ಪಾಕಿಸ್ತಾನಿ ಸೆಲೆಬ್ರಿಟಿಗಳ ನಿಷ್ಠೆಯನ್ನು ಪ್ರಶ್ನಿಸಿದ ಪಾಕ್​​ ನ್ಯೂಸ್​​ ಆ್ಯಂಕರ್​​ ಟೀಕೆ ಈಗ ಟ್ರೆಂಡಿಂಗ್​​| Video Viral

Video Viral

Video Viral: ಪಹಲ್ಗಾಮ್​ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯ ನಂತರ, ಹಲವಾರು ಭಾರತೀಯ ಸೆಲೆಬ್ರಿಟಿಗಳು ಸರ್ಕಾರ ಮತ್ತು ಮಿಲಿಟರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಜನಪ್ರಿಯ ಪಾಕಿಸ್ತಾನಿ ಸುದ್ದಿ ನಿರೂಪಕಿ ನಾದಿಯಾ ಖಾನ್ ತಮ್ಮ ದೇಶದ ಸೆಲೆಬ್ರಿಟಿಗಳ ನಿಷ್ಠೆಯನ್ನು ಪ್ರಶ್ನಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ನೆಟ್ಟಿಗರು ಕಾಮೆಂಟ್​​​ ಮಳೆ ಸುರಿಸಿದ್ದಾರೆ. ಆ ಬಗ್ಗೆ ಇಲ್ಲದೆ ನೋಡಿ ಮಾಹಿತಿ.

blank

ಇದನ್ನೂ ಓದಿ: ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ; ಮುಂದಿನ ಐಪಿಎಲ್​ ಪಂದ್ಯಗಳು ರದ್ದು!? ಈ ಕುರಿತು ಬಿಸಿಸಿಐ ಹೇಳುವುದೇನು | IPL 2025

ಪಾಕಿಸ್ತಾನದ ಜನಪ್ರಿಯ ಸುದ್ದಿ ನಿರೂಪಕಿ ನಾದಿಯಾ ಖಾನ್ ತಮ್ಮ ದೇಶದ ಸೆಲೆಬ್ರಿಟಿಗಳಿಗೆ ಲೈವ್​​ನಲ್ಲಿ ಕುಳಿತು ಕೋಪದಿಂದ ಹೇಳಿದ ಮಾತುಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ. ಬಳಕೆದಾರರು ಇದನ್ನು ನಾಟಕ ಎಂದು ಟೀಕಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ, “ನೀವು ನಾಚಿಕೆಯಿಲ್ಲದವರು. ನೀವು ನಿಮ್ಮ ಫಾಲೋವರ್ಸ್, ನಿಮ್ಮ ಇಷ್ಟಗಳು ಮತ್ತು ನಿಮ್ಮ ಅಭಿಪ್ರಾಯಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ನಿಮಗೆ ನಾಚಿಕೆಯಾಗಬೇಕು. ನಿಮ್ಮ ದೇಶಕ್ಕೆ ಈಗ ನೀವು ಬೇಕು. ನೀವು ಎಲ್ಲಿದ್ದೀರಿ? ಈ ಜನರು ನಾಚಿಕೆಯಿಲ್ಲದವರು ಮತ್ತು ಅವರನ್ನು ಕರೆಯಬೇಕು. ನಾವು ಅವರನ್ನು ತಾರೆಗಳನ್ನಾಗಿ ಮಾಡಿದ್ದೇವೆ ಮತ್ತು ಈಗ, ಅವರು ನಮ್ಮ ಪ್ರದರ್ಶನಗಳು ನಿಂತುಹೋಗಿವೆ,’ ಎಂಬಂತಹ ವಿಷಯಗಳ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಗಡಿಯಲ್ಲಿ ನಿಂತುಕೊಳ್ಳಿ, ಯುದ್ಧದಲ್ಲಿ ಹೋರಾಡಿ, ನೀವು ಏನು ಮಾಡುತ್ತೀರಿ? ನೀವು ಸರಿಯಾಗಿ ಬೆಂಬಲವನ್ನು ತೋರಿಸಲು ಸಹ ಸಾಧ್ಯವಿಲ್ಲ.”

“ನಮ್ಮ ಸೈನಿಕರು ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ. ನೀವು ಸುರಕ್ಷಿತವಾಗಿ ಕುಳಿತು ಶಾಂತಿಯುತವಾಗಿ ನಿದ್ರಿಸುತ್ತಿರುವಾಗ, ನಮ್ಮ ಸೈನಿಕರು ನಮ್ಮ ನೀರು, ಭೂಮಿ ಮತ್ತು ಆಕಾಶದಲ್ಲಿ ನಿರಂತರವಾಗಿ ಕಾವಲು ಕಾಯುತ್ತಿದ್ದಾರೆ. ಅವರು ಮನೆಗೆ ಹೋಗಲ್ಲ. ಅವರು ಮೊದಲು ಗುಂಡುಗಳನ್ನು ಎದುರಿಸುತ್ತಾರೆ. ನಾವು ಏನು ಮಾಡುತ್ತಿದ್ದೇವೆ? ಎಂದು ಲೈವ್​ ಟಿವಿ ಪ್ರಸಾರದಲ್ಲಿ ಕುಳಿತು ತಮ್ಮ ದೇಶದ ಸೆಲೆಬ್ರಿಟಿಗಳಗೆ ಕೋಪದಿಂದ ಪ್ರಶ್ನಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಒಬ್ಬ ನೆಟ್ಟಿಗ, “ಮೇಡಂ, ದಯವಿಟ್ಟು ಸ್ವಲ್ಪ ನೀರು ಕುಡಿಯಿರಿ, ಓಹ್ ಕ್ಷಮಿಸಿ, ಕ್ಷಮಿಸಿ” ಎಂದು ತಮಾಷೆ ಮಾಡಿದ್ದಾನೆ. ಮತ್ತೊಬ್ಬರು, “ಯುದ್ಧ ಇನ್ನು ಮುಂದೆ ಗಡಿಯಲ್ಲಿಲ್ಲ, ಲಾಹೋರ್, ಪಿಂಡಿ ಮತ್ತು ಕರಾಚಿಯಲ್ಲಿ ನಡೆಯುತ್ತಿದೆ ಎಂದು ಯಾರಾದರೂ ಅವಳಿಗೆ ಹೇಳಿ” ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿದ ಕೇವಲ ಒಂದು ದಿನದ ನಂತರ, ಪಾಕಿಸ್ತಾನವು ಮೇ 7-8 ರ ರಾತ್ರಿ ಜಮ್ಮು, ಜೈಸಲ್ಮೇರ್ ಮತ್ತು ಶ್ರೀನಗರ ಸೇರಿದಂತೆ ಭಾರತೀಯ ನಗರಗಳ ಮೇಲೆ ಡ್ರೋನ್ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಳ್ಳಲ ಮುಂದಾಗಿತ್ತು, ಆದರೆ ಅವರ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.(ಏಜೆನ್ಸೀಸ್​)

ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ; ಮುಂದಿನ ಐಪಿಎಲ್​ ಪಂದ್ಯಗಳು ರದ್ದು!? ಈ ಕುರಿತು ಬಿಸಿಸಿಐ ಹೇಳುವುದೇನು | IPL 2025

Share This Article

ಪದೇಪದೆ ವಿವಾಹದ ಪ್ರಸ್ತಾಪಗಳು ಮುರಿದು ಬೀಳುತ್ತಿದೆಯೇ? ಈ ಕ್ರಮಗಳು ಅನುಸರಿಸಿ; ಮದುವೆಯ ಅಡೆತಡೆಗಳನ್ನು ನಿವಾರಿಸಿ | Marriage Proposals

Marriage Proposals : ಜೀವನದ ಅತಿದೊಡ್ಡ ತಿರುವು ಎಂದ್ರೆ ಅದು ಮದುವೆ. ಮದುವೆ ಎಂದ್ರೆ ಎಲ್ಲರಿಗೂ…

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…