ಕುಕ್ಕೆ ಪುರಾಧೀಶನಿಗೆ ನೂತನ ಬೆಳ್ಳಿ ಪಲ್ಲಕ್ಕಿ : ಬಾಗಲಕೋಟೆಯ ಭಕ್ತ ನಾಗರಾಜ ಕುಲಕರ್ಣಿ ಅವರ ಸೇವೆ : 15ರಂದು ಪುರ ಪ್ರವೇಶ

blank

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿ ಪಲ್ಲಕ್ಕಿಯನ್ನು ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸೇವಾರೂಪದಲ್ಲಿ ಸಮರ್ಪಣೆ ಮಾಡಲಿದ್ದಾರೆ.

17 ಲಕ್ಷ 65 ಸಾವಿರದ 200 ರೂ. ವೆಚ್ಚದಲ್ಲಿ ಪಲ್ಲಕ್ಕಿ ರಚನೆಯಾಗಿದೆ. ಶ್ರೀ ದೇವಳದ ಬೆಳ್ಳಿಯ ವಸ್ತುಗಳ ಕೆಲಸ ನಿರ್ವಹಿಸುವ ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕ್ಕಿಯನ್ನು ನಿರ್ಮಿಸುತ್ತಿದ್ದಾರೆ. ಈಗ ಇರುವ ಪಲ್ಲಕ್ಕಿಯಂತೆ ನೂತನ ಪಲ್ಲಕ್ಕಿ ನಿರ್ಮಾಣಗೊಳ್ಳಲಿದ್ದು ಡಿ.16ರಂದು ಅರ್ಪಣೆಯಾಗಲಿದೆ.

ಶ್ರೀ ದೇವರ ಪರಮ ಭಕ್ತರು: ಮೂಲತಃ ಬಾಗಲಕೋಟೆಯ ಉದ್ಯಮಿ ನಾಗರಾಜ ಕುಲಕರ್ಣಿ ಮತ್ತು ಕುಟುಂಬಸ್ಥರು ಶ್ರೀ ದೇವರ ಪರಮ ಭಕ್ತರು. ಪ್ರತಿವರ್ಷ ದೇವಳಕ್ಕೆ ಆಗಮಿಸುತ್ತಿದ್ದು ದೇವರ ಆಶೀರ್ವಾದದಿಂದ ಗಣನೀಯವಾದ ಅಭಿವೃದ್ಧಿ ಉಂಟಾಗಿತ್ತು. ಆದುದರಿಂದ ಶ್ರೀ ದೇವಳಕ್ಕೆ ಏನಾದರೂ ಒಂದು ಸೇವೆ ನೆರವೇರಿಸುವ ಆಕಾಂಕ್ಷೆ ಇವರಿಗಿತ್ತು. ಈ ವರ್ಷ ನವೆಂಬರ್‌ನಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಅವರು ಕುಕ್ಕೆ ಸುಬ್ರಹ್ಮಣ್ಯದ ಅವರ ಆತ್ಮೀಯ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ ಅವರಲ್ಲಿ ತಮ್ಮ ಆಸೆ ಹೇಳಿದ್ದರು. ಶ್ರೀಕುಮಾರ್ ಅವರು ದೇವಳದ ಕಾರ್ಯನಿರ್ವಹಣಾಧಿಕಾರಿ ಅವರಲ್ಲಿ ಈ ಬಗ್ಗೆ ತಿಳಿಸಿ, ಬಳಿಕ ದೇವಳದ ಅಧೀಕ್ಷಕರ ಸಲಹೆಯಂತೆ ಶ್ರೀ ದೇವರ ಪಲ್ಲಕ್ಕಿಯ ಬಗ್ಗೆ ತಿಳಿದುಕೊಂಡರು. ಬಳಿಕ ಸಮಾಲೋಚನೆ ನಡೆಸಿ ನೂತನ ಪಲ್ಲಕ್ಕಿಯನ್ನೇ ಸೇವಾರೂಪದಲ್ಲಿ ದೇವರಿಗೆ ಕೊಡುವುದಾಗಿ ನಿರ್ಧರಿಸಿದರು.

ವೀಳ್ಯ ನೀಡಿಕೆ: ಸೇವಾರ್ಥಿಯಾದ ನಾಗರಾಜ ಕುಲಕರ್ಣಿ ಅವರಿಗೆ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ದೇವರ ಗರ್ಭಗುಡಿಯ ಮುಂಭಾಗ ಪ್ರಾರ್ಥನೆ ಮಾಡಿ ಪ್ರಸಾದ ನೀಡಿ ರಚನೆಗೆ ವೀಳ್ಯ ನೀಡಿದರು. ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್.ಗಲಗಲಿ ಜಮಖಂಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಸೇವಾರ್ಥಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್ ಉಪಸ್ಥಿತರಿದ್ದರು.

ಹಿಂದಿನದರ ತದ್ರೂಪ

ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಲ್ಲಿ ನೂತನ ಪಲ್ಲಕ್ಕಿ ಸೇವಾ ರೂಪದಲ್ಲಿ ನೀಡುವ ಬಗ್ಗೆ ತಿಳಿಸಿದ್ದು, ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರಲ್ಲಿ ಈ ಬಗ್ಗೆ ಕೇಳಲಾಗಿತ್ತು. ಅವರು ಈ ಹಿಂದಿನ ಪಲ್ಲಕ್ಕಿಯಂತೆ ನೂತನ ಪಲ್ಲಕ್ಕಿ ಇರಬೇಕು. ಅದರ ಆಯ, ಕೆತ್ತನೆ, ವಿಸ್ತೀರ್ಣ ಇತ್ಯಾದಿಗಳು ಈ ಹಿಂದಿನ ಪಲ್ಲಕ್ಕಿ ಇದ್ದಂತೆ ಸಂಪ್ರದಾಯ ಪ್ರಕಾರ ನಿರ್ಮಿಸಬೇಕು. ಯಾವುದೇ ಬದಲಾವಣೆ ಆಗಬಾರದು ಎಂದು ಸಲಹೆ ನೀಡಿದರು. ಬಳಿಕ ಸುಧಾಕರ ಡೋಂಗ್ರೆ ಮತ್ತು ಶಿಷ್ಯ ವೃಂದ ಕೆಲಸ ಆರಂಭಿಸಿದರು.

ಆಕರ್ಷಕ ಕೆತ್ತನೆ

ಈಗಿರುವ ಪಲ್ಲಕ್ಕಿಯಲ್ಲಿರುವಂತೆ ಆಕರ್ಷಕ ಬೆಳ್ಳಿಯ ಕೆತ್ತನೆಗಳು ನೂತನ ಪಲ್ಲಕ್ಕಿಯಲ್ಲಿದೆ. ಆರಂಭದಲ್ಲಿ ಮರದ ಪಲ್ಲಕ್ಕಿಯನ್ನು ನಿರ್ಮಿಸಿ ಅದಕ್ಕೆ ಬೆಳ್ಳಿಯ ಕೆತ್ತನೆ ಅಳವಡಿಸಲಾಗುವುದು. ಬೆಳ್ಳಿಯ ನೆಗಳೆ ಬಾಯಿ, ಮುಂಭಾಗದಲ್ಲಿ, ಒಳ ಭಾಗದಲ್ಲಿ ದೊಡ್ಡ, ಮಧ್ಯಮ ಗಾತ್ರದ ಮತ್ತು ಚಿಕ್ಕ ಬೆಳ್ಳಿಯ ಗೊಂಡೆಯನ್ನೊಳಗೊಂಡ ಜಾಲರಿ, ಬೆಳ್ಳಿಯ ಗೊಂಡೆ ಮಾಲೆ, ಗಣಪತಿ, ನಾಗ, ನವಿಲು, ಕುಕ್ಕುಟವನ್ನು ಈ ಹಿಂದಿನ ಪಲ್ಲಕ್ಕಿಯಲ್ಲಿ ಇರುವಂತೆ ಕೆತ್ತನೆ ಮಾಡಲಾಗಿದೆ. ಹಿಂದಿನ ಪಲ್ಲಕ್ಕಿಯ ತದ್ರೂಪದಂತೆ ನೂತನ ಪಲ್ಲಕ್ಕಿ ಕಾಣಿಸುತ್ತಿದ್ದು, ಒಂದು ತಿಂಗಳ ಕಾಲಾವಧಿಯಲ್ಲಿ ರಚನೆಯಾಗಿದೆ.

16ರಂದು ದೇವರಿಗೆ ಅರ್ಪಣೆ

ನೂತನ ಬೆಳ್ಳಿಯ ಪಲ್ಲಕ್ಕಿ ಡಿ.15ರಂದು ಬೆಳಗ್ಗೆ ಕುಕ್ಕೆ ಪುರ ಪ್ರವೇಶಿಸಲಿದೆ. ಕಾಶಿಕಟ್ಟೆ ಬಳಿಯಿಂದ ಶ್ರೀ ದೇವಳದ ತನಕ ಮೆರವಣಿಗೆಯಲ್ಲಿ ಪಲ್ಲಕ್ಕಿಯನ್ನು ಕೊಂಡೊಯ್ಯಲಾಗುವುದು. ಮಂಗಳವಾದ್ಯ, ಚೆಂಡೆ, ಬ್ಯಾಂಡ್, ಬಿರುದಾವಳಿಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. 16ರಂದು ಶ್ರೀ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ವಿವಿಧ ವೈದಿಕ ವಿಧಿವಿಧಾನಗಳ ಮೂಲಕ ಪಲ್ಲಕ್ಕಿಯನ್ನು ದೇವರಿಗೆ ಸಮರ್ಪಿಸಲಿದ್ದಾರೆ.

ಲೈನ್‌ಸೇಲ್‌ಗೆ ಬಂದಿದ್ದ ಇಬ್ಬರನ್ನು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು : ವಂಚಕರೆಂದು ಅನುಮಾನ : ಸ್ಕ್ರಾಚ್ ಆಂಡ್ ವಿನ್ ಕೂಪನ್ ಪ್ರಚಾರ

ಕಾರು ಗುದ್ದಿ ಉದ್ಯಮಿಗೆ ಗಾಯ

Share This Article

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…

ಈ 3 ರಾಶಿಯಲ್ಲಿ ಜನಿಸಿದವರನ್ನು ಶಾಂತಿಯ ಪ್ರತಿರೂಪ ಎಂದು ಹೇಳಲಾಗುತ್ತೆ! ನೀವು ಯಾವ ರಾಶಿಯವರು? Zodiac Signs

Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ…

Summer Tips: ಬೇಸಿಗೆಯಲ್ಲಿ ಕೆಟ್ಟ ಬೆವರು ವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Summer Tips: ಬೇಸಿಗೆಯಲ್ಲಿ ಬೆವರು ವಾಸನೆಯನ್ನು ತಪ್ಪಿಸಲು, ನೀವು ಪ್ರತಿದಿನ ಸ್ನಾನ ಮಾಡುವುದು ಮತ್ತು ನಿಯಮಿತವಾಗಿ…