ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೋಮಲ್ ಕುಮಾರ್ ಅಭಿನಯದ ನೃತ್ಯನಿರ್ದೇಶಕ ಮುರಳಿ ಮಾಸ್ಟರ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಸಿನಿಮಾ “ನಮೋ ಭೂತಾತ್ಮ’ 2014ರಲ್ಲಿ ರಿಲೀಸ್ ಆಗಿತ್ತು. ಅದಾಗಿ ಒಂಬತ್ತು ವರ್ಷಗಳ ನಂತರ ಈ ಜೋಡಿ ಸೀಕ್ವಲ್ನೊಂದಿಗೆ ವಾಪಸ್ಸಾಗಿದೆ. ಇತ್ತೀಚೆಗಷ್ಟೆ ಧ್ರುವ ಸರ್ಜಾ “ನಮೋ ಭೂತಾತ್ಮ 2′ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ಇದನ್ನೂ ಓದಿ: ನೀವು ನನಗಾಗಿ ಕಾದಿದ್ದೀರಿ, ನಾನು ನಿಮ್ಮ ಭೇಟಿಗಾಗಿ ಕಾಯುತ್ತಿರುತ್ತೇನೆ: ಎಲ್ಲರಿಗೂ ನಿರ್ದೇಶಕ ರಿಷಬ್ ಶೆಟ್ಟಿ ಆಹ್ವಾನ
ಕೋಮಲ್, “”ಲಿಂಗ’, “ಪಿಕೆ’ಯಂತಹ ಪರಭಾಷೆಯ ದೊಡ್ಡ ಸಿನಿಮಾಗಳು ಬಂದ ಕಾರಣ “ನಮೋ ಭೂತಾತ್ಮ’ ಚಿತ್ರ ನಿರೀಸಿದಷ್ಟು ಯಶಸ್ಸು ಕಾಣಲಿಲ್ಲ. ಆ ಬಳಿಕ ಮುರಳಿ ಮಾಸ್ಟರ್ಗೆ ಎರಡು ಬಾರಿ ನಿರ್ದೇಶಿಸಲು ಕೇಳಿದ್ದೆ, ಆದರೆ ಅವರು ಬಿಜಿಯಿದ್ದ ಕಾರಣ ಸಾಧ್ಯವಾಗಿರಲಿಲ್ಲ. ನನಗೆ ಮಕ್ಕಳು ಫ್ಯಾನ್ಸ್ ತುಂಬ ಇದ್ದಾರೆ. ಹೀಗಾಗಿ ಹಾರರ್ಗಿಂತ ಹೆಚ್ಚಾಗಿ ಕಾಮಿಡಿ ಈ ಸೀಕ್ವಲ್ನಲ್ಲಿರಲಿದೆ. ಹೆದರಿಸೋದಕ್ಕಿಂತ ಹೆಚ್ಚಾಗಿ ನಗಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ನನಗೆ ನಿದ್ದೆ ಬರುತ್ತಿಲ್ಲವೆಂದು ಕಣ್ಣೀರಿಟ್ಟ ನಟ ದುಲ್ಕರ್ ಸಲ್ಮಾನ್; ಭಾನುವಾರ ರಾತ್ರಿ ವಿಡಿಯೋ ಪೋಸ್ಟ್.. ತಕ್ಷಣ ಡಿಲೀಟ್
ನಿರ್ದೇಶಕ ಮುರಳಿ ಮಾಸ್ಟರ್, “ಕರೋನಾಗೆ ಮುನ್ನವೇ ಸಿನಿಮಾ ಕಥೆ ರೆಡಿಯಾಗಿತ್ತು. ಕೋಮಲ್ ಸರ್ಗೆ ಕಥೆ ಹೇಳಿದೆವು, ಅವರು ಖುಷಿಯಿಂದ ಒಪ್ಪಿಕೊಂಡು ಸಿನಿಮಾ ಮಾಡಿಕೊಟ್ಟರು. ಪ್ರತಿ ಹಂತದಲ್ಲೂ ನಮ್ಮ ಜತೆಗೆ ನಿಂತು, ಸಪೋರ್ಟ್ ಮಾಡಿದರು’ ಎಂದರು. ನಾಯಕಿ ಲೇಖಚಂದ್ರ, “ಕಷ್ಟಪಟ್ಟು ಎನ್ನುವುದಕ್ಕಿಂತ ಇಷ್ಟಪಟ್ಟು ಮಾಡಿದ ಚಿತ್ರವಿದು. ಟೀಸರ್ಗೂ ಮೀರಿದ ವಿಷಯಗಳು ಚಿತ್ರದಲ್ಲಿವೆ’ ಎಂದು ಹೇಳಿಕೊಂಡರು. ಕೋಮಲ್, ಲೇಖಚಂದ್ರ ಜತೆ ಹಾಸ್ಯನಟ ಗೋವಿಂದೇಗೌಡ, ಡಾನ್ಸರ್ ವರುಣ್ ಮತ್ತು ಮೋನಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ.