ಭಾರತೀಯ ಸೈನ್ಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಶೌರ್ಯವಿಲ್ಲದಿರುವಲ್ಲಿ ಸದ್ಗುಣದ ಅವನತಿ ಇರುತ್ತದೆ. ಶೌರ್ಯವಿಲ್ಲದಿರುವಲ್ಲಿ ಸ್ವಾರ್ಥವು ಜಯಗಳಿಸುತ್ತದೆ. ಆಪರೇಷನ್ ಸಿಂಧೂರ್ ಮೂಲಕ ಇಡೀ ಭಾರತ ರಾಷ್ಟ್ರದಲ್ಲಿ ಶೌರ್ಯದ ಚೈತನ್ಯವನ್ನು ಪುನರುಜ್ಜೀವನಗೊಳಿಸಿದ ಮೂರು ಸಶಸ್ತ್ರ ಪಡೆಗಳ ಧೈರ್ಯಶಾಲಿ ನಾಯಕತ್ವಕ್ಕೆ ಮತ್ತು ಅವರೊಂದಿಗೆ ಅಚಲವಾಗಿ ನಿಂತ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು, ನಾವು ಯಾವಾಗಲೂ ನಿಮ್ಮೊಂದಿಗಿದ್ದೇವೆ. ಜೈ ಹಿಂದ್ ಎಂದು ಪವನ್ ಕಲ್ಯಾಣ್ ಬರೆದುಕೊಂಡಿದ್ದಾರೆ.
(ಏಜೆನ್ಸೀಸ್)