ತಿರುಪತಿ: ತಿರುಪತಿಗೆ (Tirupati) ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು (Laddu) ಪ್ರಸಾದವನ್ನು ಪ್ರಾಣಿಗಳ ಕೊಬ್ಬನ್ನು (Animal Fat) ಬಳಸಿ ಮಾಡಲಾಗುತ್ತಿದೆ ಎಂಬ ಆರೋಪವೂ ವಿಶ್ವವ್ಯಾಪಿ ಸದ್ದು ಮಾಡಿದ್ದು, ಭಾರತದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಲಡ್ಡು ವಿವಾದ ಆರುವ ಮುನ್ನವೇ ಇದೀಗ ಪ್ರಸಾದದಲ್ಲಿ (Prasada) ಹುಳು ಸಿಕ್ಕಿದೆ ಎಂದು ಭಕ್ತರು ಆರೋಪ ಮಾಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದ.
ವೈರಲ್ ಆಗಿರುವ ವಿಡಿಯೋವನ್ನು ನೋಡುವುದಾದರೆ, ವಾರಂಗಲ್ನಿಂದ ಬಂದಿರುವ ಭಕ್ತರೊಬ್ಬರು ದೇವರ ದರ್ಶನ ಮುಗಿಸಿ ಆ ಬಳಿಕ ಅನ್ನ ಪ್ರಸಾದವನ್ನು (Anna Prasadam) ಸ್ವೀಕರಿಸಿದ್ಧಾರೆ. ಭಕ್ತರಿಗೆ ಪ್ರಸಾದ ಎಂದು ನೀಡಲಾಗಿದ್ದ ಮೊಸರನ್ನದಲ್ಲಿ (Curd Rice) ಹುಳು ಪತ್ತೆಯಾಗಿದ್ದು, ಈ ವಿಚಾರವನ್ನು ಅಡುಗೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಬ್ಬಂದಿ ಕೆಲವೊಮ್ಮೆ ಈಗಾಗುತ್ತದೆ ಎಂದು ಹೇಳಿದ್ದಾರೆ.
బ్రేకింగ్ న్యూస్
— Telugu Scribe (@TeluguScribe) October 5, 2024
తిరుమలలో అన్నదాన కేంద్రంలో పెరుగు అన్నంలో జెర్రి
టిటిడి మాధవ నిలయం అన్నదాన కేంద్రంలో భోజనం చేస్తున్న భక్తుని ఆకులో జెర్రి
అన్నప్రసాదంలో జెర్రి కనపడటంపై టిటిడి యాజమాన్యాన్ని ప్రశ్నించిన భక్తలు
టిటిడి సిబ్బంది నిర్లక్ష్యపు సమాధానం చెప్పడమే కాకుండా మమ్మల్ని… pic.twitter.com/yJXwbBL5tj
ಇದನ್ನೂ ಓದಿ: Fire Accident| ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಜೀವ ದಹನ
ಸರ್ಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದ್ದಾರೆ. ವಿಷಯ ತಿಳಿದ ನಂತರ ದೇವಾಲಯದ ಸಿಬ್ಬಂದಿ ತಮ್ಮನ್ನು ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತ ಆರೋಪಿಸಿದ್ದಾರೆ. ಆದರೆ, ಭಕ್ತ ಮಾಡಿರುವ ಆರೋಪವನ್ನು TTD ನಿರಾಕರಿಸಿದ್ದು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಾಯ್ಡು, ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಆಹಾರ ಸುರಕ್ಷತೆ ಮತ್ತು ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಪಾಲಿಸುವಂತೆ ಆದೇಶಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮತ್ತು ಯಾತ್ರಿಕರಿಗೆ ನೀಡುವ ಆಹಾರದ ಪಾವಿತ್ರ್ಯತೆಯನ್ನು ರಕ್ಷಿಸುವಂತೆ ಸೂಚಿಸಿದ್ದಾರೆ.